ʼಹನುಮಾನ್‌ʼ ಸಿನಿಮಾ ನೋಡಿ ನಿರ್ದೇಶಕನ್ನು ಮೆಚ್ಚಿಕೊಂಡ ರಿಷಬ್‌..! ನಟನ ಬಗ್ಗೆ ಶೆಟ್ರು ಹೇಳಿದ್ದೇನು.?

Rishab shetty on Hanuman movie : ಈಗಾಗಲೇ ಹಲವು ಸೆಲೆಬ್ರಿಟಿಗಳು ತೆಲುಗು ಯುವ ನಟ ತೇಜ ಸಜ್ಜಾ ಅಭಿನಯದ 'ಹನುಮಾನ್' ಸಿನಿಮಾವನ್ನು ನೋಡಿ ಹೊಗಳಿದ್ದಾರೆ. ಇದೀಗ ಈ ಪಟ್ಟಿಗೆ ಸ್ಯಾಂಡಲ್‌ವುಡ್‌ ದಿ ಡಿವೈನ್‌ ಸ್ಟಾರ್‌ ನಟ ರಿಷಬ್ ಶೆಟ್ಟಿ ಸೇರಿಕೊಂಡಿದ್ದಾರೆ. ಪ್ರಶಾಂತ್ ವರ್ಮಾ ಅವರ ನಿರ್ದೇಶನ ಮತ್ತು ತೇಜ ಸಜ್ಜ ಅವರ ನಟನೆ ಬಗ್ಗೆ ಟ್ಟೀಟ್‌ ಮಾಡಿದ್ದಾರೆ.

Written by - Krishna N K | Last Updated : Jan 17, 2024, 05:37 PM IST
  • 'ಹನುಮಾನ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ.
  • ಹಲವು ಸೆಲೆಬ್ರಿಟಿಗಳು 'ಹನುಮಾನ್' ಸಿನಿಮಾ ನೋಡಿ ಹೊಗಳಿದ್ದಾರೆ.
  • ಈ ಪಟ್ಟಿಗೆ ಇತ್ತೀಚೆಗೆ ಕನ್ನಡದ ಹೀರೋ ರಿಷಬ್ ಶೆಟ್ಟಿ ಸೇರಿಕೊಂಡಿದ್ದಾರೆ.
ʼಹನುಮಾನ್‌ʼ ಸಿನಿಮಾ ನೋಡಿ ನಿರ್ದೇಶಕನ್ನು ಮೆಚ್ಚಿಕೊಂಡ ರಿಷಬ್‌..! ನಟನ ಬಗ್ಗೆ ಶೆಟ್ರು ಹೇಳಿದ್ದೇನು.? title=

Hanuman movie : ಸಂಕ್ರಾಂತಿ ಹಬ್ಬದಂದು ರಿಲೀಸ್‌ ಆದ 'ಹನುಮಾನ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಅಲ್ಲದೆ, ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ಸಿದ್ಧವಾಗುತ್ತಿದೆ. ಮಹೇಶ್ ಬಾಬು ಅಭಿನಯದ ‘ಗುಂಟೂರು ಕರಂ’, ವೆಂಕಟೇಶ್ ಅವರ ‘ಸೈಂಧವ’, ನಾಗಾರ್ಜುನ ‘ನಾ ಸಮಿರಂಗ’ ಚಿತ್ರಗಳನ್ನು ಹಿಂದಿಕ್ಕಿ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಘರ್ಜಿಸುತ್ತಿದೆ.

ಮೊದಲ ಶೋನಿಂದಲೇ ಪಾಸಿಟಿವ್ ಟಾಕ್ ಗಿಟ್ಟಿಸಿಕೊಂಡಿರುವ ಈ ಸಿನಿಮಾ ದಿನದಿಂದ ದಿನಕ್ಕೆ ಕಲೆಕ್ಷನ್‌ಗಳ ಮಳೆಯೊಂದಿಗೆ ಮುನ್ನುಗ್ಗುತ್ತಿದೆ. ಭಾರತ ಹಾಗೂ ವಿದೇಶಗಳಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಜನವರಿ 12 ರಂದು ಬಿಡುಗಡೆಯಾದ ಈ ಚಿತ್ರವು ರೂ. 100 ಕೋಟಿ ಕ್ಲಬ್ ಸೇರಿದೆ. 

