‘ಆರಾಮ್ ಅರವಿಂದ ಸ್ವಾಮಿ’ ಟೈಟಲ್‌ ಟ್ರ್ಯಾಕ್‌ ಔಟ್!

Aaram Aravindaswamy Update: ಚಂದನವನದ ಅಕಿರಾ ಸಿನಿಮಾ ಖ್ಯಾತಿಯ ನಟ ಅನೀಶ್‌ ತೇಜೇಶ್ವರ್‌ ಹುಟ್ಟು ಹಬ್ಬದ ಹಿನ್ನೆಲೆ  ಜನವರಿ 12 ರಂದು, ಬಹುನಿರೀಕ್ಷಿತ ‘ಆರಾಮ್ ಅರವಿಂದ ಸ್ವಾಮಿ’ ಚಿತ್ರದ ಟೈಟಲ್ ಟ್ರ‍್ಯಾಕ್‌ ರಿಲೀಸ್‌ ಆಗಿದೆ.  

Written by - Zee Kannada News Desk | Last Updated : Jan 13, 2024, 09:34 AM IST
  • ಕಳೆದ ವರ್ಷ ನಟ ಅನೀಶ್‌ ಜನ್ಮದಿನದಂದು ಇದೇ ಚಿತ್ರದ ಸ್ಪೆಷಲ್‌ ವಿಡಿಯೋವೊಂದು ರಿಲೀಸ್‌ ಮಾಡಲಾಗಿತ್ತು.
  • ಅನೀಶ್‌ ತೇಜೇಶ್ವರ್‌ ಹುಟ್ಟು ಹಬ್ಬದ ಹಿನ್ನೆಲೆ ಜನವರಿ 12 ರಂದು, ‘ಆರಾಮ್ ಅರವಿಂದ ಸ್ವಾಮಿ’ ಟೈಟಲ್ ಟ್ರ‍್ಯಾಕ್‌ ಬಿಡುಗಡೆಯಾಗಿದೆ.
  • ಪ್ರಮೋಷನ್ ಕಂಟೆಂಟ್‌ನಿಂದಲೇ ಸದ್ದು ಮಾಡುತ್ತಿರುವ ‘ಆರಾಮ್ ಅರವಿಂದ ಸ್ವಾಮಿ’ ಸಿನಿಮಾಗೆ ಅಭಿಷೇಕ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಆರಾಮ್ ಅರವಿಂದ ಸ್ವಾಮಿ’ ಟೈಟಲ್‌ ಟ್ರ್ಯಾಕ್‌ ಔಟ್! title=

Aaram Aravindaswamy Title Track: ಸ್ಯಾಂಡಲ್‌ವುಡ್‌ ನಟ ಅನೀಶ್‌ ತೇಜೇಶ್ವರ್‌ ಹುಟ್ಟು ಹಬ್ಬದ ಹಿನ್ನೆಲೆ  ಜನವರಿ 12 ರಂದು, ‘ಆರಾಮ್ ಅರವಿಂದ ಸ್ವಾಮಿ’ ಟೈಟಲ್ ಟ್ರ‍್ಯಾಕ್‌ ಬಿಡುಗಡೆಯಾಗಿದೆ. ಕಳೆದ ವರ್ಷ ನಟ ಅನೀಶ್‌ ಜನ್ಮದಿನದಂದು ಇದೇ ಚಿತ್ರದ ಸ್ಪೆಷಲ್‌ ವಿಡಿಯೋವೊಂದು ರಿಲೀಸ್‌ ಮಾಡಲಾಗಿತ್ತು. ಆದರೆ ಈ ವರ್ಷ ಅನೀಶ್‌ ಅಭಿನಯದ ಬಹುನಿರೀಕ್ಷಿತ ‘ಆರಾಮ್ ಅರವಿಂದ ಸ್ವಾಮಿ’ ಸಿನಿಮಾದ ಶೀರ್ಷಿಕೆ ಗೀತೆಯನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

‘ಆರಾಮ್ ಅರವಿಂದ ಸ್ವಾಮಿ’  ಚಿತ್ರದ ಮೊದಲ ಹಾಡು ನಿಶಾನ್ ರೈ ಕಂಠ ಕುಣಿಸಿದ್ದು, ಇದಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡಿದ್ದಾರೆ. ಈ ಸಾಂಗ್‌ನ ಅಧ್ಬುತ ಸಾಲುಗಳನ್ನು ನಾಗಾರ್ಜುನ್ ಶರ್ಮಾ ಪದಪುಂಜ ಬರೆದಿದ್ದಾರೆ. ಚಿತ್ರದ ನಾಯಕನ ಗುಣವನ್ನು ವರ್ಣಿಸುವ ಈ ಟೈಟಲ್ ಟ್ರ‍್ಯಾಕ್‌ನಲ್ಲಿ ನಟ ಅನೀಶ್ ಜಬರ್ದಸ್ತ್ ಆಗಿ ಸ್ಟೆಪ್‌ ಹಾಕಿ ಕುಪ್ಪಳಿಸಿದ್ದಾರೆ. ಸದ್ಯ ಈ ಹಾಡು ಬಾಬಾ ಭಾಸ್ಕರ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಮೂಡಿ ಬಂದಿದೆ. 

ಇದನ್ನೂ ಓದಿ: Thaina Fields: ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ ಕೆಲವೇ ತಿಂಗಳಲ್ಲಿ ನಟಿಯ ನಿಗೂಢ ಸಾವು!

ಈಗಾಗಲೇ ತನ್ನ  ಪ್ರಮೋಷನ್ ಕಂಟೆಂಟ್‌ನಿಂದಲೇ ಸದ್ದು ಮಾಡುತ್ತಿರುವ ‘ಆರಾಮ್ ಅರವಿಂದ ಸ್ವಾಮಿ’ ಸಿನಿಮಾಗೆ ಅಭಿಷೇಕ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದು, ಸದ್ಯ ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಶೂಟಿಂಗ್ ಮುಗಿಸಿ ರಿಲೀಸ್‌ಗೆ ಸಜ್ಜಾಗುತ್ತಿದೆ. ನಮ್ ಗಣಿ ಬಿಕಾಂ ಪಾಸ್, ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೂರನೇ ಸಿನಿಮಾ ಇದಾಗಿದೆ.

‘ಆರಾಮ್ ಅರವಿಂದ ಸ್ವಾಮಿ’ ಸಿನಿಮಾದಲ್ಲಿ ಅನೀಶ್ ತೇಜೇಶ್ವರ್‌ಗೆ ಜೋಡಿಯಾಗಿ ಮಿಲನ ನಾಗರಾಜ್  ಮತ್ತು ಹೃತಿಕ ಶ್ರೀನಿವಾಸ್ ನಟಿಸುತ್ತಿದ್ದಾರೆ.‘ಅಕಿರ’ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್ ಬಿ ಸಂಕಲನ ಚಿತ್ರಕ್ಕಿದೆ. 2021 ರಲ್ಲಿ ರಾಮಾರ್ಜುನ ಸಿನಿಮಾ ಕೊನೆಯದಾಗಿ ಕಾಣಿಸಿಕೊಂಡ ಅನೀಶ್‌ ಶೀಘ್ರದಲ್ಲೇ ‘ಆರಾಮ್ ಅರವಿಂದ ಸ್ವಾಮಿ’ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News