Puttakkana Makkalu: ಜೈಲು ಸೇರಿದ ಬಂಗಾರಮ್ಮ: ಕಂಠಿ ಮತ್ತು ಸ್ನೇಹಾ ದಾಂಪತ್ಯದಲ್ಲಿ ಬಿರುಕು!

Puttakkana Makkalu Kannada Serial: ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸ್ನೇಹಾ ತನ್ನ ಅತ್ತೆ ಬಂಗಾರಮ್ಮನ ಮೇಲೆ ಪೊಲೀಸ್‌ ಕಂಪ್ಲೇನ್‌ ಕೊಟ್ಟು ಅರೆಸ್ಟ್‌ ಮಾಡಿಸುತ್ತಾಳೆ. ಸ್ನೇಹಾ ದೂರು ನೀಡಿದ್ದೇಕೆ? ಇದರಿಂದ ಸ್ನೇಹಾ ಹಾಗೂ ಕಂಠಿ ಸಂಬಂಧದ ಮಧ್ಯೆ ಬಿರುಕು ಮೂಡುತ್ತಾ? ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.  

Written by - Zee Kannada News Desk | Last Updated : Apr 11, 2024, 12:43 PM IST
  • ಸ್ನೇಹಾಗೆ ಅಕ್ಕ ಎಂದು ಕರೆಯುವ ಗೌರಿ ಎನ್ನವವಳ ತಂದೆ ಮಹಡಿಯ ಮೇಲಿಂದ ಬಿದ್ದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
  • ಆಸ್ಪತ್ರೆ ಹತ್ತಿರ ಬಂದ ಸ್ನೇಹಾ ಪೊಲೀಸರಿಗೆ ಕರೆ ಮಾಡಿ ಬಂಗಾರಮ್ಮ ಮೇಲೆ ಕಂಪ್ಲೇಂಟ್ ನೀಡುತ್ತಾಳೆ. ತದನಂತರ ಪೊಲೀಸರು ಬಂಗಾರಮ್ಮ ಮನೆಗೆ ಬಂದಾಗ ರಾಧಾಗೆ ಶಾಕ್ ಆಗುತ್ತದೆ.
  • ಕಂಠಿ ಮನೆಗೆ ಬಂದಾಗ ಪೊಲೀಸರು ಬಂಗಾರಮ್ಮನ್ನು ಅರೆಸ್ಟ್‌ ಮಾಡಿ ಕರೆದುಕೊಂಡು ಹೊಗುತ್ತಿರುವುದನ್ನು ನೋಡಿ, ಏನು ಎತ್ತ ಎಂದು ಪ್ರಶ್ನೆ ಮಾಡುತ್ತಾನೆ.
Puttakkana Makkalu: ಜೈಲು ಸೇರಿದ ಬಂಗಾರಮ್ಮ: ಕಂಠಿ ಮತ್ತು ಸ್ನೇಹಾ ದಾಂಪತ್ಯದಲ್ಲಿ ಬಿರುಕು! title=

Bangaramma Arrested In Puttakkana Makkalu: ಝೀ ಕನ್ನಡ ಪ್ರಸ್ತುತ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಬಂಗಾರಮ್ಮನವರ ಬಡ್ಡಿ ವ್ಯವಹಾರದಿಂದ ಒಂದು ಪ್ರಾಣಕ್ಕೆ ಕಂಟಕ ಉಂಟಾಗುವ ಸಾಧ್ಯತೆ ಕಾಣುತ್ತಿದೆ. ಬಂಗಾರಮ್ಮ ಬಡವರಿಗೆ ಸಹಾಯ ಆಗಲಿಯೆಂದು ಬಡ್ಡಿ ಸಾಲ ನೀಡುತ್ತಿದ್ದು, ಆದರೆ ಆ ಬಡ್ಡಿ ಹಣವನ್ನು ಬಡವರಿಗೆ  ಕಟ್ಟಲು ಆಗುವುದಿಲ್ಲ. ಇದರಿಂದ ಕಂಗೆಟ್ಟ ಅನೇಕ ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಇದೀಗ ಈ ವಿಷಯ ಸ್ನೇಹಾಗೆ ಗೊತ್ತಾಗಿದೆ.

