ಬೆಲೆ ಏರಿಕೆಯಿಂದ ಬಡವಾಯ್ತು ಜನಸಾಮಾನ್ಯನ‌ ಜೀವನ

ಜನ ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ. ಒಂದೆಡೆ ವಿದ್ಯುತ್ ಶಾಕ್, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಮತ್ತೊಂದೆಡೆ ತರಕಾರಿ ಅಂಗಡಿಗೆ ಹೋದ್ರು ಶಾಕ್ , ದಿನಸಿ ಅಂಗಡಿಗೆ ಹೋದ್ರು ಶಾಕ್! ತಲೆ ಕೆಟ್ಟು ಎಣ್ಣೆ ಅಂಗಡಿಗೆ ಹೋದ್ರು ದರ ಏರಿಕೆಯಿಂದ ತಲೆ ಗಿರ್ಗಿಟ್ಲೆ ಹೊಡೆಯೋದು ಪಕ್ಕಾ!

Written by - Yashaswini V | Last Updated : Jun 26, 2023, 09:50 AM IST
  • ಕೈಗೆಟುಕುತ್ತಿಲ್ಲ ನಿತ್ಯ ಸೇವಿಸೋ ಆಹಾರ ಸಾಮಾಗ್ರಿಗಳು.
  • ಜೇಬು ಸುಡುತ್ತಿರೋ ತರಕಾರಿ, ದಿನಸಿ ಸಾಮಾಗ್ರಿಗಳು.
  • ಸರ್ಕಾರ ಸುಂಕ ಏರಿಕೆ ಮಾಡದೇ ಇದ್ದರೂ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿರೋ ಬಿಯರ್ ಉತ್ಪಾದನೆ ಕಂಪನಿಗಳು.
  • ಸದ್ಯದಲ್ಲೇ ಹೊಟೇಲ್ ಗಳಿಂದಲೂ ದರ ಏರಿಕೆ ಶಾಕ್....?
ಬೆಲೆ ಏರಿಕೆಯಿಂದ ಬಡವಾಯ್ತು ಜನಸಾಮಾನ್ಯನ‌ ಜೀವನ title=
ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್!

Price Hike: ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರದಿಂದ ನೀಡಲಾಗುತ್ತಿರುವ "ಪಂಚ ಗ್ಯಾರೆಂಟಿ"ಗಳ ಖುಷಿ ಬೆನ್ನಲ್ಲೆ ಜನ ಸಾಮಾನ್ಯರಿಗೆ ದರ ಏರಿಕೆ ಶಾಕ್ ಉಂಟಾಗಿದೆ. ಒಂದೆಡೆ ವಿದ್ಯುತ್ ಶಾಕ್, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಮತ್ತೊಂದೆಡೆ ತರಕಾರಿ ಅಂಗಡಿಗೆ ಹೋದ್ರು ಶಾಕ್ , ದಿನಸಿ ಅಂಗಡಿಗೆ ಹೋದ್ರು ಶಾಕ್! ತಲೆ ಕೆಟ್ಟು ಎಣ್ಣೆ ಅಂಗಡಿಗೆ ಹೋದ್ರು ದರ ಏರಿಕೆಯಿಂದ ತಲೆ ಗಿರ್ಗಿಟ್ಲೆ ಹೊಡೆಯೋದು ಪಕ್ಕಾ ಆಗಿದೆ. 

ಹೌದು, ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಜನಸಾಮಾನ್ಯರು ಈಗಾಗಲೇ ಪೆಟ್ರೋಲ್, ವಿದ್ಯುತ್ ದರಗಳ ಏರಿಕೆಯಿಂದ ಬಸವಳಿದಿದ್ದ ಸಾಮಾನ್ಯರಿಗೆ ಗಗನಾಮುಖಿ ಆಗುತ್ತಿರುವ ತರಕಾರಿ, ದಿನಸಿ ಬೆಲೆಗಳು ಮತ್ತಷ್ಟು ಹೊರೆಯಾಗಿವೆ. ಅಷ್ಟಕ್ಕೂ ರಾಜ್ಯದಲ್ಲಿ ದಿನಸಿ ಸೊಪ್ಪು-ತರಕಾರಿಗಳ ಬೆಲೆ ಏರಿಕೆಗೆ ಕಾಣವಾದರೂ ಏನು ಎಂದು ನೋಡುವುದಾದರೆ... 

