Soundarya: ಸಾವಿನ ಸಮಯದಲ್ಲಿ 2 ತಿಂಗಳ ಗರ್ಭಿಣಿ ಆಗಿದ್ರು ನಟಿ ಸೌಂದರ್ಯ.!

Soundarya Death: ತಮಿಳು ನಿರ್ದೇಶಕ ಆರ್.ವಿ ಉದಯಕುಮಾರ್‌ ಅವರ ಬಳಿ, ಚಂದ್ರಮುಖಿಯ ಕನ್ನಡ ರಿಮೇಕ್ ಆಪ್ತಮಿತ್ರ ಸಿನಿಮಾ ತಮ್ಮ ಕೊನೆಯ ಚಿತ್ರ ಎಂದು ಸೌಂದರ್ಯ ಹೇಳಿದ್ದರಂತೆ ಎಂಬ ವಿಚಾರ ಬಹಿರಂಗವಾಗಿದೆ.   

Written by - Chetana Devarmani | Last Updated : Jul 18, 2023, 09:18 PM IST
  • ಹೆಸರಿಗೆ ತಕ್ಕಂತೆ ಸುಂದರವಾಗಿದ್ದ ನಟಿ ಸೌಂದರ್ಯ
  • ದೇಶಾದ್ಯಂತ ಬ್ಯೂಟಿ ಮತ್ತು ನಟನೆಯಿಂದ ಜನರ ಮನ ಗೆದ್ದ ಬೆಡಗಿ
  • ಸಾವಿಗೂ ಮುನ್ನ 2 ತಿಂಗಳ ಗರ್ಭಿಣಿ ಆಗಿದ್ರಾ ಸೌಂದರ್ಯ!?
Soundarya: ಸಾವಿನ ಸಮಯದಲ್ಲಿ 2 ತಿಂಗಳ ಗರ್ಭಿಣಿ ಆಗಿದ್ರು ನಟಿ ಸೌಂದರ್ಯ.! title=
Soundarya

Soundarya Pregnant News: ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ಪ್ರಧಾನವಾಗಿ ಕೆಲಸ ಮಾಡಿದ ದಕ್ಷಿಣ ನಟಿ ಸೌಂದರ್ಯ, ಏಪ್ರಿಲ್ 2004 ರಂದು ಬೆಂಗಳೂರು ಬಳಿ ವಿಮಾನ ಅಪಘಾತದಲ್ಲಿ ನಿಧನರಾದರು. ಅಮಿತಾಭ್ ಬಚ್ಚನ್ ಜೊತೆಗೆ ಸೂರ್ಯವಂಶಂ ಎಂಬ ಹಿಂದಿ ಚಲನಚಿತ್ರದಲ್ಲಿನ ಪಾತ್ರಕ್ಕಾಗಿ ಜನಪ್ರಿಯವಾದ ಸೌಂದರ್ಯ ಅವರ ಸಾವು ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿತು. ಸಾವಿನ ಸಮಯದಲ್ಲಿ ಸೌಂದರ್ಯ ಎರಡು ತಿಂಗಳ ಗರ್ಭಿಣಿಯಾಗಿದ್ದರು ಎಂಬ ಸುದ್ದಿಯೊಂದು ಜನರಿಗೆ ತೀವ್ರ ಆಘಾತ ನೀಡಿತು. 2019 ರಲ್ಲಿ ತಮಿಳು ನಿರ್ದೇಶಕ ಆರ್.ವಿ ಉದಯಕುಮಾರ್‌ ಅವರ ಬಳಿ, ಚಂದ್ರಮುಖಿಯ ಕನ್ನಡ ರಿಮೇಕ್ ಆಪ್ತಮಿತ್ರ ಸಿನಿಮಾ ತಮ್ಮ ಕೊನೆಯ ಚಿತ್ರ ಎಂದು ಸೌಂದರ್ಯ ಹೇಳಿದ್ದರಂತೆ ಎಂಬ ವಿಚಾರ ಬಹಿರಂಗವಾಗಿದೆ. 

