ಈ ದೇಶಗಳಲ್ಲಿ ಆರಂಭವಾಗಿದೆ ಯುದ್ಧ, ಇದುವರೆಗೆ 23 ಮಂದಿ ಮೃತ, 100ಕ್ಕೂ ಹೆಚ್ಚು ಜನರಿಗೆ ಗಾಯ

ನಾಗೋರ್ನೊ-ಕರಾಬಖ್ ಪ್ರದೇಶದ ವಿವಾದಿತ ಪ್ರದೇಶದ ಬಗ್ಗೆ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವಿನ ಜಗಳ ಸ್ಫೋಟಗೊಂಡಿದೆ. ಭಾನುವಾರದ ಸಂಘರ್ಷದಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ್ದಾರೆ.

Last Updated : Sep 28, 2020, 09:50 AM IST
  • ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮಾಕೆನ್ ವಿವಾದಿತ ಪ್ರದೇಶದಲ್ಲಿ ಘರ್ಷಣೆ
  • ಘಟನೆಯಲ್ಲಿ 100ಕ್ಕೂ ಹೆಚ್ಚು ಜನರಿಗೆ ಗಾಯ
  • ಅಂತರರಾಷ್ಟ್ರೀಯ ಸಮುದಾಯವು ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಉಭಯ ದೇಶಗಳಿಗೆ ಮನವಿ ಮಾಡಿದೆ.
ಈ ದೇಶಗಳಲ್ಲಿ ಆರಂಭವಾಗಿದೆ ಯುದ್ಧ, ಇದುವರೆಗೆ 23 ಮಂದಿ ಮೃತ, 100ಕ್ಕೂ ಹೆಚ್ಚು ಜನರಿಗೆ ಗಾಯ title=
Image courtesy: Reuters

ನಾಗೋರ್ನೊ-ಕರಬಖ್ ಪ್ರದೇಶದ ವಿವಾದಿತ ಪ್ರದೇಶದ ಬಗ್ಗೆ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವಿನ ವಿವಾದ ಭುಗಿಲೆದ್ದಿದೆ. ಭಾನುವಾರ  ನಡೆದ ಸಂಘರ್ಷದಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಸೈನಿಕರ ಜೊತೆಗೆ ಸಾರ್ವಜನಿಕರೂ ಸೇರಿದ್ದಾರೆ. ಎರಡೂ ದೇಶಗಳಲ್ಲಿ ನಡೆಯುತ್ತಿರುವ ಗುಂಡಿನ ದಾಳಿಯಿಂದಾಗಿ ದಕ್ಷಿಣ ಕಾಕಸಸ್ ಪ್ರದೇಶದಲ್ಲಿ ಅಸ್ಥಿರತೆಯ ಅಪಾಯವಿದೆ. ಇದು ವಿಶ್ವ ಮಾರುಕಟ್ಟೆಗಳಲ್ಲಿ ತೈಲ ಮತ್ತು ಅನಿಲ ಸಾಗಣೆಯ ಕಾರಿಡಾರ್ ಆಗಿದೆ.

2016ರ ನಂತರದ ಅತ್ಯಂತ ಭೀಕರ ಯುದ್ಧ:
ಇದು 2016ರಿಂದ ಉಭಯ ದೇಶಗಳ ನಡುವಿನ ಅತ್ಯಂತ ಭೀಕರ ಯುದ್ಧವಾಗಿದೆ. ಗಾಳಿ ಮತ್ತು ಟ್ಯಾಂಕ್‌ಗಳ ಮೂಲಕ ಎರಡೂ ಕಡೆಯಿಂದ ದಾಳಿ ನಡೆಸಲಾಗಿದೆ. ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಉಭಯ ದೇಶಗಳು ಸಮರ ಕಾನೂನನ್ನು ಜಾರಿಗೆ ತಂದಿವೆ. ಅಜೆರ್ಬೈಜಾನ್‌ನಲ್ಲಿ ಭಾನುವಾರ ಕರ್ಫ್ಯೂ ವಿಧಿಸಲಾಯಿತು. ನಾಗೋರ್ನೊ-ಕರಬಖ್ ಪರವಾಗಿ ಅಜರ್ಬೈಜಾನ್ ಸೈನ್ಯದೊಂದಿಗಿನ ಸಂಘರ್ಷದಲ್ಲಿ ಅದರ 16 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಜನ್ಮದಿನಕ್ಕೆ ವಿಶೇಷ ಗಿಫ್ಟ್ ನೀಡಿದ ಭಾರತ!