ರಾಜ್ಯದಲ್ಲಿ ಸೃಷ್ಟಿಯಾಗಲಿದಿಯಾ ಆಹಾರ ವಸ್ತುಗಳ ಅಭಾವ!
ಸೊಪ್ಪು ತರಕಾರಿಗಳಿಗೆ ಮಳೆ ಸಮಸ್ಯೆ ಕಾರಣ ಎನ್ನಬಹುದು. ಆದರೂ, ಬೇಳೆ ಕಾಳುಗಳ ಅಭಾವಕ್ಕೆ ಕಾರಣವೇನು....? ಮಳೆ ಅಭಾವ ಒಂದೇ ಕಾರಣಕ್ಕೆ ಪರಿಸ್ಥಿತಿ ಕೈ ಮೀರುತ್ತಿದೀಯಾ...? ಅಥವಾ ರಾಜ್ಯದಲ್ಲಿ ಕೃತಕ ಅಭಾವ ಸೃಷ್ಟಿ ಮಾಡಲಾಗ್ತಿದೀಯಾ...?
ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ವ್ಯಾಪಾರಿಗಳು ಕೃತಕ ಅಭಾವ ಸೃಷ್ಠಿ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. 

ಇದನ್ನೂ ಓದಿ- Foreign Transaction: ನೀವೂ ವಿದೇಶ ವಹಿವಾಟು ನಡೆಸುತ್ತೀರಾ? ಜುಲೈ 1 ರಿಂದ ಬದಲಾಗುತ್ತಿದೆ ಈ ನಿಯಮ

ಈಗಾಗಲೇ ಕಳೆದ ಕೆಲ ತಿಂಗಳಿನಿಂದಲೂ ಒಂದಲ್ಲ ಒಂದು ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರೋ ಜನ ಸಾಮಾನ್ಯರಿಗೆ  ಈಗ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ.  ಅಷ್ಟಕ್ಕೂ ತರಕಾರಿ, ದಿನಸಿ ವಸ್ತುಗಳ ಈ ಪ್ರಮಾಣದ ಅಭಾವಕ್ಕೆ ಕಾರಣವೇನು...? 
* ರಾಜ್ಯದಲ್ಲಿ ಅನೇಕ ಕಡೆ ಮಳೆ ಅಭಾವದಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. 
* ಅಷ್ಟೇ ಅಲ್ಲದೆ, ನೆರೆಯ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಎದುರಾಗಿರುವುದರಿಂದ ಅಗತ್ಯ ವಸ್ತುಗಳ ಪೂರೈಕೆಯಲ್ಲಿಯೂ ಇಳಿಕೆ ಕಂಡು ಬಂದಿದೆ. 
* ಕಳೆದ ಬಾರಿ ಅತಿವೃಷ್ಠಿ ಮತ್ತು ನೆಟೆ ರೋಗಕ್ಕೆ 70% ನಷ್ಟು ತೊಗರಿ ಬೆಳೆ ನಷ್ಟವಾಗಿತ್ತು.
* ಅತಿವೃಷ್ಟಿಯಿಂದ ಹಲಸಂದಿ, ಹುರುಳಿ ಬೇಳೆ ಕೂಡ ನಷ್ಟವಾಗಿದ್ದು ದರ ಏರಿಕೆ ಕಂಡಿದೆ.
ಈ ಬಾರಿ ಕೂಡ ಮುಂಗಾರು ರಾಜ್ಯದ ಹಲವೆಡೆ ಕೈ ಕೊಟ್ಟ ಹಿನ್ನೆಲೆ ಬೆಳೆ ನಷ್ಟವಾಗಿರೋದು ಈ ಪ್ರಮಾಣದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. 

ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಯಾವೆಲ್ಲ ವಸ್ತುಗಳ ದರ ಏರಿಕೆಯಾಗಿದೆ...? 
ಬೇಳೆಕಾಳುಗಳು ಹಳೆಯ ದರ (ರೂಪಾಯಿಗಳಲ್ಲಿ) ಹೊಸ ದರ (ರೂಪಾಯಿಗಳಲ್ಲಿ)
ತೊಗರಿ ಬೇಳೆ 125 160
ಹೆಸರುಬೇಳೆ 74 105
ಅವರೆ ಬೇಳೆ 140 180
ಉದ್ದಿನ ಬೇಳೆ 100  135
ಜೀರಿಗೆ 186 600
ಹಲಸಂದಿ 100 120
ಹುರುಳಿ 60 105
ಹುಣಸೆಹಣ್ಣು 126 180
ರಾಜ್ಮಾ 99 135
ಮೆಣಸಿನ ಪುಡಿ  186 425
ದನಿಯಾ ಪೌಡರ್ 150 218
ಮೆಣಸು 380 529
ಏಲಕ್ಕಿ 1150 1850
ಬ್ಯಾಡಗಿ ಮೆಣಸಿನಕಾಯಿ 330 850
ಗೋಧಿ ಹಿಟ್ಟು 26  32
ಮೈದಾ 28  36

 

ಕಳೆದ ವಾರಕ್ಕೆ ಹೋಲಿಸಿದರೆ ಯಾವೆಲ್ಲಾ ತರಕಾರಿಗಳ ಬೆಲೆ ಏರಿಕೆ ಆಗಿದೆ? 
ತರಕಾರಿಗಳು

ಕಳೆದ ವಾರದ ಬೆಲೆ

(ರೂಪಾಯಿಗಳಲ್ಲಿ)

ಈ ವಾರದ ಬೆಲೆ 

(ರೂಪಾಯಿಗಳಲ್ಲಿ)

ಬೀನ್ಸ್  60 110
ಕ್ಯಾರೇಟ್ 50 90
ಮೂಲಂಗಿ 25 49
ನುಗ್ಗೆಕಾಯಿ 80 100
ಬೀಟ್ ರೂಟ್ 35 50
ಹಸಿಮೆಣಸಿನಕಾಯಿ 95 115
ಬೆಂಡೆಕಾಯಿ 30 54
ಬೆಳ್ಳುಳ್ಳಿ 145 170
ಟಮೋಟೊ 35 65
ಕರಿಬೇವು 50 80
ಕೊತ್ತಂಬರಿ ಸೊಪ್ಪು(ಕಂತೆ) 10 45
ನವಿಲು ಕೋಸು 35 70
ಶುಂಠಿ 120 200

 

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಪ್ರಮುಖ ಹಣ್ಣುಗಳ ಬೆಲೆ ಹೀಗಿದೆ 
ಹಣ್ಣುಗಳು

ಕಳೆದ ವಾರದ ಬೆಲೆ 

(ರೂಪಾಯಿಗಳಲ್ಲಿ)

ಈ ವಾರದ ಬೆಲೆ 

(ರೂಪಾಯಿಗಳಲ್ಲಿ)

ಸೇಬು 180 288
ಮೂಸಂಬಿ 70 114
ದಾಳಿಂಬೆ 180 278
ಅನಾನಸ್ 40  60
ಸಪೋಟ 80 107
ಏಲಕ್ಕಿ ಬಾಳೆ 60 74

ಇದನ್ನೂ ಓದಿ- Free Travel For Senior Citizen: ಇನ್ಮುಂದೆ ಹಿರಿಯ ನಾಗರಿಕರಿಗೂ ಉಚಿತ ಬಸ್ ಸೇವೆ!

