Ujjwala Yojana: ಹೋಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್! 1.65 ಕೋಟಿ ಜನರಿಗೆ ಉಚಿತ LPG ಸಿಲಿಂಡರ್

ಉಜ್ವಲ ಯೋಜನೆ: ಹೋಳಿ ಹಬ್ಬದಂದು ಉಚಿತ ಗ್ಯಾಸ್ ಸಿಲಿಂಡರ್ ನೀಡಲು ಯುಪಿ ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ಆಹಾರ ಮತ್ತು ಜಾರಿ ಇಲಾಖೆ ಹಾಲಿ ಸರಕಾರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಿದೆ. ಪ್ರಸ್ತುತ ರಾಜ್ಯದಲ್ಲಿ ಉಜ್ವಲ ಯೋಜನೆಯ 1.65 ಕೋಟಿ ಫಲಾನುಭವಿಗಳಿದ್ದಾರೆ.

Written by - Puttaraj K Alur | Last Updated : Mar 15, 2022, 01:39 PM IST
  • ಹೋಳಿ ಹಬ್ಬಕ್ಕೆ ಉತ್ತರಪ್ರದೇಶ ಸರ್ಕಾರದಿಂದ ಜನರಿಗೆ ಭರ್ಜರಿ ಉಡುಗೊರೆ
  • ಚುನಾವಣಾ ಭರವಸೆಯಂತೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ವಿತರಣೆ
  • ಯುಪಿ ಜನತೆಗೆ ಪಡಿತರ ಹೆಚ್ಚಿಸಲು ಕ್ರಮ ಕೈಗೊಂಡಿರುವ ಯೋಗಿ ಸರ್ಕಾರ
Ujjwala Yojana: ಹೋಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್! 1.65 ಕೋಟಿ ಜನರಿಗೆ ಉಚಿತ LPG ಸಿಲಿಂಡರ್ title=
ಹೋಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್!

ಲಕ್ನೋ: ಉತ್ತರಪ್ರದೇಶ ವಿಧಾಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಮತ್ತೊಮ್ಮೆ ಯೋಗಿ ಆದಿತ್ಯನಾಥ್(Yogi Adityanath) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ. ಇದರೊಂದಿಗೆ ಸರ್ಕಾರದ ಚುನಾವಣಾ ಭರವಸೆಗಳನ್ನು ಈಡೇರಿಸುವ ಕಾಲ ಕೂಡ ಬಂದಿದೆ. ಉಜ್ವಲ ಯೋಜನೆ(Pradhan Mantri Ujjwala Yojana)ಯಡಿ ಹೋಳಿ ಹಬ್ಬಕ್ಕೂ ಮುನ್ನವೇ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಈ ಯೋಜನೆಯಡಿ ಹೋಳಿ ಹಬ್ಬದ ಸಂದರ್ಭದಲ್ಲಿ ಯುಪಿ ಸರ್ಕಾರವು ರಾಜ್ಯದ ಜನರಿಗೆ ದೊಡ್ಡ ಉಡುಗೊರೆಯನ್ನು ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಹೋಳಿ ಹಬ್ಬದ ಉಡುಗೊರೆ

ಈ ಬಾರಿಯ ಹೋಳಿ ಹಬ್ಬಕ್ಕೆ ಮೊದಲು ಉಚಿತ ಗ್ಯಾಸ್ ಸಿಲಿಂಡರ್(Free Gas Cylinder) ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ಆಹಾರ ಮತ್ತು ಜಾರಿ ಇಲಾಖೆ ಹಾಲಿ ಸರಕಾರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಿದೆ. ಪ್ರಸ್ತುತ ರಾಜ್ಯದಲ್ಲಿ ಉಜ್ವಲ ಯೋಜನೆ(Ujjwala Yojana)ಯ 1.65 ಕೋಟಿ ಫಲಾನುಭವಿಗಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಭರವಸೆಯನ್ನು ಈಡೇರಿಸಲು ಸರ್ಕಾರದ ಮೇಲೆ 3,000 ಕೋಟಿ ರೂ. ಹೊರೆ ಬೀಳಲಿದೆ.

