ಜೈಲಿನಲ್ಲಿ ಮದುವೆ ಬಗ್ಗೆ ತರುಣ್ ಸುಧೀರ್'ಗೆ ದರ್ಶನ್ ಹೇಳಿದ್ದೇನು ಗೊತ್ತಾ?

Actor Darshan: 'ಕಾಟೇರ' ನಿರ್ದೇಶಕ ತರುಣ್ ಸುಧೀರ್ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಜೈಲು ಸೇರಿದ ಬಳಿಕ ಇದೇ ಮೊದಲ ಬಾರಿಗೆ ತರುಣ್ 'ದಾಸ'ನನ್ನು ಭೇಟಿ ಆಗಿದ್ದಾರೆ. 

Written by - Yashaswini V | Last Updated : Jul 19, 2024, 03:12 PM IST
  • ಆಗಸ್ಟ್ 10, 11ಕ್ಕೆ ತರುಣ್ ಹಾಗೂ ನಟಿ ಸೋನಾಲ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ.
  • ದರ್ಶನ್ ಅನುಪಸ್ಥಿತಿಯಲ್ಲಿ ಹಸೆಮಣೆ ಏರಲು ತಯಾರಿಲ್ಲದ ತರುಣ್ ಸುಧೀರ್ ಮದುವೆಯನ್ನು ಮುಂದೂಡಲು ಚಿಂತನೆ ನಡೆಸಿದ್ದರಂತೆ.
  • ಆದರೆ, ತರುಣ್ ಸುಧೀರ್ ಗೆ ಮದುವೆ ಬಗ್ಗೆ ದರ್ಶನ್ ಹೇಳಿದ್ದೇನು?
ಜೈಲಿನಲ್ಲಿ ಮದುವೆ ಬಗ್ಗೆ  ತರುಣ್ ಸುಧೀರ್'ಗೆ ದರ್ಶನ್ ಹೇಳಿದ್ದೇನು ಗೊತ್ತಾ?  title=

Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡಲು ಕುಟುಂಬಸ್ಥರಲ್ಲದೆ ಕೆಲವು ಸೆಲೆಬ್ರಿಟಿಗಳು ಕೂಡ ಬರುತ್ತಿದ್ದು, ಇಂದು (ಜುಲೈ 19) 'ಕಾಟೇರ' ನಿರ್ದೇಶಕ ತರುಣ್ ಸುಧೀರ್ ಭೇಟಿ ಮಾಡಿದ್ದಾರೆ. ದರ್ಶನ್ (Darshan) ಜೈಲು ಸೇರಿದ ಬಳಿಕ ಇದೇ ಮೊದಲ ಬಾರಿಗೆ ತರುಣ್ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ತರುಣ್ ಸುಧೀರ್  (Tarun Sudhir) ಮದುವೆಗೆ ಸಂಬಂಧಿಸಿದಂತೆ ಮಾತುಕತೆಯೂ ನಡೆದಿದೆ. 

ನಿಗದಿತ ದಿನಾಂಕದಲ್ಲೇ ಮದುವೆ ಆಗು! 
ಆಗಸ್ಟ್ 10, 11ಕ್ಕೆ ತರುಣ್ ಹಾಗೂ ನಟಿ ಸೋನಾಲ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಹಸೆಮಣೆ ಏರಲು ತಯಾರಿಲ್ಲದ ತರುಣ್ ಸುಧೀರ್ ಮದುವೆಯನ್ನು (Tarun Sudhir Marriage) ಮುಂದೂಡಲು ಚಿಂತನೆ ನಡೆಸಿದ್ದರಂತೆ. ಆದರಿದಕ್ಕೆ ಒಪ್ಪದ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿಗದಿಗೊಳಿಸಿರುವ ದಿನಾಂಕದಂದೇ ಮದುವೆ ಆಗಲು ಸೂಚಿಸಿದ್ದಾರಂತೆ.  

ಹೌದು, ಜೈಲಿನಲ್ಲಿ ನಟ ದರ್ಶನ್ (Actor Darsha) ಭೇಟಿ ಮುಗಿಸಿ ತೆರಳುವ ಸಂದರ್ಭದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ನಿರ್ದೇಶಕ ತರುಣ್ ಸುಧೀರ್, ನೀವು ನಿಗದಿತ ದಿನಾಂಕದಲ್ಲೇ ಮಾಡಿವೆ ಆಗಿ.  ಅಷ್ಟೊತ್ತಿಗೆ ನಾನು ಬರ್ತಿನಿ ಎಂದ್ದಿದ್ದಾರೆ ಎಂದು ತಿಳಿಸಿದರು. 