ಸ್ನೇಹಾಗೆ ಅಕ್ಕ ಎಂದು ಕರೆಯುವ ಗೌರಿ ಎನ್ನವವಳ ತಂದೆ ಮಹಡಿಯ ಮೇಲಿಂದ ಬಿದ್ದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಇದನ್ನೂ ನೋಡಿದ ಗೌರಿ ತುಂಬಾನೇ ಆಘಾತಕ್ಕೆ ಒಳಗಾಗಿದ್ದಾಳೆ. ಗೌರಿ ತನ್ನ ತಂದೆ ಯಾಕಾದರೂ ಇಂತಹ ಕೆಲಸವನ್ನು ಮಾಡಿಕೊಂಡರೋ ಎಂದು ಅಂದುಕೊಳ್ಳುತ್ತಾ ಸ್ನೇಹಗೆ ಕರೆ ಮಾಡುತ್ತಾಳೆ. ಗೌರಿ ಕರೆ ಮಾಡಿದಾಗ ನನ್ನ ತಂದೆ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ನನಗೆ ತುಂಬಾ ಭಯವಾಗುತ್ತಿದೆ. ಹೇಗಾದರೂ ಮಾಡಿ ನನ್ನ ತಂದೆಯನ್ನು ಉಳಿಸಿಕೊಡಿ  ಎಂದು ಬೇಡಿಕೊಳ್ಳುತ್ತಾಳೆ.

ಇದನ್ನೂ ಓದಿ: Lakshmi Nivasa Serial: ಲಕ್ಷ್ಮೀ ನಿವಾಸ "ಸಿದ್ದೇಗೌಡ್ರು" ತಾಯಿ ಕೂಡ ಖ್ಯಾತ ನಟಿ.. ಮಗನೊಂದಿಗೆ ಒಂದೇ ಸಿರೀಯಲ್‌ನಲ್ಲಿ ನಟಿಸುತ್ತಿರುವ ಕಲಾವಿದೆ ಯಾರು ಗೊತ್ತಾ?

ಗೌರಿ ಸ್ನೇಹಾಗೆ ಫೋನ್‌ನಲ್ಲಿ ನನ್ನ ತಂದೆ ಬಂಗಾರಮ್ಮ ಕೈಯಿಂದ ಸಾಲವನ್ನು ತೆಗೆದುಕೊಂಡಿದ್ದರು. ಆದರೆ ಸಾಲದ ಬಡ್ಡಿಯನ್ನು ಕಟ್ಟಬೇಕು ಎಂದು ಬಂಗಾರಮ್ಮ ಅವರು ಎಚ್ಚರಿಕೆ ನೀಡಿದ್ದರು. ಆದರೆ ತಂದೆಗೆ ಸಾಲದ ಬಡ್ಡಿಯನ್ನು ಕಟ್ಟಲು ಆಗದೆ ಆತ್ಮಹತ್ಯೆಗೆ ಯತ್ನಿಸಿದರು. ಇದೀಗ ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ನನಗೆ ಭಯವಾಗುತ್ತಿದೆ. ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳುತ್ತಾಳೆ. ಗೌರಿ ಮಾತನ್ನು ಕೇಳಿದ ಸ್ನೇಹ ತಕ್ಷಣ ಆಸ್ಪತ್ರೆಗೆ ಬರುತ್ತಾಳೆ.

