ರಾಜ್ಯದ ಹಲವು ಜಿಲ್ಲೆಗಳಲ್ಲಿ ಆವರಿಸಿದ ದಟ್ಟ ಮಂಜು
ಹಲವೆಡೆ ಮಂಜು ಮುಸುಕಿದ ವಾತಾವರಣ ನಿರ್ಮಾಣ
ಮುಂದಿನ 6 ದಿನಗಳವರೆಗೂ ಭಾರೀ ಮಳೆ ಮುನ್ಸೂಚನೆ
ಬೆಂಗಳೂರಲ್ಲಿ ಮಂಜು ಮುಸುಕಿದ ವಾತಾವರಣ
ಇಂದು ಮಧ್ಯಾಹ್ನ ಭಾರೀ ಮಳೆ ಸಾಧ್ಯತೆ
ಹವಾಮಾನ ಇಲಾಖೆಯಿಂದ ಮಳೆ ಮುನ್ಸೂಚನೆ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ-20 ಪಂದ್ಯವು ಮಳೆಗೆ ಆಹುತಿಯಾಗಿದೆ. ಮೊದಲ ಪಂದ್ಯಕ್ಕೆ ಓವಲ್ನ ಅಂತಾರಾಷ್ಟ್ರೀಯ ಮೈದಾನ ಸಿದ್ಧವಾಗಿತ್ತು, ಮಳೆ ಹಿನ್ನೆಲೆಯಲ್ಲಿ 18 ಓವರ್ಗೆ ಮ್ಯಾಚ್ ಸೀಮಿತಗೊಳಿಸಲಾಗಿತ್ತು.
ಮಧ್ಯರಾತ್ರಿ ʻಮೊಂಥಾʼ ಸೈಕ್ಲೋನ್ ಆಂಧ್ರಪ್ರದೇಶಕ್ಕೆ ಎಂಟ್ರಿ ಕೊಟ್ಟಿದ್ದು
110 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವ ಹಿನ್ನಲೆಯಲ್ಲಿ ಬಿರುಗಾಳಿ ಸಮೇತ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಆಂಧ್ರ ಸೇರಿ ಐದು ರಾಜ್ಯಗಳಾ ಜನಜೀವನ ಅಸ್ತವ್ಯಸ್ಥವಾಗಿದೆ. ಚಂಡಮಾರುತ ಎಫೆಕ್ಟ್ನಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಮಂಡ್ಯದಲ್ಲಿ ಅಬ್ಬರಿಸಿದ ವರುಣ, ಉಕ್ಕಿ ಹರಿದ ವಿಸಿ ನಾಲೆ
ಕೆ.ಹೆಚ್.ಬಿ. ಬಡಾವಣೆ, ಕೆರೆ ಅಂಗಳಲ್ಲಿ ಜಲ ದಿಗ್ಬಂಧನ
ಕೆ.ಹೆಚ್.ಬಿ.ಬಡಾವಣೆಯ ಮನೆ, ಶಾಲೆಗೆ ನುಗ್ಗಿದ ನೀರು
ಶಾಲಾ ಮಕ್ಕಳು, ಕಚೇರಿಗೆ ತೆರಳಲು ಜನರ ತೀವ್ರ ಪರದಾಟ
ಪ್ರತಿ ವರ್ಷ ಮಳೆ ಬಂದಾಗಲೂ ಸಂಕಷ್ಟಕ್ಕೆ ಸಿಲುಕುವ ಜನರು
ತಡೆಗೋಡೆ ನಿರ್ಮಾಣ ಮಾಡುವಂತೆ ಬಡಾವಣೆ ಜನ್ರ ಆಗ್ರಹ.