ಇದನ್ನೂ ಓದಿ- ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮೀ.. ಪತ್ನಿ ಹೇಳಿದ ಆ ವಿಚಾರ ಕೇಳಿ ಶಾಕ್‌ ಆದ್ರಾ ದರ್ಶನ್‌?

ಸ್ಪೆಷಲ್ ರಿಕ್ವೆಸ್ಟ್ ಮೇಲೆ ನಿಮ್ಮ ಮದುವೆಗೆ ನಟ ದರ್ಶನ್ ಬರ್ತಾರಾ....? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇಲ್ಲ ಅಷ್ಟೊತ್ತಿಗೆ ನಟ ದರ್ಶನ್ ಜೈಲಿನಿಂದ ರಿಲೀಸ್ (Darshan Release) ಆಗ್ತಾರೆ.  ಅವ್ರು ಏನೂ ತಪ್ಪು ಮಾಡಿಲ್ಲ ಅನ್ನೋ ನಂಬಿಕೆಯಲ್ಲಿ ಇದ್ದೀವಿ. ಹಾಗೇ ಆಗಲಿ ಅಂತಾ ದೇವರಲ್ಲಿ ಬೇಡಿಕೊಳ್ಳುತ್ತೇವೆ ಎಂದರು.  

ಜೈಲಿನಲ್ಲಿದ್ದರೂ ನಗು ಮುಖದಲ್ಲೇ ಮಾತಡಾಡಿದ 'ದಾಸ'!
ದರ್ಶನ್ ನಿಮ್ಮೊಂದಿಗೆ ಯಾವ ರೀತಿ ಮಾತನಾಡಿದರು, ಹೇಗಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಅವರು ಸದಾ ನನ್ನನ್ನು ಯಾವ ರೀತಿ ಯಾವ ಸ್ಮೈಲ್ನಲ್ಲಿ ನೋಡಿ ರಿಯಾಕ್ಟ್ ಮಾಡ್ತಿದ್ರೋ ಅದೇ ರೀತಿ ಇಂದು ರಿಯಾಕ್ಟ್ ಮಾಡಿದರು. ಮಾನಸಿಕವಾಗಿ ಅವರಿಗಿಂತ ನಾವು ವೀಕ್ ಆಗಿದ್ದೀವಿ ಎಂದರು. 

ಇದನ್ನೂ ಓದಿ- ಅಪ್ಪಾ... ನಿನ್ನ ಸ್ನೇಹಿತರು ಯಾವಾಗಲು ಒಳ್ಳೆಯವರು ಇರಬೇಕು: ಜೈಲಲ್ಲಿರುವ ದಾಸನಿಗೆ ಮಗನ ನೀತಿ ಪಾಠ!

ಈ ಸಂದರ್ಭದಲ್ಲಿ ದಚ್ಚು ಆರೋಗ್ಯದ ಬಗ್ಗೆಯೂ ಮಾಹಿತಿ ನೀಡಿದ ತರುಣ್ ಸುಧೀರ್, ದರ್ಶನ್ ಅವರಿಗೆ ಸ್ವಲ್ಪ ಆರೋಗ್ಯ ಸರಿಯಿರಲಿಲ್ಲ. ಸಂಜೆ ವೇಳೆಗೆ ಜ್ವರ ಬರುತ್ತಿತ್ತು. ಈ ವಾತಾವರಣದಿಂದಾಗಿ ಹೀಗಾಗಿರಬಹುದು ಸದ್ಯ, ಚೇತರಿಸಿಕೊಳ್ಳುತ್ತಿದ್ದಾರೆ. "ಏನಿಲ್ಲ ಮಗನೇ ಆರಾಮವಾಗಿ ಇದ್ದೀನಿ, ಸ್ವಲ್ಪ ಜ್ವರ ಇತ್ತು ಅಷ್ಟೇ" ಎಂದು ದಚ್ಚು ಹೇಳಿರುವುದಾಗಿ ತಿಳಿಸಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News