ಮುಖ್ಯಾಂಶದಲ್ಲಿ ಕೊಹ್ಲಿ, ಶಮಿ ಇದ್ದರೂ… ಭಾರತ ತಂಡದ ನಿಜವಾದ ಹೀರೋ ಈತನೇ: ಇಂಗ್ಲೆಂಡ್ ಆಟಗಾರನ ಹೇಳಿಕೆ

nasser hussain statement about rohit sharma: ಏಕದಿನ ವಿಶ್ವಕಪ್‌’ನಲ್ಲಿ ಭಾರತ ತಂಡ ಇದುವರೆಗೆ ಅದ್ಭುತ ಪ್ರದರ್ಶನ ನೀಡಿದ್ದು, ಎಲ್ಲಾ 10 ಪಂದ್ಯಗಳನ್ನು ಗೆದ್ದಿದೆ. ಕಳೆದ ದಿನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 70 ರನ್‌’ಗಳಿಂದ ಸೋಲಿಸುವ ಮೂಲಕ ಭಾರತ 12 ವರ್ಷಗಳ ನಂತರ ಮೊದಲ ಬಾರಿಗೆ ಫೈನಲ್ ತಲುಪಿದೆ.

Written by - Bhavishya Shetty | Last Updated : Nov 16, 2023, 04:40 PM IST
    • ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್
    • ಏಕದಿನ ವಿಶ್ವಕಪ್‌’ನಲ್ಲಿ ಭಾರತ ತಂಡ ಇದುವರೆಗೆ ಅದ್ಭುತ ಪ್ರದರ್ಶನ ನೀಡಿದೆ
    • ಭಾರತ 12 ವರ್ಷಗಳ ನಂತರ ಮೊದಲ ಬಾರಿಗೆ ಫೈನಲ್ ತಲುಪಿದೆ
ಮುಖ್ಯಾಂಶದಲ್ಲಿ ಕೊಹ್ಲಿ, ಶಮಿ ಇದ್ದರೂ… ಭಾರತ ತಂಡದ ನಿಜವಾದ ಹೀರೋ ಈತನೇ: ಇಂಗ್ಲೆಂಡ್ ಆಟಗಾರನ ಹೇಳಿಕೆ  title=
nasser hussain

World Cuo2023: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಅವರು ಪ್ರಸಕ್ತ ವಿಶ್ವಕಪ್‌’ನಲ್ಲಿ ನಿರಾತಂಕವಾಗಿ ಕ್ರಿಕೆಟ್ ಆಡುವ ಮೂಲಕ, ಭಾರತ ತಂಡದ ಸಂಸ್ಕೃತಿಯನ್ನು ಬದಲಿಸಿದ ನಾಯಕ ರೋಹಿತ್ ಶರ್ಮಾ ಅವರೇ ನಿಜವಾದ ಹೀರೋ ಎಂದು ಶ್ಲಾಘಿಸಿದ್ದಾರೆ.

ಏಕದಿನ ವಿಶ್ವಕಪ್‌’ನಲ್ಲಿ ಭಾರತ ತಂಡ ಇದುವರೆಗೆ ಅದ್ಭುತ ಪ್ರದರ್ಶನ ನೀಡಿದ್ದು, ಎಲ್ಲಾ 10 ಪಂದ್ಯಗಳನ್ನು ಗೆದ್ದಿದೆ. ಕಳೆದ ದಿನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 70 ರನ್‌’ಗಳಿಂದ ಸೋಲಿಸುವ ಮೂಲಕ ಭಾರತ 12 ವರ್ಷಗಳ ನಂತರ ಮೊದಲ ಬಾರಿಗೆ ಫೈನಲ್ ತಲುಪಿದೆ.

ಇದನ್ನೂ ಓದಿ: Viral News: ವಿರಾಟ್ ಕೊಹ್ಲಿ ಬಯೋಪಿಕ್..! ನಾಯಕ ಯಾರು ಗೊತ್ತೆ? 

