Ram Mandir ನಿಂದಲೂ ನೀವು ತೆರಿಗೆ ಉಳಿತಾಯ ಮಾಡಬಹುದು! ಹೇಗೆ ಇಲ್ಲಿ ತಿಳಿದುಕೊಳ್ಳಿ

Ayodhya Ram Mandir: ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಟಾಪನೆಗೆ ಕ್ಷಣಗಣನೆ ಆರಂಭಗೊಂಡಿದೆ. ಪ್ರಾಣ ಪ್ರತಿಷ್ಟಾಪನೆಯ ಕಾರ್ಯಕ್ರಮ 22 ಜನವರಿ 2024 ರಂದು ನಡೆಯಲಿದೆ. ಈ ದಿನಗಳಲ್ಲಿ ರಾಮ ಮಂದಿರದ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು ಮತ್ತೊಂದು ವಿಷಯವನ್ನು ಭಾರಿ ಚರ್ಚಿಸುತ್ತಿದ್ದಾರೆ, ಅದೇನೆಂದರೆ, ಅದು ಆದಾಯ ತೆರಿಗೆ. ರಾಮ ಮಂದಿರದ ಸಹಾಯದಿಂದ ಕೂಡ ಆದಾಯ ತೆರಿಗೆ ಉಳಿಸಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ (Business News In Kananda)  

Written by - Nitin Tabib | Last Updated : Jan 21, 2024, 06:23 PM IST
  • ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವೆಬ್‌ಸೈಟ್ ಪ್ರಕಾರ, ದೇವಾಲಯದ ದುರಸ್ತಿ ಅಥವಾ ನವೀಕರಣಕ್ಕಾಗಿ ಟ್ರಸ್ಟ್‌ಗೆ ನೀಡಿದ ದೇಣಿಗೆಯ
  • ಶೇಕಡಾ 50 ರಷ್ಟು ದೇಣಿಗೆಯನ್ನು ಸೆಕ್ಷನ್ 80G (2) (B) ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು ಎಂದು ಕೇಂದ್ರ ಸರ್ಕಾರವು ಹೇಳಿದೆ.
  • ಆದಾಗ್ಯೂ, ನೀವು ನಗದು ರೂಪದಲ್ಲಿ ದೇಣಿಗೆ ನೀಡಿದರೆ, 2000 ರೂ.ಗಿಂತ ಹೆಚ್ಚಿನ ದೇಣಿಗೆಗಳ ಮೇಲೆ ತೆರಿಗೆ ವಿನಾಯಿತಿಯ ಪ್ರಯೋಜನ ನಿಮಗೆ ಪ್ರಾಪ್ತಿಯಾಗುವುದಿಲ್ಲ.
Ram Mandir ನಿಂದಲೂ ನೀವು ತೆರಿಗೆ ಉಳಿತಾಯ ಮಾಡಬಹುದು! ಹೇಗೆ ಇಲ್ಲಿ ತಿಳಿದುಕೊಳ್ಳಿ title=

ನವದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಟಾಪನೆಗೆ ಕ್ಷಣಗಣನೆ ಆರಂಭಗೊಂಡಿದೆ. ಪ್ರಾಣ ಪ್ರಾಣ ಪ್ರತಿಷ್ಠಾಪನೆ 22 ಜನವರಿ 2024 ರಂದು ನಡೆಸಲಾಗುತ್ತಿದೆ. ಈ ದಿನಗಳಲ್ಲಿ ರಾಮ ಮಂದಿರದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ಜನರು ಮತ್ತೊಂದು ವಿಷಯವನ್ನು ಭಾರಿ ಚರ್ಚಿಸುತ್ತಿದ್ದಾರೆ, ಅದು ಆದಾಯ ತೆರಿಗೆ. ರಾಮ ಮಂದಿರದ ಸಹಾಯದಿಂದ ಕೂಡ ನೀವು ಆದಾಯ ತೆರಿಗೆ ಉಳಿಸಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ ಆದಾಗ್ಯೂ, ಇದಕ್ಕಾಗಿ ನೀವು ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗುತ್ತದೆ ಅಥವಾ ಅದನ್ನು ದಾನ ಮಾಡಬೇಕು. ರಾಮಮಂದಿರಕ್ಕಾಗಿ ಹಣವನ್ನು ಹೇಗೆ ದಾನ ಮಾಡಬಹುದು ಮತ್ತು ತೆರಿಗೆ ವಿನಾಯಿತಿಯನ್ನು ಹೇಗೆ ಪಡೆಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳೋಣ ಬನ್ನಿ, (Business News In Kananda)

