ಸಾಯುವ ಮುನ್ನ ತಮ್ಮ ಸಿಬ್ಬಂದಿಯ ಬಾಕಿ ಹಣ ತೀರಿಸಿದ್ದ ನಟ ಸುಶಾಂತ್ ಸಿಂಗ್ ರಜಪೂತ್..!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಭಾನುವಾರ ಆತ್ಮಹತ್ಯೆಯಿಂದ ಸಾಯುವ ಮುನ್ನ ತಮ್ಮ ಸಿಬ್ಬಂದಿಯ ಬಾಕಿ ಹಣವನ್ನು ತೀರಿಸಿದ್ದರು ಎಂದು ವರದಿಯಾಗಿದೆ.  ಸಿಬ್ಬಂದಿಗೆ ಇನ್ನು ಮುಂದೆ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಕೂಡ ಅವರು ತಿಳಿಸಿದ್ದರು ಎನ್ನಲಾಗಿದೆ.

Last Updated : Jun 18, 2020, 09:00 PM IST
ಸಾಯುವ ಮುನ್ನ ತಮ್ಮ ಸಿಬ್ಬಂದಿಯ ಬಾಕಿ ಹಣ ತೀರಿಸಿದ್ದ ನಟ ಸುಶಾಂತ್ ಸಿಂಗ್ ರಜಪೂತ್..!  title=

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಭಾನುವಾರ ಆತ್ಮಹತ್ಯೆಯಿಂದ ಸಾಯುವ ಮುನ್ನ ತಮ್ಮ ಸಿಬ್ಬಂದಿಯ ಬಾಕಿ ಹಣವನ್ನು ತೀರಿಸಿದ್ದರು ಎಂದು ವರದಿಯಾಗಿದೆ. ಸಿಬ್ಬಂದಿಗೆ ಇನ್ನು ಮುಂದೆ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಕೂಡ ಅವರು ತಿಳಿಸಿದ್ದರು ಎನ್ನಲಾಗಿದೆ.

ಆದಾಗ್ಯೂ, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಟರ ಸಿಬ್ಬಂದಿ ತಮ್ಮ ಸಂಬಳವನ್ನು ಪಡೆದಿರುವುದಕ್ಕೆ ಕೃತಜ್ಞರಾಗಿದ್ದರು ಮತ್ತು ನಟರು ಇಲ್ಲಿಯವರೆಗೆ ಪಾವತಿಸುವ ಮೂಲಕ ಸಾಕಷ್ಟು ಮಾಡಿದ್ದಾರೆ ಎಂದು ಹೇಳಿದರು. 'ನೀವು ನಮ್ಮನ್ನು ಬಹಳ ಸಮಯದಿಂದ ನಮ್ಮನ್ನು ನೋಡಿಕೊಂಡಿದ್ದೀರಿ, ನಾವು ಹೇಗಾದರೂ ನಿರ್ವಹಿಸುತ್ತೇವೆ'  ಎಂದು ಅವರ ಸಿಬ್ಬಂದಿ ಸುಶಾಂತ್ ಗೆ ಉತ್ತರಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಇನ್ಸ್ಟಾಗ್ರಾಮ್ ನ ಕೊನೆ ಪೋಸ್ಟ್ ನಲ್ಲಿ ತಾಯಿಯನ್ನು ಸ್ಮರಿಸಿದ್ದ ಸುಶಾಂತ್ ಸಿಂಗ್ ರಜಪೂತ್...!

ನಟನ ಆತ್ಮಹತ್ಯೆ ಪ್ರಕರಣದಲ್ಲಿ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗುರುವಾರ, ಸುಶಾಂತ್ ಅವರ ವದಂತಿಯ ಗೆಳತಿ ರಿಯಾ ಚಕ್ರವರ್ತಿ ತನ್ನ ಹೇಳಿಕೆಯನ್ನು ದಾಖಲಿಸಲು ಬಾಂದ್ರಾ ಪೊಲೀಸ್ ಠಾಣೆಗೆ ಹೋದರು. ರಜಪೂತ್ ಅವರ ಆಪ್ತರಾಗಿದ್ದ ಬಾಲಿವುಡ್ ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಾಬ್ರಾ ಅವರ ಹೇಳಿಕೆಯನ್ನು ಪೊಲೀಸರು ಬುಧವಾರ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ಸುಶಾಂತ್ ಖಿನ್ನತೆಗೆ ಒಳಗಾಗಿದ್ದರು ಮತ್ತು ಅದಕ್ಕಾಗಿ  ಔಷಧಿಗಳನ್ನು ಸಹ ತೆಗೆದುಕೊಳ್ಳುತ್ತಿದ್ದರು. ಆತನ ಖಿನ್ನತೆಯ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇಲ್ಲಿಯವರೆಗೆ, ಪೊಲೀಸರು ನಟನ ಕುಟುಂಬ ಸದಸ್ಯರು ಸೇರಿದಂತೆ 10 ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ಅವರ ತಂದೆ ಕೆ ಕೆ ಸಿಂಗ್ ಅವರು ಮತ್ತು ಇತರ ಕುಟುಂಬ ಸದಸ್ಯರಿಗೆ ನಟನಿಗೆ ಖಿನ್ನತೆ ಇದೆ ಎಂದು ತಿಳಿದಿಲ್ಲ, ಆದರೆ ಅವರು ಆಗಾಗ್ಗೆ ಕುಂದಿದ್ದಾರೆ ಎಂದು ಅವರಿಗೆ ಅನಿಸುತ್ತಿತ್ತು ಎಂದು ಪೋಲಿಸ್ ರಿಗೆ ತಿಳಿಸಿದ್ದಾರೆ.
 

Trending News