ಮದ್ಯ ಪ್ರಿಯರನ್ನೂ ಕಾಡ್ತಿದೆ ಬೆಲೆ ಏರಿಕೆ ಬಿಸಿ!
ಮದ್ಯ ಪ್ರಿಯರಿಗೂ ಕುಡಿಯೋ ಮುಂಚೇನೆ ಕಿಕ್ ಏರಿಸುತ್ತಿರೋ ಕೆಲ ಮದ್ಯಗಳ ದರ.
>> ಕಳೆದ 15 ದಿನಗಳಿಂದ ಬಿಯರ್ ಪ್ರಿಯರಿಗೆ ದರ ಏರಿಕೆ ಬರೆ.
>> ಕುಡಿಯೋ ಮುಂಚೆ ದರ ಕೇಳಿದ್ರೆನೆ ತಲೆ ಗಿರ್ ಗಿಟ್ಲೇ.
>> ಪ್ರತಿ ಬಿಯರ್ ಮೇಲೂ 10ರಿಂದ 20 ರೂ ಏರಿಕೆ.
>> ಇತ್ತ ಸರ್ಕಾರ ಸುಂಕ ಏರಿಕೆ ಮಾಡದೇ ಇದ್ದರೂ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿರೋ ಬಿಯರ್ ಉತ್ಪಾದನೆ ಕಂಪನಿಗಳು.
>> ಇತ್ತ ಮತ್ತೆ ಹೊಸ ಬಜೆಟ್ ನಲ್ಲಿ ಅಬಕಾರಿ ಸುಂಕ ಹೆಚ್ಚಳದ ಭೀತಿ ಬೇರೆ.
>> ಸದ್ಯ ಕುಡಿದಾಗ ಕಿಕ್ ಏರಿದ್ರು, ಬಿಲ್ ಕೊಡುವಾಗಲೇ ಕಿಕ್ ಇಳಿಯೋ ಸ್ಥಿತಿಯಲ್ಲಿ ಮದ್ಯ ಪ್ರಿಯರು.

ಯಾವೆಲ್ಲ ಬಿಯರ್ ಗಳ ದರ ಏರಿಕೆಯಾಗಿದೆ...?
ಬಿಯರ್ ಗಳ ಹೆಸರು ಹಳೆಯ ದರ (ರೂಪಾಯಿಗಳಲ್ಲಿ) ಹೊಸ ದರ (ರೂಪಾಯಿಗಳಲ್ಲಿ)
ಬಡ್ ವೈಸರ್ 198 220
ಕಾರ್ಲ್ಸ್ ಬರ್ಗ್  190 220
ಬ್ಲಾಕ್ ಫೋಟ್ 135 155
ಟುಬರ್ಗ್  140 150
ಹೇನಿಕೇನ್ 210 235
ಕೊರೋನಾ 220 235
ಕಿಂಗ್ ಫಿಶರ್  160 170
ಯುಬಿ ಪ್ರೀಮಿಯಂ 125 135
ಯುಬಿ ಸ್ಟ್ರಾಂಗ್ 130 135
ಕಿಂಗ್ ಫಿಶರ್ ಅಲ್ಟ್ರಾ  190 220

ಅತ್ತ ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೆ ಹೊಟೇಲ್ ಮಾಲೀಕರಿಂದಲೂ ಶಾಕ್..!?
ವಿದ್ಯುತ್ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟ ಹೊಟೇಲ್ ಉದ್ಯಮದಿಂದಲೂ ಜನಸಾಮಾನ್ಯನಿಗೆ ಬರೆ ಎಳೆಯುವ ನಿರೀಕ್ಷೆಯಿದೆ. ಸದ್ಯದಲ್ಲೇ ಹೊಟೇಲ್ ತಿಂಡಿ ತಿನಿಸುಗಳು ದುಬಾರಿಯಾಗುವ ಸಾಧ್ಯತೆ ಇದೆ. ವಿದ್ಯುತ್, ಅಕ್ಕಿ, ಕಾಳು, ಸೊಪ್ಪು, ತರಕಾರಿ ದರ ಏರಿಕೆ ಬೆನ್ನಲ್ಲೆ ಹೊಟೇಲ್ ಗಳಲ್ಲಿ ಬೆಲೆ ಏರಿಕೆ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ದರ ಏರಿಕೆಯ ಹೊಡೆತದಿಂದ ಉದ್ಯಮದ ಮೇಲೆ ಪರಿಣಾಮ ಬೀರಿದೆ ಎಂದು ಅಳಲು ತೋಡಿಕೊಂಡಿರುವ ಹೊಟೇಲ್ ಮಾಲೀಕರು, ಹೋಟೆಲ್ಗಳಲ್ಲಿ ಕಾಫಿ, ಟೀ, ತಿಂಡಿ ಬೆಲೆ ಏರಿಕೆಯ ಎಚ್ಚರಿಕೆ ಕೊಟ್ಟಿದ್ದು, ಅಗತ್ಯವಾಗಿ ನಾವು ಕೂಡ ದರ ಏರಿಕೆ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News