ಕ್ಯಾಂಟರ್ ಚಾಲಕನ ಅಜಾಗರೂಕತೆಗೆ ಎರಡು ಜೀವ ಬಲಿ..! ಭಯಾನಟ ದೃಶ್ಯ ಸಿಸಿಟಿವಿಯಲ್ಲಿ ಸೆರೆ 

ಹಾಲೋಬ್ಲಾಕ್ ತುಂಬಿದ್ದ ಕ್ಯಾಂಟರ್ ವೊಂದು ಏಕಾ ಏಕಿ ಡೌನ್ ನಲ್ಲಿ ಬಂದಿದೆ. ಹೀಗೆ ಬಂದ ಕ್ಯಾಂಟರ್ ಎದುರಿನಿಂದ ಬೈಕ್ ಗೆ ಗುದ್ದಿದೆ. ಈ ವೇಳೆ ಇಬ್ಬರು ಬೈಕ್ ನಿಂದ ಕೆಳಗೆ ಬಿದ್ದಿದ್ದು. ಇಬ್ಬರು ಟೈರ್ ಅಡಿಯಲ್ಲಿ ಸಿಲುಕಿದ್ರೆ ಸುಮಾರು 150 ರಿಂದ 200 ಮೀಟರ್ ಇಬ್ಬರನ್ನು ಕ್ಯಾಂಟರ್ ಎಳೆದೊಯ್ದಿದೆ.. ಹೆಚ್ಚಿನ ಮಾಹಿತಿ.. ಇಲ್ಲಿದೆ..

Written by - VISHWANATH HARIHARA | Edited by - Krishna N K | Last Updated : Aug 17, 2024, 08:59 PM IST
    • ಕ್ಯಾಂಟರ್‌ ಮತ್ತು ಬೈಕ್‌ ನಡುವೆ ಭೀಕರ ಅಪಘಾರ
    • ಘಟನೆಯಲ್ಲಿ 2 ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
    • ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಕ್ಯಾಂಟರ್ ಚಾಲಕನ ಅಜಾಗರೂಕತೆಗೆ ಎರಡು ಜೀವ ಬಲಿ..! ಭಯಾನಟ ದೃಶ್ಯ ಸಿಸಿಟಿವಿಯಲ್ಲಿ ಸೆರೆ  title=

ಬೆಂಗಳೂರು : ಅವ್ರು ತಮ್ಮ ಪಾಡಿಗೆ ತಾವು ಬೈಕ್ ನಲ್ಲಿ ಬರ್ತಾ ಇದ್ರು, ಆದ್ರೆ ಎದುರಿನಿಂದ ಯಮ ಸ್ವರೂಪಿಯಾಗಿ ಬಂದ ಕ್ಯಾಂಟರ್, ಇಬ್ಬರ ಬಲಿ ಪಡೆದಿದೆ.. ನೋಡ ನೋಡ್ತಿದ್ದಂತೆ ಇಬ್ಬರು ಟೈರ್ ಅಡಿಯಲ್ಲಿ ಸಿಲುಕಿ ಅಪ್ಪಚ್ಚಯಾಗಿ ಹೋಗಿದ್ರು.. ಭಯಾನಕ‌ ದೃಶ್ಯ ಕಂಡ ಏರಿಯಾ ಜನ ಬೆಚ್ಚಿ ಬಿದ್ದಿದ್ರು, ಹಾಗಾದ್ರೆ ಅಪಘಾತದ ಭಯಾನಕತೆ ಹೇಗಿತ್ತು ಇಲ್ಲಿದೆ ಡಿಟೈಲ್ಸ್‌..

ಈ ಸಿಸಿಟಿವಿ ದೃಶ್ಯ ನೋಡಿ ಕ್ಯಾಂಟರ್ ಅದ್ಹೇಗೆ ಬೈಕ್ ಗಳನ್ನೇ ಹೊತ್ತಿ ಮುಂದೆ ಅಡ್ಡಾದಿಡ್ಡಿ ಹೋಗ್ತಿದೆ ಅಂತಾ.. ಬೈಕ್ ಮಾತ್ರವಲ್ಲ ಅದರ ಟೈರ್ ಅಡಿಯಲ್ಲಿ ಸಿಲುಕಿ ಇಬ್ಬರು ವಿಲ ವಿಲ ಅಂತಾ ಒದ್ದಾಡಿ ಪ್ರಾಣ ಬಿಟ್ಟಿದ್ರೆ ಇಡೀ ದೇಹ ಮಾಂಸದ ಮುದ್ದೆಯಾಗಿತ್ತು.. ಈ ಭಯನಾಕತೆ ಕಂಡ ಏರಿಯಾ ಜನ ಬೆಚ್ಚಿಬಿದ್ದಿದ್ರು..

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು
 
ಹೌದು ಇದು ಸ್ಯಾಟಲೈಟ್ ಸಮೀಪದ ಹೊಸಗುಡ್ಡದಹಳ್ಳಿ ಏರಿಯಾ. ಬೆಳಗ್ಗೆ 8.28 ರ ಸಮಯ. ಬೈಕ್ ನಲ್ಲಿ ಬನಾರಸ್ ಮೂಲದ 21 ವರ್ಷದ ಶಾಹಿಬ್ ರಾಝಾ ಮತ್ತು 6 ನೇ ತರಗತಿ ವಿದ್ಯಾರ್ಥಿ 14 ವರ್ಷದ ರೆಹಾನ್ ರಾಝಾ ಎಂಬ ಬಾಲಕ ಇಬ್ರು ಬರ್ತಾ ಇದ್ರು.. ಈ ವೇಳೆ ಹಾಲೋಬ್ಲಾಕ್ ತುಂಬಿದ್ದ ಕ್ಯಾಂಟರ್ ವೊಂದು ಏಕಾ ಏಕಿ ಡೌನ್ ನಲ್ಲಿ ಬಂದಿದೆ. ಹೀಗೆ ಬಂದ ಕ್ಯಾಂಟರ್ ಎದುರಿನಿಂದ ಬೈಕ್ ಗೆ ಗುದ್ದಿದೆ.

