ಅಪ್ಪಾ... ನಿನ್ನ ಸ್ನೇಹಿತರು ಯಾವಾಗಲು ಒಳ್ಳೆಯವರು ಇರಬೇಕು: ಜೈಲಲ್ಲಿರುವ ದಾಸನಿಗೆ ಮಗನ ನೀತಿ ಪಾಠ!

DARSHAN: ಜೈಲಿಗೆ ತಂದೆಯನ್ನು ನೋಡಲು ತೆರಳಿದ್ದ ದರ್ಶನ್ ಪುತ್ರ ವಿನೀಶ್ ತನ್ನ ಅಪ್ಪನಿಗೆ ನೀತಿ ಪಾಠ ಮಾಡಿದ್ದು ಏನ್ ಹೇಳಿದ್ದಾನೆ ಗೊತ್ತಾ? 

Written by - VISHWANATH HARIHARA | Last Updated : Jul 17, 2024, 05:03 PM IST
  • ಅಪ್ಪ ನಿನ್ನ ಜೊತೆಯಲ್ಲಿರುವ ಫ್ರೆಂಡ್ಸ್ ಯಾರೂ ಸರಿಯಿಲ್ಲ, ಅವರ್ಯಾರೂ ಒಳ್ಳೆಯವರಲ್ಲ
  • ಅವರ ಸಹವಾಸ ಬಿಟ್ಟು ಬಿಡು, ಅವರಿಂದಾಗಿ ನೀನು ಇವತ್ತು ಜೈಲು ಸೇರುವಂತಾಯ್ತು
  • ಡ್ರೈವರ್ ಲಕ್ಷ್ಮಣ್ ಒಬ್ರೇ ಸಾಕು ಇನ್ಯಾರು ಬೇಡ, ಜೈಲಿಂದ ಹೊರ ಬಂದ ಬಳಿಕ ಇವರ ಸ್ನೇಹ ಬೇಡ
ಅಪ್ಪಾ... ನಿನ್ನ ಸ್ನೇಹಿತರು ಯಾವಾಗಲು ಒಳ್ಳೆಯವರು ಇರಬೇಕು: ಜೈಲಲ್ಲಿರುವ ದಾಸನಿಗೆ ಮಗನ ನೀತಿ ಪಾಠ!  title=

Darshan: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿರುವ‌ ನಟ ದರ್ಶನ್ ಈ ಪರಿಸ್ಥಿತಿಗೆ ದರ್ಶನ್ ಸಹವಾಸ ಮಾಡಿರುವ ಸ್ನೇಹಿತರು ಹಾಗೂ ಅವರ ಅಭ್ಯಾಸಗಳು ಕಾರಣ ಎಂಬುದು ಈಗ ಚರ್ಚೆಯಾಗುತ್ತಿರುವ ವಿಷಯ.  ಈ ವಿಚಾರವನ್ನ ದರ್ಶನ್ ಹಲವು ಸ್ನೇಹಿತರು ಹಿತೈಷಿಗಳು ಹೇಳಿದ್ರು ದರ್ಶನ್ ಹೇಳಿರಲಿಲ್ಲ. ಸದ್ಯ ದರ್ಶನ್ ಪುತ್ರ ಅಪ್ಪನ ಪರಿಸ್ಥಿತಿ ಕಂಡು ಅಪ್ಪನಿಗೆ ನೀತಿ ಪಾಠ ಮಾಡಿರುವ ಮಾಹಿತಿ ಲಭ್ಯವಾಗಿದೆ. 

ಜೈಲಿಗೆ ತಂದೆಯನ್ನು ನೋಡಲು ತೆರಳಿದ್ದ ದರ್ಶನ್ ಪುತ್ರ ವಿನೀಶ್ (Darshan Son Vinish) ತನ್ನ ಅಪ್ಪನಿಗೆ ನೀತಿ ಪಾಠ ಮಾಡಿದ್ದು,  "ಅಪ್ಪ ಫ್ರೆಂಡ್ಸ್ ಯಾವಾಗಲೂ ಒಳ್ಳೆಯವರಾಗಿರ್ಬೇಕು, ನಿನ್ನ ಜೊತೆಯಲ್ಲಿರುವ ಫ್ರೆಂಡ್ಸ್ ಯಾರೂ ಸರಿಯಿಲ್ಲ. ಅವರ್ಯಾರೂ ಒಳ್ಳೆಯವರಲ್ಲ ಅವರ ಸಹವಾಸ ಬಿಟ್ಟು ಬಿಡು. ಅವರಿಂದಾಗಿ ನೀನು ಇವತ್ತು ಜೈಲು ಸೇರುವಂತಾಯ್ತು. ಡ್ರೈವರ್ ಲಕ್ಷ್ಮಣ್ ಒಬ್ಬರನ್ನು ಬಿಟ್ಟು ಇನ್ಯಾರು ಬೇಡ. ಜೈಲಿನಿಂದ ಹೊರ ಬಂದ ಬಳಿಕ ಇವರ ಸ್ನೇಹ ಬೇಡ. ಒಳ್ಳೆಯ ಸ್ನೇಹಿತರ ಸಹವಾಸ ಮಾಡಬೇಕು ಎಂದು ಬುದ್ದಿ ಮಾತು ಹೇಳಿದ್ದಾನಂತೆ.

