ಸೆಕ್ಸ್‌ಗೆ ಸಪೋರ್ಟ್ ಮಾಡಿಲ್ಲ ಅಂತಾ ಕೊಂದೇಬಿಟ್ಟ: ಸಲಿಂಗಕಾಮಿಗಳ ಸರಸ ಕೊಲೆಯಲ್ಲಿ ಅಂತ್ಯ!

ಕೃತ್ಯದ ಹಿಂದೆ ರಕ್ಷಿತ್ ಎಂಬಾತ ಭಾಗಿಯಾಗಿರುವುದು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಸೆಕ್ಸ್ ವಿಚಾರಕ್ಕಾಗಿ ಪ್ರದೀಪ್‌ನನ್ನ ಹತ್ಯೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  

Written by - VISHWANATH HARIHARA | Edited by - Bhavishya Shetty | Last Updated : Jun 10, 2022, 04:42 PM IST
  • ಸೆಕ್ಸ್ ವಿಚಾರಕ್ಕಾಗಿ ಸಲಿಂಗಕಾಮಿಗಳ ಮಧ್ಯೆ ಗಲಾಟೆ
  • ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯ
  • ಮಡಿವಾಳ ಪೊಲೀಸರಿಂದ ಪ್ರಕರಣ ದಾಖಲು
ಸೆಕ್ಸ್‌ಗೆ ಸಪೋರ್ಟ್ ಮಾಡಿಲ್ಲ ಅಂತಾ ಕೊಂದೇಬಿಟ್ಟ: ಸಲಿಂಗಕಾಮಿಗಳ ಸರಸ ಕೊಲೆಯಲ್ಲಿ ಅಂತ್ಯ! title=
Murder in Bengaluru

ಬೆಂಗಳೂರು: ಸೆಕ್ಸ್ ವಿಚಾರಕ್ಕಾಗಿ ಸಲಿಂಗಕಾಮಿಗಳ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಹತ್ಯೆ ಆರೋಪದಡಿ ಆರೋಪಿಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಮೂಡಲಪಾಳ್ಯ ನಿವಾಸಿ ರಕ್ಷಿತ್ ಗೌಡ ಬಂಧಿತ ಆರೋಪಿ. 

ಇದನ್ನೂ ಓದಿ: Airtel, Jio Or Vi: ನಿತ್ಯ ಡೇಟಾ ಲಿಮಿಟ್ ಖಾಲಿಯಾಯ್ತಾ? ಚಿಂತೆ ಬಿಟ್ಟು ಈ ಸುದ್ದಿಯನ್ನು ಓದಿ

ಮಡಿವಾಳದ ಕ್ಯಾಷಿಯರ್ ಲೇಔಟ್‌ನಲ್ಲಿ ವಾಸವಾಗಿದ್ದ ಪ್ರದೀಪ್ ಕೊಲೆಯಾದ ವ್ಯಕ್ತಿ. ಕಳೆದ ತಿಂಗಳು ಪ್ರದೀಪ್‌ನನ್ನ‌ ಆತನ ಮನೆಯಲ್ಲಿ ಕೊಂದು ಬೀಗ ಹಾಕಿ ಎಸ್ಕೇಪ್ ಆಗಿದ್ದ‌‌. ನಾಲ್ಕು ದಿನಗಳ ಬಳಿಕ ಮನೆಯಲ್ಲಿ ಕೊಳೆತ ಶವದ ವಾಸನೆ ಬರುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ‌‌. ಸ್ಥಳಕ್ಕೆ ಬಂದು ಮನೆ ಬೀಗ ಒಡೆದು ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ‌‌‌.‌ ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡ ಮಡಿವಾಳ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.

ಕೃತ್ಯದ ಹಿಂದೆ ರಕ್ಷಿತ್ ಎಂಬಾತ ಭಾಗಿಯಾಗಿರುವುದು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಸೆಕ್ಸ್ ವಿಚಾರಕ್ಕಾಗಿ ಪ್ರದೀಪ್‌ನನ್ನ ಹತ್ಯೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Priyanka Chopra: 22 ವರ್ಷಗಳ ಹಿಂದೆ ಹಿಂಗಿದ್ರು ನಟಿ ಪ್ರಿಯಾಂಕಾ ಚೋಪ್ರಾ!

ಇನ್ನೂ ಕೊಲೆಯಾದ ಪ್ರದೀಪ್ ಪುರುಷನಾದರೂ ಹೆಣ್ಣಿನ ರೀತಿ ವೇಷ ಧರಿಸುತ್ತಿದ್ದ. ಸ್ಥಳೀಯರೆಲ್ಲರೂ ಈತನನ್ನ ಹೆಂಗಸು ಎಂದೇ ಭಾವಿಸಿದ್ದರು. ಕ್ಯಾಷಿಯರ್ ಲೇಔಟ್‌ನಲ್ಲಿ‌ ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ಪ್ರದೀಪ್ ಜೀವನಕ್ಕಾಗಿ‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.‌ ಪುರುಷರೊಂದಿಗೆ ಸಂಬಂಧದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ. ಮತ್ತೊಂದೆಡೆ ಆಟೋ ಚಾಲಕನಾಗಿದ್ದ ಆರೋಪಿ ರಕ್ಷಿತ್ ಪ್ರದೀಪ್ ಮನೆಗೆ ಎರಡು ಮೂರು ಬಂದು ಹೋಗಿದ್ದ. ಈ ವೇಳೆ ಇಬ್ಬರ ನಡುವೆ ಲೈಂಗಿಕ ಕ್ರಿಯೆ ನಡೆದಿದೆ. ‌ಆರಂಭದಲ್ಲಿ ಪ್ರದೀಪ್‌ನನ್ನು ಹೆಂಗಸು ಎಂಸು ಭಾವಿಸಿದ್ದ ಆರೋಪಿಯು ತದನಂತರ ವಿಷಯ ಗೊತ್ತಾದರೂ ಸೆಕ್ಸ್ ಮುಂದುವರೆಸಿದ್ದ. ಕಳೆದ ತಿಂಗಳು 28 ರಂದು ಆರೋಪಿ ರಕ್ಷಿತ್ ಪ್ರದೀಪ್ ಮನೆಗೆ ಬಂದಿದ್ದ.‌ ಕುಡಿದ ಅಮಲಿನಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಇಬ್ಬರು ಜಗಳ‌ ಮಾಡಿಕೊಂಡಿದ್ದಾರೆ‌. ಮೊದಲು ಚಾಕುವಿನಿಂದ‌ ಪ್ರದೀಪ್ ರಕ್ಷಿತ್ ಮೇಲೆ ಹಲ್ಲೆ ಮಾಡಿದ್ದಾನೆ.‌ ಪ್ರತಿರೋಧವಾಗಿ ಅದೇ ಚಾಕುವಿನಿಂದ  ರಕ್ಷಿತ್, ಪ್ರದೀಪ್ ಹೊಟ್ಟೆಗೆ ತಿವಿದು ಹತ್ಯೆ ಮಾಡಿ ಮನೆಗೆ ಬೀಗ ಜಡಿದು ಎಸ್ಕೇಪ್ ಆಗಿದ್ದ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News