Ration Card Update: ಬಂತು ಭಾರಿ ಸಂತಸದ ಸುದ್ದಿ, ರೇಷನ್ ಕಾರ್ಡ್ ನಿಯಮದಲ್ಲಿ ದೊಡ್ಡ ಬದಲಾವಣೆ, ಇದೀಗ ದುಪ್ಪಟ್ಟು ಲಾಭ ನಿಮ್ಮದಾಗಿಸಿಕೊಳ್ಳಿ!

Ration Card Update: ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ ಹಲವು ಸೌಲಭ್ಯಗಳು ಸಿಗುತ್ತವೆ. ಕಾಲಕಾಲಕ್ಕೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಡ್ ಹೊಂದಿರುವವರಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಿದ್ದು, ಇದರ ಪ್ರಯೋಜನವನ್ನು ದೇಶಾದ್ಯಂತ ಕಾರ್ಡ್ ಹೊಂದಿರುವವರು ಪಡೆಯುತ್ತಿದ್ದಾರೆ.  

Written by - Nitin Tabib | Last Updated : Apr 11, 2023, 09:29 PM IST
  • 2024ರ ವೇಳೆಗೆ ದೇಶದಾದ್ಯಂತ ಪೌಷ್ಟಿಕಾಂಶಯುಕ್ತ ಅಕ್ಕಿಯನ್ನು ಸರ್ಕಾರದ ಯೋಜನೆಯ ಮೂಲಕ ವಿತರಿಸಬೇಕು ಎಂಬುದು ಕೇಂದ್ರ ಸರ್ಕಾರದ ಗುರಿಯಾಗಿದೆ.
  • ಈ ಅಕ್ಕಿಯನ್ನು ಪ್ರಸ್ತುತ 269 ಜಿಲ್ಲೆಗಳಲ್ಲಿ ಪಿಡಿಎಸ್ ಮೂಲಕ ವಿತರಿಸಲಾಗುತ್ತಿದೆ.
  • ಹಿಂದಿನ ಅಕ್ಕಿಗಿಂತ ಈ ಅಕ್ಕಿಯ ಗುಣಮಟ್ಟ ಉತ್ತಮವಾಗಿದೆ ಎಂದು ಹೇಳಲಾಗುತ್ತಿದೆ.
Ration Card Update: ಬಂತು ಭಾರಿ ಸಂತಸದ ಸುದ್ದಿ, ರೇಷನ್ ಕಾರ್ಡ್ ನಿಯಮದಲ್ಲಿ ದೊಡ್ಡ ಬದಲಾವಣೆ, ಇದೀಗ ದುಪ್ಪಟ್ಟು ಲಾಭ ನಿಮ್ಮದಾಗಿಸಿಕೊಳ್ಳಿ! title=
ಉಚಿತ ಪಡಿತರ ಯೋಜನೆ ಅಪ್ಡೇಟ್!

Ration Card Update: ಪಡಿತರ ಚೀಟಿದಾರರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ ಹಲವು ಸೌಲಭ್ಯಗಳು ಸಿಗುತ್ತವೆ. ಕಾಲಕಾಲಕ್ಕೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಡ್ ಹೊಂದಿರುವವರಿಗೆ ಉತ್ತಮ ಸೌಲಭ್ಯಗಳನ್ನು ಒಡಗಿರುತ್ತಿದ್ದು, ಇದರ ಪ್ರಯೋಜನವನ್ನು ದೇಶಾದ್ಯಂತ ಕಾರ್ಡ್ ಹೊಂದಿರುವವರು ಪಡೆಯುತ್ತಿದ್ದಾರೆ. ಪ್ರಸ್ತುತ, ಸರ್ಕಾರದಿಂದ ನಿಯಮಗಳಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ, ಇದರಿಂದ ಕಾರ್ಡ್ ಹೊಂದಿರುವವರಿಗೆ ಎರಡು ಪಟ್ಟು ಲಾಭ ಸಿಗಲಿದೆ. ಇದಕ್ಕಾಗಿ ಸರ್ಕಾರದಿಂದ ಮಾಹಿತಿ ನೀಡಲಾಗಿದೆ.