ಕುಸಿದ ಹೆಲಿಕಾಪ್ಟರ್:
ಅಜರ್ಬೈಜಾನ್ ರಾಷ್ಟ್ರಪತಿ ತಮ್ಮ ಸೈನ್ಯಕ್ಕೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ. ಆದರೆ ಅವರು ಈ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. ಅರ್ಜೆನಿಯಾ ಪ್ರತ್ಯೇಕತಾವಾದಿ ಪಡೆಗಳು ಅಜೆರ್ಬೈಜಾನ್‌ನ ಗಶಾಲ್ತಿ ಗ್ರಾಮದ ಮೇಲೆ ದಾಳಿ ನಡೆಸಿ ಸಾಮಾನ್ಯ ನಾಗರಿಕರನ್ನು ಕೊಂದಿವೆ ಎಂದು ಅಜೆರ್ಬೈಜಾನ್‌ನಲ್ಲಿರುವ ಪ್ರಾಸಿಕ್ಯೂಟರ್ ಜನರಲ್ ಕಚೇರಿ ತಿಳಿಸಿದೆ. ಎರಡೂ ದೇಶಗಳು ಪರಸ್ಪರ ಯುದ್ಧವನ್ನು ಒತ್ತಾಯಿಸುತ್ತಿವೆ. ನಾಲ್ಕು ಅಜೆರ್ಬೈಜಾನ್ ಹೆಲಿಕಾಪ್ಟರ್‌ಗಳನ್ನು ಉರುಲಿಸಿದ್ದು 33 ಟ್ಯಾಂಕ್‌ಗಳನ್ನು ಮತ್ತು ಯುದ್ಧ ವಾಹನಗಳನ್ನು ನಾಶಪಡಿಸಿದೆ ಎಂದು ಅರ್ಮೇನಿಯಾ ಹೇಳಿದೆ. ಆದರೆ ಅರ್ಮೇನಿಯಾ ಇದನ್ನು ನಿರಾಕರಿಸಿದೆ.

ಭಾರತವನ್ನು ಎಲ್ಲಿ ತನಕ UNSC ಶಾಶ್ವತ ಸದಸ್ಯತ್ವದಿಂದ ದೂರವಿಡುವುದು?-ವಿಶ್ವಸಂಸ್ಥೆಯಲ್ಲಿ ಮೋದಿ ಪ್ರಶ್ನೆ

ಹೆಚ್ಚಿನ ಸಂಖ್ಯೆಯ ಸೈನಿಕರ ನಿಯೋಜನೆ:
ಹಿಂದಿನ ಸೋವಿಯತ್ ಒಕ್ಕೂಟದ ಈ ಎರಡು ದೇಶಗಳ ನಡುವೆ ನಾಗೋರ್ನೊ-ಕಾರ್ಬಖ್ ಪ್ರದೇಶದ ಬಗ್ಗೆ ದೀರ್ಘಕಾಲದ ವಿವಾದವಿದೆ. ಅಜರ್ಬೈಜಾನ್ ಈ ಪ್ರದೇಶವನ್ನು ತನ್ನದೇ ಎಂದು ಪರಿಗಣಿಸುತ್ತದೆ. 1994ರ ಯುದ್ಧದ ನಂತರ ಈ ಪ್ರದೇಶವು ಅಜೆರ್ಬೈಜಾನ್ ನಿಯಂತ್ರಣದಲ್ಲಿಲ್ಲವಾದರೂ ಇದನ್ನು ಅರ್ಮೇನಿಯಾದ ಜನಾಂಗೀಯ ಬಣಗಳು ಆಕ್ರಮಿಸಿಕೊಂಡಿವೆ. ಈ ಪ್ರದೇಶದಲ್ಲಿ ಎರಡೂ ದೇಶಗಳ ಸೈನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. 4,400 ಕಿಲೋಮೀಟರ್‌ಗಳಷ್ಟು ವಿಸ್ತಾರವಾಗಿರುವ ನಾಗೋರ್ನೊ-ಕಾರ್ಬಖ್‌ನ ಹೆಚ್ಚಿನ ಭಾಗವು ಪರ್ವತಮಯವಾಗಿದೆ.

ಕ್ವಾಡ್ ಮತ್ತು 5ಜಿ ತಂತ್ರಜ್ಞಾನದ ಅಭಿವೃದ್ದಿಯಲ್ಲಿ ಕೈಜೋಡಿಸಲು ಮುಂದಾದ ಭಾರತ-ಜಪಾನ್

ಶಾಂತಿಯ ಮನವಿ!
ಉಭಯ ದೇಶಗಳ ನಡುವಿನ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸುವ ಪ್ರಯತ್ನಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾರಂಭವಾಗಿವೆ. ರಷ್ಯಾ ರಾಷ್ಟ್ರಪತಿ ವ್ಲಾಡಿಮಿರ್ ಪುಟಿನ್ ಭಾನುವಾರ ಅರ್ಮೇನಿಯನ್ ಪ್ರಧಾನಿ ನಿಕೋಲಿಯನ್ ಪಶಿನಿಯನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ರಷ್ಯಾ ಹೊರಡಿಸಿದ ಹೇಳಿಕೆಯಲ್ಲಿ ಉಭಯ ದೇಶಗಳು ಮಿಲಿಟರಿ ಕ್ರಮವನ್ನು ನಿಲ್ಲಿಸಬೇಕು ಮತ್ತು ಮಾತುಕತೆಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಹೇಳಲಾಗಿದೆ. 

ಅದೇ ಸಮಯದಲ್ಲಿ  ಅರ್ಜೆನಿಯಾವು ಅಜೆರ್ಬೈಜಾನ್ ವಿರುದ್ಧದ ದ್ವೇಷವನ್ನು ಮರೆಯಬೇಕು ಎಂದು ಟರ್ಕಿಶ್ ರಾಷ್ಟ್ರಪತಿ ಎರ್ಡೊಗನ್ ಹೇಳಿದ್ದಾರೆ. ಅಂತೆಯೇ ಫ್ರಾನ್ಸ್ ಮತ್ತು ಅಮೆರಿಕ ಕೂಡ ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂದು ಎರಡೂ ದೇಶಗಳಿಗೆ ಮನವಿ ಮಾಡಿದೆ.
 

Trending News