ನಾಸರ್ ಹುಸೇನ್ ಸ್ಕೈ ಸ್ಪೋರ್ಟ್ಸ್‌ ಜೊತೆ ಮಾತನಾಡಿದ್ದು, “ನಾಳಿನ ಮುಖ್ಯಾಂಶಗಳು ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಮೊಹಮ್ಮದ್ ಶಮಿ ಬಗ್ಗೆ ಮಾತನಾಡುತ್ತವೆ. ಆದರೆ ಭಾರತ ತಂಡದ ನಿಜವಾದ ಹೀರೋ ಈ ಭಾರತೀಯ ತಂಡದ ಸಂಸ್ಕೃತಿಯನ್ನು ಬದಲಾಯಿಸಿದ ರೋಹಿತ್ ಶರ್ಮಾ. ಇವರು ಪಂದ್ಯಾವಳಿಯಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ್ದಾರೆ. ಪ್ರತಿ ಪಂದ್ಯದ ಆರಂಭದಲ್ಲಿ ಸ್ಫೋಟಕ ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ವೇದಿಕೆಯನ್ನು ಸೃಷ್ಟಿಸಿದ್ದಾರೆ. ಸೆಮಿಫೈನಲ್‌’ನಲ್ಲಿಯೂ ಸಹ 29 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಸಿಕ್ಸರ್‌’ಗಳ ಸಹಾಯದಿಂದ 47 ರನ್ ಗಳಿಸಿದ್ದರು” ಎಂದು ಹೇಳಿದ್ದಾರೆ.

“ಇಂದಿನ ನಿಜವಾದ ಹೀರೋ ರೋಹಿತ್ ಎಂದು ನಾನು ನಂಬುತ್ತೇನೆ. ಗುಂಪು ಹಂತ ಹಾಗೂ ನಾಕೌಟ್ ಹಂತದ ಪಂದ್ಯಗಳು ವಿಭಿನ್ನವಾಗಿದ್ದು, ನಾಕೌಟ್ ಹಂತದಲ್ಲೂ ನಿರಾತಂಕವಾಗಿ ಕ್ರಿಕೆಟ್ ಆಡಲಿದ್ದೇನೆ ಎಂಬುದನ್ನು ನಾಯಕ ತೋರಿಸಿಕೊಟ್ಟರು. ರೋಹಿತ್ ಶರ್ಮಾ ತಮ್ಮ ವರ್ತನೆಯೊಂದಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದರು” ಎಂದು ಶ್ಲಾಘಿಸಿದ್ದರು.

ಇದನ್ನೂ ಓದಿ: ಟೀಂ ಇಂಡಿಯಾ ಗೆದ್ದಿದ್ದು ಶಮಿ, ಅಯ್ಯರ್, ಕೊಹ್ಲಿಯಿಂದಲ್ಲ.. ಈತನಿಂದ; ಈತನೇ ಭಾರತದ ಶಕ್ತಿ!!

ರೋಹಿತ್ ಶರ್ಮಾ ಹೇಳಿಕೆ…

ಇನ್ನು ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, “ನಾನು ವಾಂಖೆಡೆಯಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಈ ಮೈದಾನದಲ್ಲಿ ಎಷ್ಟೇ ಸ್ಕೋರ್ ಇದ್ದರೂ ನೀವು ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ. ನಾವು ನಮ್ಮ ಕೆಲಸವನ್ನು ಪೂರ್ಣಗೊಳಿಸಬೇಕು ಮತ್ತು ಯೋಜನೆಗೆ ಬದ್ಧವಾಗಿರಬೇಕು. ನಮ್ಮ ಮೇಲೆ ಒತ್ತಡವಿದೆ ಎಂದು ತಿಳಿದಿದ್ದೆವು. ಇಂದು ಮೈದಾನದಲ್ಲಿ ಕಳಪೆ ಫೀಲ್ಡಿಂಗ್ ಮಾಡಿದ ನಂತರವೂ ನಾವು ತಾಳ್ಮೆ ಕಳೆದುಕೊಳ್ಳಲಿಲ್ಲ. ಇದು ಸುದೀರ್ಘ ಪಂದ್ಯಾವಳಿಯಾಗಿದ್ದು, ಒಂಬತ್ತು ಪಂದ್ಯಗಳಲ್ಲಿ ನಾವು ಉತ್ತಮ (ಫೀಲ್ಡಿಂಗ್) ಸಾಧನೆ ಮಾಡಿದ್ದೇವೆ ಮತ್ತು ಯಾವುದೇ ಪಂದ್ಯದಲ್ಲೂ ಈ ರೀತಿ ಸಂಭವಿಸುವ ಸಾಧ್ಯತೆ ಇದೆ. ನಾವು ನಮ್ಮ ಕೆಲಸವನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾಯಿತು ಎಂದು ನಮಗೆ ಸಂತೋಷವಾಗಿದೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News