ಕೋಟ್ಯಂತರ ಕಾರ್ಡ್  ಧಾರಕರು ಇದರ ಲಾಭ ಪಡೆಯುತ್ತಿದ್ದಾರೆ
ದೇಶಾದ್ಯಂತ ಹೆಚ್ಚಿನ ಕುಟುಂಬಗಳು ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳುತ್ತಿವೆ. ಸರ್ಕಾರದ ಉಚಿತ ಪಡಿತರ ಯೋಜನೆಯಿಂದಾಗಿ ಬಡ ಕುಟುಂಬಗಳ ಆರ್ಥಿಕ ಹೊರೆ ಗಣನೀಯವಾಗಿ ಕಡಿಮೆಯಾಗಿದೆ. ಸರ್ಕಾರವು ಪಡಿತರ ಚೀಟಿದಾರರಿಗೆ ಉಚಿತ ಪಡಿತರವನ್ನು ನೀಡುವುದು ಅತ್ಯಂತ ಶ್ಲಾಘನೀಯ ಮತ್ತು ಅತ್ಯಂತ ಪ್ರಯೋಜನಕಾರಿ ಎಂದು ಸಾಬೀತಾಗಿದೆ.

ಅಕ್ಕಿಯಲ್ಲಿ ಬದಲಾವಣೆ ಮಾಡಲಾಗಿದೆ
2024ರ ವೇಳೆಗೆ ದೇಶದಾದ್ಯಂತ ಪೌಷ್ಟಿಕಾಂಶಯುಕ್ತ ಅಕ್ಕಿಯನ್ನು ಸರ್ಕಾರದ ಯೋಜನೆಯ ಮೂಲಕ ವಿತರಿಸಬೇಕು ಎಂಬುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಈ ಅಕ್ಕಿಯನ್ನು ಪ್ರಸ್ತುತ 269 ಜಿಲ್ಲೆಗಳಲ್ಲಿ ಪಿಡಿಎಸ್ ಮೂಲಕ ವಿತರಿಸಲಾಗುತ್ತಿದೆ. ಹಿಂದಿನ ಅಕ್ಕಿಗಿಂತ ಈ ಅಕ್ಕಿಯ ಗುಣಮಟ್ಟ ಉತ್ತಮವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-EPFO Alert: ಸ್ವಯಂ ಚಾಲಿತವಾಗಿ ಸ್ಥಗಿತಗೊಳ್ಳಲಿದೆ ನಿಮ್ಮ ಖಾತೆ, ಖಾತೆಯಲ್ಲಿನ ಹಣ ಸಿಲುಕಿಕೊಳ್ಳಲಿದೆ.. ಏಕೆ? ಇಲ್ಲಿ ತಿಳಿದುಕೊಳ್ಳಿ!

ಅಕ್ಕಿಯು ಪೋಷಕಾಂಶಗಳ ಆಗರವಾಗಿದೆ
ಸರಕಾರದಿಂದ ಬಂದಿರುವ ಮಾಹಿತಿ ಪ್ರಕಾರ ಈ ಅಕ್ಕಿಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ ಎನ್ನಲಾಗುತ್ತಿದೆ. ಅವುಗಳ ಗುಣಮಟ್ಟ ಮೊದಲಿಗಿಂತ ಉತ್ತಮವಾಗಿದೆ. ಪೌಷ್ಟಿಕಾಂಶಗಳಿಂದ ಕೂಡಿರುವ ಈ ಗುಣಮಟ್ಟದ ಅಕ್ಕಿಯನ್ನು ಸರಕಾರ ಉಚಿತವಾಗಿ ನೀಡಲಿದೆ.

ಇದನ್ನೂ ಓದಿ-Good News: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.50ಕ್ಕೆ ಏರಿಕೆಯಾಗಲಿದೆ, ವೇತನದಲ್ಲಿ ಮತ್ತೆ ರೂ.9000 ಹೆಚ್ಚಳ!

ಸಂಪೂರ್ಣ ಪಡಿತರ ಸಿಗಲಿದೆ
ಇದರೊಂದಿಗೆ ಸಾರ್ವಜನಿಕರಿಗೆ ಕೇಂದ್ರ ಸರ್ಕಾರದ ವತಿಯಿಂದ ಸಂಪೂರ್ಣ ಪಡಿತರ ಪಡೆಯಲು ವಿಶೇಷ ಸೌಲಭ್ಯ ಆರಂಭಿಸಲಾಗಿದೆ. ಈಗ, ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನ ಅಡಿಯಲ್ಲಿ, ಪಡಿತರ ಅಂಗಡಿಗಳಲ್ಲಿ ಎಲೆಕ್ಟ್ರಿಕ್ ಮಾಪಕಗಳೊಂದಿಗೆ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ಇಪಿಒಎಸ್) ಸಾಧನಗಳನ್ನು ಸಂಪರ್ಕಿಸಲು ಸರ್ಕಾರ ಪ್ರಯತ್ನಿಸುತ್ತಿದೆ, ಇದರಿಂದಾಗಿ ಫಲಾನುಭವಿಗಳು ಪೂರ್ಣ ಪ್ರಮಾಣದ ಪಡಿತರವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರ ಮೂಲಕ ನಿಮಗೆ ಸಂಪೂರ್ಣ ಪಡಿತರ ಸಿಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News