ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಕುಮಾರಸ್ವಾಮಿ ಸರ್ಕಾರ ರಚಿಸುವ ಸಲುವಾಗಿ ಇಂದು ಸಂಜೆ 7.30ಕ್ಕೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.
I just spoke with Kumaraswamy Ji and congratulated him. He invited me for the oath taking ceremony on Monday @hd_kumaraswamy
— Mamata Banerjee (@MamataOfficial) May 19, 2018
ಇಂದು ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಶ್ವಾಸಮತಕ್ಕೆ ಮುಂದಾಗದೆ ಭಾವಪೂರ್ಣ ಭಾಷಣದ ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದಾಗಿ ಈಗ ಸರ್ಕಾರ ರಚನೆ ಮಾಡಲು ಕುಮಾರಸ್ವಾಮಿಯವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡನೆ ಮಾಡಲಿದ್ದಾರೆ.
Bengaluru: JD(S)'s HD Kumaraswamy reaches Raj Bhavan to meet Governer Vajubhai Vala, to stake claim for forming government. #Karnataka pic.twitter.com/e4WzgsmRnZ
— ANI (@ANI) May 19, 2018
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 104, ಜೆಡಿಎಸ್ 38, ಮತ್ತು ಕಾಂಗ್ರೆಸ್ 78 ಸ್ಥಾನಗಳನ್ನು ಗೆದ್ದಿತ್ತು ಆದರೆ ಯಾವುದೇ ಪಕ್ಷವು ಬಹುಮತದಿಂದ ಗೆಲ್ಲದಿದ್ದರೂ ಸಹಿತ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು,ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು ನಂತರ ಸುಪ್ರಿಂಕೋರ್ಟ್ 24 ಗಂಟೆಗಳ ಒಳಗಾಗಿ ವಿಶ್ವಾಸಮತಸಾಬೀತು ಪಡಿಸಬೇಕೆಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಯಡಿಯೂರಪ್ಪನವರು ವಿಶ್ವಾಸಮತಕ್ಕೆ ಒಳಗಾಗದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.