Alia Bhatt Ramayana Saree: ಆಲಿಯಾ ಭಟ್‌ ಧರಿಸಿರುವ ಈ 'ರಾಮಾಯಣ' ಸೀರೆಯ ವಿಶೇಷತೆ ಏನ್‌ ಗೊತ್ತಾ?

Ramayana Saree Cost and Specialty : ಅಯೋಧ್ಯೆ ಬಲರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ವಿಶೇಷ ಆಕರ್ಷಣೆಯಾಗಿದ್ದರು. ಈ ವೇಳೆ ನಟಿ ಉಟ್ಟಿದ್ದ ಸೀರೆಯ ವಿಶಿಷ್ಟತೆ ತಿಳಿದು ಎಲ್ಲರೂ ಅಚ್ಚರಿಗೊಂಡಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ..

Written by - Krishna N K | Last Updated : Jan 25, 2024, 03:22 PM IST
  • ಬಾಲರಾಮ ಅಯೋಧ್ಯೆಯ ಭವ್ಯ ಮಂದಿರದಲ್ಲಿ ವಿರಾಜಮಾನರಾಗಿದ್ದಾರೆ.
  • ಇದೇ ತಿಂಗಳು 22ರಂದು ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅದ್ಧೂರಿಯಾಗಿ ನೆರವೇರಿತು.
  • ಆಲಿಯಾ ಭಟ್ ಅವರ ಪತಿ, ನಟ ರಣಬೀರ್ ಕಪೂರ್ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.
Alia Bhatt Ramayana Saree: ಆಲಿಯಾ ಭಟ್‌ ಧರಿಸಿರುವ ಈ 'ರಾಮಾಯಣ' ಸೀರೆಯ ವಿಶೇಷತೆ ಏನ್‌ ಗೊತ್ತಾ? title=

Alia bhatt saree ram mandir : ವರ್ಷಗಳ ಕಾಯುವಿಕೆಯ ನಂತರ, ಬಾಲರಾಮ ಅಯೋಧ್ಯೆಯ ಭವ್ಯ ಮಂದಿರದಲ್ಲಿ ವಿರಾಜಮಾನರಾಗಿದ್ದಾರೆ. ಇದೇ ತಿಂಗಳು 22ರಂದು ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅದ್ಧೂರಿಯಾಗಿ ನೆರವೇರಿತು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ 10,000 ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು. ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಸ್ವಾಮಿಯ ಪ್ರಾಣ ಪ್ರತಿಷ್ಠೆಯ ನಂತರ ಬಲರಾಮನ ದರ್ಶನ ಪಡೆದು ಆಶೀರ್ವಾದ ಪಡೆದರು.

ಇನ್ನು ಬಾಲಿವುಡ್‌ ಕ್ಯೂಟ್ ಬ್ಯೂಟಿ ಆಲಿಯಾ ಭಟ್ ಅವರ ಪತಿ, ನಟ ರಣಬೀರ್ ಕಪೂರ್ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಮೈಸೂರು ಸಿಲ್ಕ್ ಸೀರೆ ಉಟ್ಟು ಎಲ್ಲರ ಗಮನಸೆಳೆದರು.  ಇದೀಗ ವಿಶೇಷವಾಗಿ ವಿನ್ಯಾಸಗೊಳಿಸಿದ ಆಲಿಯಾ ಸೀರೆಯ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. 

ಇದನ್ನೂ ಓದಿ:ನಟಿ ಸಾಯಿ ಪಲ್ಲವಿ ಸಹೋದರಿಯ ಅದ್ಧೂರಿ ನಿಶ್ಚಿತಾರ್ಥ..! ಫೋಟೋಸ್ ನೋಡಿ

ಆಲಿಯಾ ಧರಿಸಿದ್ದ, ಹಸಿರು ಬಣ್ಣದ ರೇಷ್ಮೆ ಸೀರೆಯ ಮೇಲೆ ರಾಮಾಯಣವನ್ನು ಕಣ್ಮನ ಸೆಳೆಯುವಂತೆ ವಿನ್ಯಾಸಗೊಳಿಸಲಾಗಿದೆ. ಪಲ್ಲುವಿನಲ್ಲಿ ರಾಮಸೇತು, ಹನುಮಂತ, ರಾಮ ಶಿವ ಧನುಸ್ಸನ್ನು ಮುರಿಯುವುದು, ರಾಮನ ವನವಾಸ, ಗಂಗಾನದಿಯ ಮೇಲಿನ ಸೇತುವೆ, ಚಿನ್ನದ ಜಿಂಕೆ ಮತ್ತು ಸೀತಾ ಅಪಹರಣ ಸೇರಿದಂತೆ ಸಂಪೂರ್ಣ ರಾಮಾಯಣವನ್ನು ಪ್ರದರ್ಶಿಸಲಾಗಿದೆ. 

ಸೀರೆಯಲ್ಲಿ ಚಿತ್ರಿತಗೊಂಡ ರಾಮಾಯಣವನ್ನು ಸಂಪೂರ್ಣವಾಗಿ ಕೈಯಿಂದ ವಿನ್ಯಾಸಗೊಳಿಸಲಾಗಿದೆ. ಆಲಿಯಾ ಭಟ್ ಧರಿಸಿರುವ ಈ ಅದ್ಭುತ ರೇಷ್ಮೆ ಸೀರೆಯನ್ನು ಮಾಧುರ್ಯ ಕ್ರಿಯೇಷನ್ಸ್ ವಿನ್ಯಾಸಗೊಳಿಸಿದೆ. ವಾಸ್ತವವಾಗಿ ಈ ರೀತಿಯ ಸೀರೆಯನ್ನು ತಯಾರಿಸಲು ಸಾಕಷ್ಟು ಸಮಯ ತೆಗೆದುಕೊಳ್ಳಲಾಗುತ್ತದೆ. ಆದರೆ, ಆಲಿಯಾ ಭಟ್‌ ಕೋರಿಕೆಯ ಮೇರೆಗೆ ಇದನ್ನು ಕೇವಲ 10 ದಿನಗಳಲ್ಲಿ ನಿರ್ಮಿಸಲಾಗಿದೆಯಂತೆ. 

ಇದನ್ನೂ ಓದಿ:ಗಣರಾಜ್ಯೋತ್ಸವದಂದು ಚಂದನವನದಲ್ಲಿ ಹಬ್ಬ: ಆರು ಕನ್ನಡ ಸಿನಿಮಾಗಳ ಅಬ್ಬರ!

ಈ ಸೀರೆಯ ಬೆಲೆ ಸುಮಾರು ರೂ. 45 ಸಾವಿರ ಆಗಿದೆಯಂತೆ. ಮಾಧುರ್ಯ ಕ್ರಿಯೇಷನ್ಸ್ ಈ ಸೀರೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಈ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಬಾಲ ರಾಮನ ಪ್ರತಿಷ್ಠಿತ ಪ್ರಾಣ ಪ್ರತಿಷ್ಠೆಯಲ್ಲಿ ರಾಮಾಯಣ ವಿಷಯದ ಸೀರೆ ಉಟ್ಟಿದ್ದ ಆಲಿಯಾ ಭಟ್ ಅವರನ್ನು ನೆಟಿಜನ್‌ಗಳು ಶ್ಲಾಘಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News