ಇದನ್ನೂ ಓದಿ:ಸಂಸದ ತೇಜಸ್ವಿ ಸೂರ್ಯ ಭೇಟಿಯಾದ ತೇಜ ಸಜ್ಜಾ.. ಸೂಪರ್ ಹೀರೋ ಕಾನ್ಸೆಪ್ಟ್ ಸಿನಿಮಾಗೆ ಶಿವಣ್ಣ ಫಿದಾ!

ಇನ್ನು ಹನುಮಾನ್‌ ಸಿನಿಮಾ ನೋಡಿ ಹಲವು ಸೆಲೆಬ್ರಿಟಿಗಳು ಶ್ಲಾಘಿಸುತ್ತಿದ್ದಾರೆ. ಪ್ರಶಾಂತ್ ವರ್ಮಾ ಅವರ ನಿರ್ದೇಶನ ಮತ್ತು ತೇಜ ಸಜ್ಜ ಅವರ ನಟನೆಯನ್ನು ಪ್ರಶಂಸಿಸುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ಮಾಸ್ ಮಹಾರಾಜ ರವಿತೇಜ, ಗೋಪಿಚಂದ್ ಮತ್ತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗಾಗಲೇ ಈ ಚಿತ್ರವನ್ನು ಶ್ಲಾಘಿಸಿದ್ದಾರೆ.

ಈ ಪಟ್ಟಿಗೆ ಇತ್ತೀಚೆಗೆ ಕನ್ನಡದ ಹೀರೋ ರಿಷಬ್ ಶೆಟ್ಟಿ ಸೇರಿಕೊಂಡಿದ್ದಾರೆ. ಇತ್ತೀಚೆಗಷ್ಟೇ ‘ಹನುಮಾನ್’ ಸಿನಿಮಾ ವೀಕ್ಷಿಸಿ ಎಕ್ಸ್‌ ಖಾತೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಮತ್ತು ನಟ ತೇಜ ಸಜ್ಜನ್ ಅವರನ್ನು ಪ್ರಶಂಸೆಯ ಸುರಿಮಳೆಗೈದಿದ್ದಾರೆ. “ಹನುಮಾನ್ ಚಿತ್ರವನ್ನು ಇಷ್ಟ ಪಡುವವರ ಪಟ್ಟಿಗೆ ಸೇರಲು ನನಗೆ ಸಂತೋಷವಾಗಿದೆ. ನಿರ್ದೇಶಕ ಪ್ರಶಾಂತ್ ವರ್ಮಾ ಕಥೆ ಹೇಳುವ ರೀತಿ ಅದ್ಭುತವಾಗಿದೆ. ತೇಜ ಸಜ್ಜನ ಅಭಿನಯವೂ ಚೆನ್ನಾಗಿದೆ. ಅವರ ಅಭಿನಯವನ್ನು ಪ್ರೇಕ್ಷಕರು ದೀರ್ಘಕಾಲ ನೆನಪಿನಲ್ಲಿಟ್ಟುಕೊಳ್ಳುತ್ತಾರೆ,”ಎಂದು ರಿಷಬ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ:ದೊಡ್ಮನೆ ಮಂದಿಗೆ ರಿಸ್ಕ್‌ ಟಾಸ್ಕ್‌ ಕೊಟ್ಟ ಬಿಗ್‌ಬಾಸ್‌..! ಗೆದ್ರೆ 1 ಲಕ್ಷ ರೂ.

ಪ್ರಶಾಂತ್ ವರ್ಮಾ ನಿರ್ದೇಶನದ ʼಹನುಮಾನ್‌ʼ ಚಿತ್ರದಲ್ಲಿ ತೇಜ ಸಜ್ಜ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಅಮೃತಾ ಅಯ್ಯರ್ ನಾಯಕಿಯಾಗಿ ಅಭಿನಯಿಸಿದ್ದು, ವರಲಕ್ಷ್ಮಿ ಶರತ್ ಕುಮಾರ್, ವಿನಯ್ ರಾಯ್ ಮತ್ತು ಸಮುದ್ರ ಖಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2025ಕ್ಕೆ ಈ ಸಿನಿಮಾದ ಎರಡನೇ ಭಾಗ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News