ನಿರ್ದೇಶಕರಿಗೆ ಕರೆ ಮಾಡಿದ ಒಂದು ದಿನದ ನಂತರ ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ನಿಧನರಾದರು. ಆಕೆಯ ಜೊತೆಯಲ್ಲಿ ಆಕೆಯ ನಿರ್ಮಾಪಕ-ಸಹೋದರ ಅಮರನಾಥ್ ಕೂಡ ಇದ್ದರು. ಅವರು ಸಹ ಅವಳೊಂದಿಗೆ ಜೀವನವನ್ನು ಕಳೆದುಕೊಂಡರು. ಆರ್.ವಿ ಉದಯಕುಮಾರ್ ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 

ಇದನ್ನೂ ಓದಿ: "ಗಂಡ ಹೆಂಡತಿ ಜಗಳ ಬೀದಿಗೆ ಬಂದಿದೆ" ಸುದೀಪ್‌ ಬಗ್ಗೆ ರವಿಚಂದ್ರನ್‌ ಹೇಳಿದ್ದೇನು?

ಆಪ್ತಮಿತ್ರ ಸಿನಿಮಾ ಮಾಡಿದ ನಂತರ, ಸೌಂದರ್ಯ ಅವರು ಉದಯ ಅವರಿಗೆ ಕರೆ ಮಾಡಿದ್ದರಂತೆ. ಅದು ತನ್ನ ಕೊನೆಯ ಚಿತ್ರ ಎಂದಿದ್ದರಂತೆ. ಅಲ್ಲದೇ ತಾವು ಎರಡು ತಿಂಗಳ ಗರ್ಭಿಣಿ ಎಂದು ಸೌಂದರ್ಯ ತಿಳಿದ್ದರೆಂದು ಆರ್.ವಿ ಉದಯಕುಮಾರ್ ಹಳೆಯ ನೆನಪನ್ನು ಮೆಲಕು ಹಾಕಿದ್ದರು.

"ಆ ದಿನ ಅವಳು ನಾನು ಮತ್ತು ನನ್ನ ಹೆಂಡತಿಯೊಂದಿಗೆ ಸುಮಾರು ಒಂದು ಗಂಟೆ ಫೋನ್‌ನಲ್ಲಿ ಮಾತನಾಡಿದ್ದಳು. ಆದರೆ ಮರುದಿನ ನಾನು ಟಿವಿ ನೋಡಿದಾಗ ಅವಳ ಸಾವಿನ ಬಗ್ಗೆ ನನಗೆ ತಿಳಿಯಿತು" ಎಂದು ಆರ್.ವಿ ಉದಯಕುಮಾರ್  ನೆನಪಿಸಿಕೊಂಡರು.

ಉದಯಕುಮಾರ್ ಅವರನ್ನು ಸೌಂದರ್ಯ ಯಾವಾಗಲೂ ತನ್ನ ಸಹೋದರ ಎಂದು ಹೇಳುತ್ತಿದ್ದರು. ಸೌಂದರ್ಯ ಭಾರತೀಯ ಜನತಾ ಪಕ್ಷ ಮತ್ತು ತೆಲುಗು ದೇಶಂ ಪಕ್ಷದ ಅಭ್ಯರ್ಥಿ ರಮೇಶ್ ಕದಂ ಪರ ಪ್ರಚಾರ ಮಾಡಲು ಕರೀಂನಗರಕ್ಕೆ ತೆರಳುತ್ತಿದ್ದರು. ಟೇಕ್-ಆಫ್ ಆದ ಕೆಲವೇ ನಿಮಿಷಗಳಲ್ಲಿ ಸೌಂದರ್ಯ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೆ ತುತ್ತಾಯಿತು. ಈ ದುರ್ಘಟನೆಯಲ್ಲಿ ಸೌಂದರ್ಯ ಮತ್ತು ಅವರ ಸಹೋದರ ನಿಧನರಾದರು. 

ಇದನ್ನೂ ಓದಿ: Yash: ಯಶ್‌ - ರಾಧಿಕಾ ಲೈಫ್‌ಲ್ಲಿ ಜುಲೈ 18 ತುಂಬಾ ಸ್ಪೆಷಲ್‌! ಅಸಲಿಗೆ ಈ ದಿನ ನಡೆದಿದ್ದೇನು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News