ರಾಮಮಂದಿರ ನಿರ್ಮಾಣಕ್ಕಾಗಿ ಭಾರತ ಸರ್ಕಾರವು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ರಚಿಸಿದೆ. ಈ ಟ್ರಸ್ಟ್‌ನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ರಾಮ ಮಂದಿರಕ್ಕಾಗಿ ಹಣವನ್ನು ದಾನ ಮಾಡಬಹುದು. ನೀವು ಅಲ್ಲಿ ಅನೇಕ ರೀತಿಯಲ್ಲಿ ದಾನ ಮಾಡಬಹುದು. ನೀವು ಪಾವತಿ ಗೇಟ್‌ವೇ ಅಥವಾ UPI ಅನ್ನು ಬಳಸಬಹುದು. ನೀವು NEFT, IMPS, ಡಿಮ್ಯಾಂಡ್ ಡ್ರಾಫ್ಟ್ ಮತ್ತು ಚೆಕ್ ಮೂಲಕವೂ ಪಾವತಿಸಬಹುದು. ನೀವು ಪಾವತಿ ಗೇಟ್‌ವೇ ಮೂಲಕ ಪಾವತಿ ಮಾಡಿದರೆ, ನೀವು ತಕ್ಷಣ ದೇಣಿಗೆ ರಸೀದಿಯನ್ನು ಪಡೆಯುತ್ತೀರಿ, ಆದರೆ ನೀವು ಇತರ ವಿಧಾನಗಳ ಮೂಲಕ ಪಾವತಿ ಮಾಡಿದರೆ, ಪರಿಶೀಲನೆ ಪೂರ್ಣಗೊಂಡ ನಂತರ ನಿಮಗೆ ರಸೀದಿ ಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ರಶೀದಿಯನ್ನು ಪಡೆಯಲು ಸುಮಾರು 15 ದಿನಗಳವರೆಗೆ ಕಾಯಬೇಕಾಗಬಹುದು.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವೆಬ್‌ಸೈಟ್ ಪ್ರಕಾರ, ದೇವಾಲಯದ ದುರಸ್ತಿ ಅಥವಾ ನವೀಕರಣಕ್ಕಾಗಿ ಟ್ರಸ್ಟ್‌ಗೆ ನೀಡಿದ ದೇಣಿಗೆಯ ಶೇಕಡಾ 50 ರಷ್ಟು ದೇಣಿಗೆಯನ್ನು ಸೆಕ್ಷನ್ 80G (2) (B) ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು ಎಂದು ಕೇಂದ್ರ ಸರ್ಕಾರವು ಹೇಳಿದೆ. . ಆದಾಗ್ಯೂ, ನೀವು ನಗದು ರೂಪದಲ್ಲಿ ದೇಣಿಗೆ ನೀಡಿದರೆ, 2000 ರೂ.ಗಿಂತ ಹೆಚ್ಚಿನ ದೇಣಿಗೆಗಳ ಮೇಲೆ ತೆರಿಗೆ ವಿನಾಯಿತಿಯ ಪ್ರಯೋಜನ ನಿಮಗೆ ಪ್ರಾಪ್ತಿಯಾಗುವುದಿಲ್ಲ.

ರಾಮಮಂದಿರ ಟ್ರಸ್ಟ್‌ಗೆ ದೇಣಿಗೆ ನೀಡುವುದು ಹೇಗೆ?
ಇದಕ್ಕಾಗಿ, ನೀವು ಮೊದಲು https://online.srjbtkshetra.org/#/login ಗೆ ಹೋಗಬೇಕು. ಅಲ್ಲಿ ನೀವು ದೇಣಿಗೆ ಅಡಿಯಲ್ಲಿ ಡೊನೇಶನ್ ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ ಮತ್ತು ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು OTP ಅನ್ನು ನಮೂದಿಸುವ ಮೂಲಕ ಲಾಗಿನ್ ಆಗಬೇಕು.