ಈ ವೇಳೆ ಇಬ್ಬರು ಬೈಕ್ ನಿಂದ ಕೆಳಗೆ ಬಿದ್ದಿದ್ದು. ಇಬ್ಬರು ಟೈರ್ ಅಡಿಯಲ್ಲಿ ಸಿಲುಕಿದ್ರೆ ಸುಮಾರು 150 ರಿಂದ 200 ಮೀಟರ್ ಇಬ್ಬರನ್ನು ಕ್ಯಾಂಟರ್ ಎಳೆದೊಯ್ದಿದೆ. ಇಬ್ಬರು ಹಿಂಬದಿ ಟೈರ್ ಗೆ ಸಿಲುಕಿ ಮೃತಪಟ್ಟಿದ್ದು ಮಾಂಸದ ಮುದ್ದೆ ಆಗಿದ್ರು. ಅಷ್ಟೇ ಅಲ್ಲಾ ರಸ್ತೆ ಬದಿ ನಿಲ್ಲಿಸಿದ್ದ 7 ಬೈಕ್ ಹಾಗೂ 2 ಕಾರು ಘಟನೆಯಲ್ಲಿ ಜಖಂ ಆಗಿದೆ. ಬೈಕ್ ಮುಂಬದಿಗೆ ಸಿಲುಕಿರಲಿಲ್ಲ ಅಂದಿದ್ರೆ ಕ್ಯಾಂಟರ್ ಮತ್ತಷ್ಟು ಮುಂದಕ್ಕೆ ಹೋಗಿ ಭಾರೀ ಅನಾಹುತವೇ ನಡೆದುಹೋಗ್ತಿತ್ತು.

ಇದನ್ನೂ ಓದಿ:ರಾಜ್ಯಪಾಲರ ಆದೇಶವನ್ನು ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ

ಇನ್ನೂ ಘಟನೆ ಕಾರಣ ಏನಂದ್ರೆ ಇದೇ ರಸ್ತೆಯಲ್ಲಿ ಮನೆಯೊಂದರ ಕಾಮಗಾರಿ ನಡೀತಿತ್ತು. ಅದಕ್ಕೆ ಬೇಕಾಗುವ ಹಾಲೋಬ್ಲಾಕ್ ಅನ್ನ ಇದೇ ಕ್ಯಾಂಟರ್ ನಲ್ಲಿ ತರಿಸಲಾಗಿತ್ತು.. ಅದನ್ನ ಇಳಿಸುವ ವೇಳೆ ಡ್ರೈವರ್ ಸುರೇಶ್  ಕ್ಯಾಂಟರ್ ನನ್ನ ನಿಧಾನವಾಗಿ ಮೂವ್ ಮಾಡಲು ನೋಡಿದ್ದಾನೆ. ಹೇಳಿ ಕೇಳಿ ಇಳಿಜಾರು ಇದ್ದಿದ್ರಿಂದ ಕ್ಯಾಂಟರ್ ಮೂವ್ ಆಗಿದ್ದು ಚಾಲಕನ ನಿಯಂತ್ರಣ ತಪ್ಪಿ. ಎರಡು ಬಲಿ ಪಡೆದಿದೆ..

ಘಟನೆ ಆಗ್ತಿದ್ದಂತೆ ಚಾಲಕ ಎಸ್ಕೇಪ್ ಆಗಿದ್ದು ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಮೃತ ಶಾಹಿಬ್ ರಾಝಾ ಸೀರೆ ನೇಯುವ ಕೆಲಸ ಮಾಡ್ತಿದ್ದ ಅನ್ನೋದು ಗೊತ್ತಾಗಿದ್ದು, ಇದೇ ರಸ್ತೆಯ ಕೊನೆಯಲ್ಲಿ ಆತನ ಮನೆ ಇತ್ತು ಎನ್ನಲಾಗಿದ್ದು. ಬೆಳಗ್ಗೆ ಅಂಗಡಿಗೆ ತರಲು ಹೋದಾಗ ಅವಘಡ ನಡೆದಿದೆ.

ಘಟನೆ ಸಂಬಂಧ ಬ್ಯಾಟರಾಯನಪುರ‌ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ನಜ್ಜುಗುಜ್ಜಾಗಿದ್ದು ಬೈಕ್ ಗಳನ್ನೆಲ್ಲ ಪೊಲೀಸರು ಠಾಣೆಗೆ ತೆಗೆದುಕೊಂಡು ಹೋಗಿದ್ದು ಅಪಘಾತಕ್ಕೆ ಅಸಲಿ ಕಾರಣ ಏನ್ನು ಅನ್ನೋದಕ್ಕೆ ಅಂಬಂಧಪಟ್ಟಂತೆ ತನಿಖೆ ಮುಂದುವರೆಸಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News