ಶ್ರೀರಂಗಪಟ್ಟಣ ತಾ. ರಾತ್ರಿ ಸುರಿದ ಧಾರಾಕಾರ ಮಳೆ
ಮಳೆಗೆ ದರಸಗುಪ್ಪೆ ಗ್ರಾಮದ ಬಳಿ ಒಡೆದ ಸಿಡಿಎಸ್ ನಾಲೆ ಏರಿ
ನಾಲೆ ಏರಿ ಒಡೆದು ರೈತರ ಜಮೀನಿಗೆ ನುಗ್ಗಿದ ನಾಲೆ ನೀರು
ಏಕಾಏಕಿ ನೀರು ಜಮೀನಿಗೆ ನುಗ್ಗಿದ್ದರಿಂದ ಕೊಚ್ಚಿ ಹೋದ ಬೆಳೆಗಳು
ಕಬ್ಬು, ಭತ್ತ, ರಾಗಿ , ಅಡಿಕೆ ಸೇರಿ ಹಲವು ಬೆಳೆಗಳ ನಾಶ
ಬೆಳೆ ನಷ್ಟದಿಂದ ರೈತರು ಕಂಗಾಲು, ಪರಿಹಾರಕ್ಕೆ ಆಗ್ರಹ
ದಾವಣಗೆರೆ ಜಿಲ್ಲೆಯಲ್ಲಿ ವರುಣನ ಆರ್ಭಟ
ಕೆರೆಯಂತಾದ ರಸ್ತೆಗಳು, ಅಂಗಡಿಗಳಿಗೆ ನುಗ್ಗಿದ ನೀರು
ರಸ್ತೆಗಳು ಜಾಲಾವೃತ, ಜನಜೀವನ ಅಸ್ತವ್ಯಸ್ತ
ಚನ್ನಗಿರಿ ತಾಲೂಕಿನಲ್ಲಿ ಭರ್ಜರಿ ಮಳೆ
ಪಟ್ಟಣದಲ್ಲಿ ಹಳ್ಳದಂತೆ ಹರಿಯುತ್ತಿರುವ ನೀರು
ಕಳೆದ ರಾತ್ರಿ ಸುರಿದ ಮಳೆಗೆ ಕೆರೆ, ಹಳ್ಳಗಳು ಭರ್ತಿ.
ಕಲಬುರ್ಗಿ ಜಿಲ್ಲೆಯು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಾಗೂ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಸೆಪ್ಟಂಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ, ಲಕ್ಷಾಂತರ ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿತ್ತು. ಇಷ್ಟಲ್ಲದೆ ಗಾಯದ ಮೇಲೆ ಬರೆ ಎಳೆದಂತೆ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಸುರಿದ ಹರಿಮಳೆಯಿಂದ, ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟಿರುವ ಪರಿಣಾಮ, ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಗಳ ಭೀಮಾ ನದಿ ತೀರದಲ್ಲಿರುವ ಬಹುತೇಕ ಗ್ರಾಮಗಳು ಮುಳುಗಡೆಯಾಗಿವೆ ಜೊತೆಗೆ ನದಿ ತೀರದಲ್ಲಿರುವ ಜಮೀನುಗಳಲ್ಲಿ ಬೆಳೆದ ಬೆಳೆ ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಅವಾಂತರ ಜೋರಾಗಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ, ಯಾದಗಿರಿ, ವಿಜಯಪುರದಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು ಸಿಎಂ ಸಿದ್ದರಾಮಯ್ಯ ನೆರೆಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ರಾಯಚೂರಿನಲ್ಲಿ ಮುಂದುವರೆದ ಮಳೆ ಅವಾಂತರ
ಮನೆಗಳಿಗೆ ನುಗ್ಗಿದ ನೀರು, ಗ್ರಾಮಸ್ಥರ ಪರದಾಟ
ಲಿಂಗಸೂಗೂರಿನ ಹಟ್ಟಿ ಗ್ರಾಮದಲ್ಲಿ ನಡೆದ ಘಟನೆ
ಹಟ್ಟಿ ಗ್ರಾಮದ ಮನೆಗಳಿಗೆ ನೀರು ನುಗ್ಗಿ ಅವಾಂತರ
Karnataka Rain: ಹವಾಮಾನ ಇಲಾಖೆಯ ಪ್ರಕಾರ, ರಾಜಧಾನಿ ಭಾಗಶಃ ಮೋಡ ಕವಿದಿರುತ್ತದೆ. ಇಂದು ದೆಹಲಿಯಲ್ಲಿ ಗರಿಷ್ಠ ತಾಪಮಾನ 34-36 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24-26 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಎರಡು ಮನೆಗಳು ಭೂ ಕುಸಿತಕ್ಕೆ ಒಳಗಾಗಿವೆ. ನಿರಂತರ ಮಳೆಯ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿಯವರೆಗೆ ಆರು ಮಂದಿ ಮೃತಪಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.