ಇದನ್ನೂ ಓದಿ- ದಾಸನಿಗಾಗಿ ಶಕ್ತಿ ದೇವತೆಯ ಮೊರೆ ಹೋದ ವಿಜಯಲಕ್ಷ್ಮಿ..!

ನೀನು ಜೈಲಲ್ಲಿರೋದು ನನಗೆ ನೋಡಲು ಆಗುತ್ತಿಲ್ಲ. ನಿನಗೆ ಕರೆ ಮಾಡಲು ಸಹ ನನ್ನಿಂದ ಸಾಧ್ಯವಾಗುತ್ತಿಲ್ಲ. ನಿನ್ನನ್ನು ನೋಡಬೇಕು ಅಂದ್ರೂ ಒಂದು ವಾರ ಕಾಯಬೇಕು. ನಾನು ಯಾರ ಜೊತೆ ಕಿತ್ತಾಡಲಿ ಹೇಳು ಅಂತಾ ಮಗ ಅಪ್ಪನಿಗೆ ಭಾವುಕವಾಗಿ ಪ್ರಶ್ನೆ ಮಾಡಿದ್ದಾನೆ. ಮಗನ ಮಾತು ಕೇಳಿ ಭಾವುಕರಾಗಿದ್ದ ದರ್ಶನ್ (Darshan) ಮಗನನ್ನ ತಬ್ಬಿ ಮುದ್ದಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಇದನ್ನೂ ಓದಿ- ಇತಿಹಾಸ ಸೃಷ್ಟಿಸಿದ ನಟಿ ಪವಿತ್ರ ಗೌಡ..! ಗೂಗಲ್‌ನಲ್ಲಿ ಈಕೆಯದ್ದೇ ಫುಲ್‌ ಹವಾ.. ಏಕೆ ಗೊತ್ತಾ..?

ದರ್ಶನ್ ಬಿಡುಗಡೆಗಾಗಿ ಚಾಮುಂಡೇಶ್ವರಿಗೆ ಪೂಜೆ..!
ಇನ್ನೂ ದರ್ಶನ್ ಬಿಡುಗಡೆಗೆ ಇಡೀ ಕುಟುಂಬ ದೇವರ ಮೊರೆ ಹೋಗಿದೆ. ಜೈಲುವಾಸ ಮುಗಿದು ಕಷ್ಟದ ಸಮಯದಿಂದ ದರ್ಶನ್ ಹೊರಬರಲಿ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ (Darshan Wife Vijayalakshmi) ಹಲವು ದೇವಾಲಯಗಳಲ್ಲಿ ಹರಕೆ ಹೊತ್ತಿದ್ದಾರಂತೆ. ಇನ್ನು ದರ್ಶನ್ ತಾಯಿ ಮತ್ತು ಸಹೋದರ ಸಹ ಹರಕೆ  ಕಟ್ಟಿಕೊಂಡಿದ್ದಾರಂತೆ. ರಿಲೀಸ್ ಆದ ಬಳಿಕ ದರ್ಶನ್ ಸಮೇತ ಸನ್ನಿಧಿಗೆ ಬಂದು ಹರಕೆ ತೀರಿಸೋದಾಗಿ ಹರಕೆ ಕಟ್ಟಿಕೊಂಡಿದ್ದಾರಂತೆ. ಪೂಜೆ ಮಾಡಿಸಿ ಜೈಲಲ್ಲಿರುವ ದರ್ಶನ್ ಭೇಟಿ ವೇಳೆ ದೇವರ ಪ್ರಸಾದವನ್ನ ಪತ್ನಿ ವಿಜಯಲಕ್ಷ್ಮಿ ನೀಡಿದ್ದಾರೆ.  ಚಾಮುಂಡೇಶ್ವರಿ ಪ್ರಸಾದವನ್ನ ದರ್ಶನ್ ಗೆ ನೀಡಿದ ವೇಳೆ ದರ್ಶನ್ ಚಪ್ಪಲಿ ಬಿಟ್ಟು ವಿನಮ್ರವಾಗಿ ಪ್ರಸಾದ ಸ್ವೀಕರಿಸಿದ್ದಾರಂತೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News