ಸೇತುವೆ ನಿರ್ಮಾಣ ಮಾಡಲು ಶಾಸಕ ಮಹೇಶ್ ಕುಮಟಳ್ಳಿ ಭರವಸೆ

  • Zee Media Bureau
  • Oct 4, 2022, 05:19 PM IST

ಅಂತೂ ಇಂತೂ ಡೋಣಿ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಭರವಸೆ ನೀಡಿದ್ದಾರೆ. ಬೆಳಗಾವಿಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಡೋಣಿ ಹಳ್ಳ ಇದಾಗಿದೆ. ನಿಮ್ಮ ಜೀ ಕನ್ನಡ ನ್ಯೂಸ್‌ ವರದಿ ಫಲಶೃತಿ ಇದಾಗಿದೆ. ಹರಿಯುತ್ತಿದ್ದ ಹಳ್ಳದಲ್ಲಿ ಅಪಾಯವನ್ನು ಲೆಕ್ಕಿಸದೆ ಶಾಲಾ ಮಕ್ಕಳು ಸಂಚಾರ ಮಾಡುತ್ತಿದ್ದರು. ಈ ಕುರಿತು ಸಮಗ್ರವಾಗಿ ಜೀ ಕನ್ನಡ ನ್ಯೂಸ್‌ ವರದಿ ಪ್ರಸಾರ ಮಾಡಿತ್ತು. 
 

Trending News