ದರ್ಶನ್ ಪತ್ನಿ ವಿಜಯಲಕ್ಷ್ಮಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು 'ಈ' ಕಾರಣಕ್ಕೆ!

Vijayalakshmi Darshan: ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.   

Written by - Yashaswini V | Last Updated : Jul 24, 2024, 03:28 PM IST
  • ಮಾಧ್ಯಮದಲ್ಲಿ ‌ಏನು ಬರ್ತಿದೆ ಎಂದು ನೋಡಲು ನನಗೆ ಸಮಯ ಇಲ್ಲ
  • ಒಂದೊಂದು ಟಿವಿಯಲ್ಲಿ ಒಂದೊಂದು ಬರುತ್ತೆ, ನಾನು ಗೃಹ ಸಚಿವ‌ ಅಲ್ಲ
  • ಪೋಲಿಸ್ ತನಿಖೆಯಲ್ಲಿ ನಾವು ಇಂಟರ್​​ಫಿಯರ್​ ಆಗಲು ಸಾಧ್ಯವಿಲ್ಲ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು 'ಈ' ಕಾರಣಕ್ಕೆ!  title=

Vijayalakshmi Darshan Met DK Shivakumar: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಿದ್ದಾರೆ. ಆದರೆ ವಿಜಯಲಕ್ಷ್ಮಿ ಭೇಟಿಯಾಗಿದ್ದು ದರ್ಶನ್ ವಿಚಾರವಾಗಿ ಅಲ್ಲ, ಮತ್ತೊಂದು ಪ್ರಮುಖ ವಿಷಯಕ್ಕಾಗಿ ಎಂದು ತಿಳಿದುಬಂದಿದೆ. 

ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ನಿನ್ನೆ (ಜುಲೈ 23) ನನ್ನ ಕ್ಷೇತ್ರದ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೇಳೆ ವಿಜಯಲಕ್ಷ್ಮಿ ಅವರು ನನ್ನ ಭೇಟಿಗಾಗಿ ಬಂದಿದ್ದರು. ಆದರೆ, ನಾನು ಒಪ್ಪಲಿಲ್ಲ. ಬೆಳಿಗ್ಗೆ ಮನೆ ಹತ್ತಿರ ಬಂದು ಭೇಟಿಯಾಗುವಂತೆ ತಿಳಿಸಿದ್ದೆ. ಆ ಹೆಣ್ಣು ಮಗು ಭೇಟಿಗೆ ಸಮಯ ಕೇಳಿದ್ರು ಸಮಯ ಕೊಟ್ಟಿದ್ದೆ. ಅದರಂತೆ ಅವರು ಇಂದು ನನ್ನನ್ನು ಭೇಟಿಯಾಗಿದ್ದಾರೆ ಎಂದು ತಿಳಿಸಿದರು. 

ಇದನ್ನೂ ಓದಿ- ಜೈಲಿನಲ್ಲಿ ಮದುವೆ ಬಗ್ಗೆ ತರುಣ್ ಸುಧೀರ್'ಗೆ ದರ್ಶನ್ ಹೇಳಿದ್ದೇನು ಗೊತ್ತಾ?

'ಈ' ವಿಚಾರಕ್ಕಾಗಿಯೇ ಡಿಕೆಶಿ ಭೇಟಿಯಾದ ವಿಜಯಲಕ್ಷ್ಮಿ: 
ವಿಜಯಲಕ್ಷ್ಮಿ ದರ್ಶನ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM DK Shivakumar) ಅವರನ್ನು ಭೇಟಿಯಾಗಿರುವುದು ಪತಿಯ ವಿಚಾರಕ್ಕಾಗಿ ಅಲ್ಲ, ತಮ್ಮ ಮಗ ವಿನೀಶ್ (Vinish) ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಡಿ.ಕೆ. ಶಿವಕುಮಾರ್, ವಿಜಯಲಕ್ಷ್ಮಿ ಅವರು ತಮ್ಮ ಮಗನನ್ನು ನಮ್ಮ ಶಾಲೆಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ನಾನು ನಮ್ಮ ಪ್ರಿನ್ಸಿಪಾಲ್ ಗೆ ಹೇಳ್ತೀನಿ ಎಂದು ಹೇಳಿದ್ದೇನೆ. ಶಾಲೆಯ ದಾಖಲಾತಿಗೆ ಒಂದಷ್ಟು ನಿಯಮಾವಳಿಗಳಿವೆ. ನಾನು ಶಾಲೆಗೆ ಅಷ್ಟಾಗಿ ಭೇಟಿ ನೀಡುತ್ತಿಲ್ಲ. ಶಾಲೆಯ ಆಡಳಿತ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಕ್ಕಳಿಗೆ ವಹಿಸಿದ್ದೇನೆ. ವಿಜಯಲಕ್ಷ್ಮಿ ಅವರು ಮಗನ ಭವಿಷ್ಯದ ದೃಷ್ಟಿಯಿಂದ ಬಂದಿದ್ದರು. ಜತೆಗೆ ನಮ್ಮ ಶಾಲೆಯ ಪಕ್ಕದಲ್ಲೇ ಅವರ ನಿವಾಸವಿದೆ. ನಾನು ಆ ಮಗುವಿಗೆ ಒಳ್ಳೆಯದಾಗಲಿ ಎಂದು ಪ್ರಾಂಶುಪಾರನ್ನು ಭೇಟಿ ಮಾಡಲು ಹೇಳಿದ್ದೇನೆ ಎಂದು 
ಹೇಳಿದರು. 

ಇದನ್ನೂ ಓದಿ- ಅಪ್ಪಾ... ನಿನ್ನ ಸ್ನೇಹಿತರು ಯಾವಾಗಲು ಒಳ್ಳೆಯವರು ಇರಬೇಕು: ಜೈಲಲ್ಲಿರುವ ದಾಸನಿಗೆ ಮಗನ ನೀತಿ ಪಾಠ!

ನಾನ್​ ಇಂಟರ್​​ಫಿಯರ್​ ಆಗಲ್ಲ: 
ಈ ವೇಳೆ ದರ್ಶನ್ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ದರ್ಶನ್ ಕೇಸ್ ಬಗ್ಗೆ ವಿಜಯಲಕ್ಷ್ಮಿ ಅವರೂ ಏನೂ ಮಾತಾಡಿಲ್ಲ. ನಾನೂ ಏನನ್ನೂ ಮಾತನಾಡಲು ಹೋಗಿಲ್ಲ. ಏನಾದರೂ ತೊಂದರೆಯಾಗಿದ್ದರೆ ಅದಕ್ಕಾಗಿ ಕಾನೂನಿದೆ. ಪೋಲಿಸ್ ತನಿಖೆಯಲ್ಲಿ ನಾವು ಇಂಟರ್​​ಫಿಯರ್​  ಆಗಲು ಸಾಧ್ಯವಿಲ್ಲ ಎಂದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News