ಇದನ್ನೂ ಓದಿ: Post Office ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಕೇವಲ 5 ವರ್ಷದಲ್ಲಿ ₹14 ಲಕ್ಷ ಲಾಭ ಪಡೆಯಿರಿ 

ಯುಪಿ ಜನರಿಗೆ ಭರವಸೆ ನೀಡಲಾಗಿತ್ತು

ಬಿಜೆಪಿ ತನ್ನ ವಿಧಾನಸಭಾ ಚುನಾವಣೆಯ ನಿರ್ಣಯ ಪತ್ರದಲ್ಲಿ ಹೋಳಿ(Holi Festival) ಮತ್ತು ದೀಪಾವಳಿಯಂದು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ನೀಡುವುದಾಗಿ ಘೋಷಿಸಿತ್ತು. ಚುನಾವಣೆಯಲ್ಲಿ ಬಹುಮತ ಪಡೆದ ನಂತರ ಬಿಜೆಪಿ ಹೋಳಿ ಹಬ್ಬಕ್ಕೆ ಈ ಭರವಸೆ ಈಡೇರಿಸಲು ಸಿದ್ಧತೆ ನಡೆಸುತ್ತಿದೆ. ಆಹಾರ ಮತ್ತು ಜಾರಿ ಇಲಾಖೆ ಸೋಮವಾರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಬಳಿಕ ಹಣಕಾಸು ಇಲಾಖೆಯಿಂದ ಬಜೆಟ್ ಬಿಡುಗಡೆ ಮಾಡಿ ಜಿಲ್ಲೆಗಳಲ್ಲಿ ಉಚಿತ ಸಿಲಿಂಡರ್(Free Gas Cylinder) ವಿತರಿಸಲಾಗುವುದು. ಬಿಜೆಪಿ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ನೀಡಲು ಆರಂಭಿಸಿದೆ.

ಉಚಿತ ಪಡಿತರವನ್ನೂ ಹೆಚ್ಚಿಸಲಾಗುವುದು

ಇದರೊಂದಿಗೆ ಯೋಗಿ ಸರ್ಕಾರವು ಉಚಿತ ಪಡಿತರ ಯೋಜನೆ(Free Ration Scheme)ಯನ್ನು ಹೆಚ್ಚಿಸಲು ಪ್ಲಾನ್ ಮಾಡಿದೆ. ಇದಕ್ಕಾಗಿಯೂ ಸರ್ಕಾರ ಆಹಾರ ಮತ್ತು ಜಾರಿ ಇಲಾಖೆಯಿಂದ ಪ್ರಸ್ತಾವನೆ ಕೇಳಿದೆ. ಇದಕ್ಕೂ ಮುನ್ನ ಡಿಸೆಂಬರ್‌ನಿಂದ ಸರ್ಕಾರ ಉಚಿತ ಪಡಿತರ ನೀಡುತ್ತಿದೆ. ಇದರ ಗಡುವು ಮಾರ್ಚ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ರಾಷ್ಟ್ರೀಯ ಆಹಾರ ಭದ್ರತೆಯಡಿ ಲಭ್ಯವಿರುವ ಗೋಧಿ ಮತ್ತು ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಕಾಳು, ಉಪ್ಪು ಮತ್ತು ಎಣ್ಣೆಯನ್ನು ಸಹ ಸರ್ಕಾರ ನೀಡುತ್ತಿದೆ. ಉಜ್ವಲ ಯೋಜನೆಯಡಿ 2 ಸಿಲಿಂಡರ್ ಮತ್ತು ಉಚಿತ ಪಡಿತರ ನೀಡುವ ಯೋಜನೆಯನ್ನು ಜಾರಿಗೊಳಿಸುವುದಾಗಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ(PM Modi) ಮತ್ತು ಯೋಗಿ ಆದಿತ್ಯನಾಥ್ ಘೋಷಿಸಿದ್ದರು.

ಇದನ್ನೂ ಓದಿ: SBI Latest Rule: ಎಟಿಎಂನಿಂದ ಹಣ ವಿತ್ ಡ್ರಾ ನಿಯಮಗಳಲ್ಲಿ ಬದಲಾವಣೆ

ಸರ್ಕಾರದ ಮೇಲೆ ಬೀಳುವ ಹೆಚ್ಚುವರಿ ಹೊರೆ

ಗೋಧಿ ಮತ್ತು ಅಕ್ಕಿ - ತಿಂಗಳಿಗೆ 290 ಕೋಟಿ ರೂ., 4 ತಿಂಗಳಿಗೆ 1,160 ಕೋಟಿ ರೂ.

ಕಾಳು, ಉಪ್ಪು & ಎಣ್ಣೆ - ತಿಂಗಳಿಗೆ 750 ಕೋಟಿ ರೂ., 4 ತಿಂಗಳಿಗೆ 3,000 ಕೋಟಿ ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News