ಚುನಾವಣೆ ಬಂದಾಗ ನಾನು ಬೆಂಗಳೂರಿನಿಂದ ಹೊರಗೆ ಸ್ಫರ್ಧಿಸಲು ಸಿದ್ಧ. ಸದ್ಯ ಅಶೋಕ್ ಇದ್ದಾರೆ, ಅವರಿಗೇ ಬೆಂಗಳೂರು ಜವಾಬ್ದಾರಿ ಕೊಡಿ. BBMP ಚುನಾವಣಾ ಸಿದ್ಧತಾ ಸಭೆಯಲ್ಲಿ ಸಚಿವ ಸೋಮಣ್ಣ ಅಚ್ಚರಿ ಹೇಳಿಕೆ.
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ. ಈ ಪ್ರಕರಣ ಖಂಡಿಸಿ 26ಕ್ಕೆ ಕೊಡಗು ಚಲೋ ಮಾಡ್ತೀವಿ. ಮುತ್ತಿಗೆ ವೇಳೆ ನಮಗೆ ಯಾರು ಟಚ್ ಮಾಡ್ತಾರೆ ನೋಡೋಣ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಆರ್.ಅಶೋಕ್ ಟಾಂಗ್ ಕೊಟ್ಟಿದ್ದಾರೆ.
ಪಠ್ಯ ಪುಸ್ತಕದಲ್ಲಿ ಉದ್ದೇಶಪೂರ್ವಕವಾಗಿ ನಾಡಿನ ಸಾಂಸ್ಕೃತಿಕ ನಾಯಕರಿಗೆ ಬಿಜೆಪಿ ಸರ್ಕಾರ ಮಾಡಿರುವ ಘನಘೋರ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದೆ. ಟಿಪ್ಪು ಸುಲ್ತಾನರ ವಿಷಯವನ್ನ ಮತ್ತೆ ಮುನ್ನಲೆಗೆ ತಂದು ವಿಷಯವನ್ನ ಡೈವರ್ಟ್ ಮಾಡಲು ಸಚಿವ ಆರ್ ಅಶೋಕ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿಯೇ ಟಿಪ್ಪು ಸುಲ್ತಾನ್ ಎಂದರೆ ಸಿದ್ರಾಮಯ್ಯನವರಿಗೆ ಮೈಮೇಲೆ ಬಂದವರಂತೆ ಆಡುತ್ತಾರೆ ಎಂದಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಟೀಕಾ ಪ್ರಹಾರ ನಡೆಸಿದ್ದಾರೆ.
'ಟಿಪ್ಪು ಸುಲ್ತಾನ್ ಎಂದಾಗ ಮೊದಲು ಮೈಮೇಲೆ ಬಂದದ್ದು ಬಿಜೆಪಿ ನಾಯಕರಿಗೆ.ಹತ್ತು ವರ್ಷಗಳ ಹಿಂದೆ ಈ ರೀತಿ ಮೈಮೇಲೆ ಬಂದಾಗಲೇ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಡಾ.ಶೇಖ್ ಅಲಿ ಅವರಿಂದ 425 ಪುಟಗಳ ಪುಸ್ತಕ ಬರೆಸಿ ಸರ್ಕಾರದಿಂದಲೇ ಪ್ರಕಟಿಸಿದ್ದು" ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದ ಬಿಸಿಬಿಸಿ ಚರ್ಚೆಯಲ್ಲಿರುವ ವಿಚಾರವಾಗಿದೆ. ಇದೇ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿ ನಡೆಸಿದರು. ವಿಪಕ್ಷಗಳು ವಿನಾಕಾರಣ ವಿವಾದ ಮಾಡಿದವರು. ರಾಮನ ಹೆಸರು ಹೇಳಲು ಇಷ್ಟವಿಲ್ಲದ್ದಕ್ಕೆ ಈಗ ಈ ವಿವಾದ ಶರುವಾಗಿದೆ ಎಂದು ಆರೋಪಿಸಿದರು.
ಚುನಾವಣೆ ವೇಳೆ ಈ ರೀತಿಯ ಗಿಮಿಕ್ ಕಾಂಗ್ರೆಸ್ ಗೆ ರಕ್ತಗತ. ಪಿಎಸ್ಐ ಹಗರಣ ಕಂಡು ಹಿಡಿದಿದ್ದೇ ಗೃಹ ಸಚಿವರು, ಇದನ್ನಕಾಂಗ್ರೆಸ್ ಗೃಹಸಚಿವರನ್ನು ಅಭಿನಂದಿಸಬೇಕಿತ್ತು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಸರ್ಕಾರದ ಬಗ್ಗೆ ಗುತ್ತಿಗೆದಾರರಿಗೆ ತೃಪ್ತಿ ಇದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.. ನಾವು ಆಡಳಿತ ಮಾಡಿರೋ ಅಂದಾಜು 10 ವರ್ಷ ಮಾಡಿರೋದು. ಕಾಂಗ್ರೆಸ್, ಜೆಡಿಎಸ್ ಆಡಳಿತ ಮಾಡಿರೋದು 60 ವರ್ಷ. ಕಾಂಗ್ರೆಸ್, ಜೆಡಿಸ್ ʻಅಣ್ತಮ್ಮʼ ಇದ್ದಂಗೆ. ಇವರಿಂದ ನಾವು ಪಾಠ ಕಲಿಯಬೇಕಾಗಿಲ್ಲ. ಗೃಹ ಸಚಿವ ಆರಗ ಸಮರ್ಥರು ಎಂದಿದ್ದಾರೆ..
ಎ ಟೀಂ, ಬಿ ಟೀಂ ಮಾತು ನಾವು ಕೇಳಲ್ಲ.. ಕಾಂಗ್ರೆಸ್, ಜೆಡಿಎಸ್ ಎ ಟೀಂ, ಬಿ ಟೀಂ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ. ನಮ್ಮ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು ಒಂದೇ ಬಾರಿ. ಉಳಿದ ಹೊಂದಾಣಿಕೆಯೆಲ್ಲಾ ಕಾಂಗ್ರೆಸ್ ಜೊತೆ. ನೀವೇ ಎ ಟೀಂ, ಬಿ ಟೀಂ ಆಗಿ ನಮ್ಮ ಮೇಲೆ ಏಕೆ ಆಪಾದನೆ ಮಾಡ್ತೀರಾ ಅಂತಾ ಅಶೋಕ್ ಪ್ರಶ್ನಿಸಿದ್ದಾರೆ..
ಸ್ವಾಮೀಜಿ ಆಗಿ ಯಾವುದೇ ಒಂದು ಪಕ್ಷದ ಏಜೆಂಟ್ ರೀತಿಯಲ್ಲಿ ಮಾತಾಡುವುದು ಸರಿಯಲ್ಲ ಎಂದು ಕಮಿಷನ್ ಆರೋಪ ಮಾಡಿದ್ದ ದಿಂಗಾಲೇಶ್ವರ ಸ್ವಾಮೀಜಿಗೆ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯನವರು ಅನುಭವಿ ರಾಜಕಾರಣಿ. ಅವರು ಸಹ ಮಠಗಳಿಗೆ ಹೋಗುತ್ತಾರೆ.ಅಲ್ಲಿಯೇ ಮಠಾಧೀಶರನ್ನು ಪ್ರಶ್ನೆ ಮಾಡಬಹುದಿತ್ತು.ಇಲ್ಲಿ ಬಂದು ಮಠಾಧೀಶರ ಬಟ್ಟೆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.