ಲಾಗಿನ್ ಆದ ನಂತರ, ಒಂದು ಪುಟ ತೆರೆದುಕೊಳ್ಳುತ್ತದೆ, ಅಲ್ಲಿ ನೀವು PAN, ದೇಣಿಗೆಯ ಉದ್ದೇಶ, ಮೊತ್ತ, ವಿಳಾಸ, ಪಿನ್ ಕೋಡ್‌ನಂತಹ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ. ಎಲ್ಲಾ ಮಾಹಿತಿಯನ್ನು ನಮೂದಿಸಿದ ಬಳಿಕ, ನೀವು ಡೋನೇಟ್  ಕ್ಲಿಕ್ ಮಾಡಬೇಕಾಗುತ್ತದೆ, ನಂತರ ನಿಮ್ಮನ್ನು ಪಾವತಿ ಗೇಟ್‌ವೇಗೆ ಮರುನಿರ್ದೇಶಿಸಲಾಗುತ್ತದೆ. ಪಾವತಿ ಮಾಡಿದ ನಂತರ, ನೀವು ದೇಣಿಗೆಗಾಗಿ ರಶೀದಿಯನ್ನು ಪಡೆಯುತ್ತೀರಿ. ಆದಾಗ್ಯೂ, ನೀವು UPI, QRcode, ಚೆಕ್, IMPS, NEFT ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿ ಮಾಡಿದರೆ, ನಿಮಗೆ ತಕ್ಷಣ ರಸೀದಿ ಸಿಗುವುದಿಲ್ಲ ಮತ್ತು ನೀವು ಮತ್ತೆ ವೆಬ್‌ಸೈಟ್‌ಗೆ ಭೇಟಿ ನೀಡಿ ಸುಮಾರು 15 ದಿನಗಳ ನಂತರ ಅದನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.

ಇದನ್ನೂ ಓದಿ-TA Hike: ಕೇವಲ ಡಿಎ, ಹೆಚ್ಆರ್ಎ ಅಷ್ಟೇ ಅಲ್ಲ ಸರ್ಕಾರಿ ನೌಕರರ ಈ ಭತ್ಯೆ ಕೂಡ ಹೆಚ್ಚಾಗಲಿದೆ, ವೇತನದಲ್ಲಿ ಟ್ರಿಪಲ್ ಬೆನಿಫಿಟ್!

ದೇಣಿಗೆ ರಸೀದಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?
ಇದಕ್ಕಾಗಿ, ನೀವು ಮೊದಲು ಟ್ರಸ್ಟ್‌ನ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು ಮತ್ತು ನಂತರ https://online.srjbtkshetra.org/donation-receipt/ ಲಿಂಕ್‌ಗೆ ಹೋಗಬೇಕು. ಅಲ್ಲಿ ನೀವು ಡೌನ್‌ಲೋಡ್ ರಶೀದಿ ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕು. ನೀವು ಮೊಬೈಲ್ OTP ಮೂಲಕ ದೃಢೀಕರಣವನ್ನು ಸಹ ಒದಗಿಸಬೇಕಾಗುತ್ತದೆ.

ಇದನ್ನೂ ಓದಿ-Union Budget 2024: ಈ ಬಾರಿಯ ಬಜೆಟ್ ನಲ್ಲಿ ಮನೆ ಖರೀದಿಸುವವರ ಮೇಲಿನ ತೆರಿಗೆ ಭಾರ ಕಡಿಮೆಯಾಗಲಿದೆಯೇ?

ದೃಢೀಕರಣದ ನಂತರ, ಹೊಸ ವೆಬ್‌ಪುಟವು ತೆರೆಯುತ್ತದೆ, ಅಲ್ಲಿ ನೀವು ದೇಣಿಗೆ ಟ್ಯಾಬ್‌ನ ಅಡಿಯಲ್ಲಿ ದೇಣಿಗೆ ರಶೀದಿ ಬಟನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಅಲ್ಲಿ ನೀವು ನಿಮ್ಮ ಪ್ಯಾನ್, ಮೊಬೈಲ್ ಸಂಖ್ಯೆ, ಇಮೇಲ್, ವಿಳಾಸ, ದೇಣಿಗೆ ಮೊತ್ತ, ಬ್ಯಾಂಕ್ ಖಾತೆ, UPI ಉಲ್ಲೇಖ ಸಂಖ್ಯೆ, ದೇಣಿಗೆ ವಿಧಾನದಂತಹ ವಿವಿಧ ಮಾಹಿತಿಯನ್ನು ನಮೂದಿಸಬೇಕು ಮತ್ತು ಸಬ್ಮಿಟ್ ಕ್ಲಿಕ್ ಮಾಡಿ. ನಿಮ್ಮ ಪರಿಶೀಲನೆ ಮುಗಿದ ನಂತರ, ನೀವು ಈ ವೆಬ್‌ಸೈಟ್‌ನಿಂದ ದೇಣಿಗೆ ರಸೀದಿಯನ್ನು ಡೌನ್‌ಲೋಡ್ ಮಾಡಬಹುದು. https://online.srjbtkshetra.org/donation-receipt/ ಈ ಲಿಂಕ್‌ನಲ್ಲಿ ನಿಮ್ಮ ರಶೀದಿಯ ಸ್ಥಿತಿಯನ್ನು ನೀವು ಪರಿಶೀಲಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News