ಆಸ್ಪತ್ರೆ ಹತ್ತಿರ ಬಂದ ಸ್ನೇಹಾ ಪೊಲೀಸರಿಗೆ ಕರೆ ಮಾಡಿ ಬಂಗಾರಮ್ಮ ಮೇಲೆ ಕಂಪ್ಲೇಂಟ್ ನೀಡುತ್ತಾಳೆ. ತದನಂತರ ಪೊಲೀಸರು ಬಂಗಾರಮ್ಮ ಮನೆಗೆ ಬಂದಾಗ ರಾಧಾಗೆ ಶಾಕ್ ಆಗುತ್ತದೆ. ಇವಳು ಪೊಲೀಸರು ಯಾಕೆ ಬಂದಿದ್ದಾರೆಂದು ಪದೇ ಪದೇ ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಸ್ನೇಹ ಸ್ವಲ್ಪ ಜೋರಾಗಿಯೇ ಅತ್ತೆಯ ಜೊತೆ ಮಾತನಾಡಬೇಕಾಗಿತ್ತು. ಅವರ ಮೇಲೆ ಕೇಸ್ ಫೈಲ್ ಆಗಿದೆ ಎಂದು ಹೇಳುತ್ತಾಳೆ. ಆಗ ಬಂಗಾರಮ್ಮ ಕಾರಿನಿಂದ ಇಳಿದು ಮನೆಯ ಒಳಗೆ ಬರುತ್ತಾಳೆ.

ಇದನ್ನೂ ಓದಿ: Amruthadhaare Serial: ಸುಳ್ಳು ಶಾಸ್ತ್ರ ಹೇಳಿಸಿದ ಶಾಕುಂತಲ: ಭೂಮಿಕಾಗೆ ಅತ್ತೆಯ ಕುತಂತ್ರದ ಬಗ್ಗೆ ಸತ್ಯ ಬಿಚ್ಚಿಟ್ಟ ಮಲ್ಲಿ!

ಮನೆಗೆ ಬಂದ್ಮೇಲೆ ಬಂಗಾರಮ್ಮ ನನ್ನ ಮನೆಯತ್ತ ಖಾಕಿವರು ಸುಳಿಯಬಾರದು ಎಂದು ಹೇಳಿದಾಗ ಪೊಲೀಸರು, ನಿಮ್ಮ ಮೇಲೆ ಕೇಸ್ ದಾಖಲು ಆಗಿದೆ ಎಂದು ಹೇಳುತ್ತಾರೆ. ಪೊಲೀಸರು ನೀವು ಪೊಲೀಸ್ ಸ್ಟೇಷನ್‌ಗೆ ಬರಬೇಕು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇವೆ, ನಿಮ್ಮ ಸೊಸೆ ಸ್ನೇಹಾ ನಿಮ್ಮ ಮೇಲೆ ಕೇಸ್ ಕೊಟ್ಟಿದ್ದಾರೆ. ಆಗ ಬಂಗಾರಮ್ಮ ಶಾಕ್‌ ಆಗುತ್ತಾರೆ. ಬಂಗಾರಮ್ಮನನ್ನು ಪೊಲೀಸರು ಸ್ಟೇಷನ್‌ಗೆ ಕರೆದುಕೊಂಡು ಹೋಗುವಾಗ ಕಂಠಿ ಬರುತ್ತಾನೆ.

ಕಂಠಿ ಮನೆಗೆ ಬಂದಾಗ ಪೊಲೀಸರು ಬಂಗಾರಮ್ಮನ್ನು ಅರೆಸ್ಟ್‌ ಮಾಡಿ ಕರೆದುಕೊಂಡು ಹೊಗುತ್ತಿರುವುದನ್ನು ನೋಡಿ, ಏನು ಎತ್ತ ಎಂದು ಪ್ರಶ್ನೆ ಮಾಡುತ್ತಾನೆ. ಆಗ ಸ್ನೇಹಾ ತಾನು ದೂರು ಕೊಟ್ಟಿರುವುದರ ಬಗ್ಗೆ ಹೇಳುತ್ತಾಳೆ. ಬಳಿಕ ಪೊಲೀಸರು ಕಂಠಿ ಮಾತಿಗೆ ಕ್ಯಾರೆ ಅನ್ನದೇ ಬಂಗಾರಮ್ಮನನ್ನು ಕರೆದುಕೊಂಡು ಹೋಗುತ್ತಾರೆ. ಆದರೆ ಸೊಸೆಯ ನಿರ್ಧಾರದಿಂದ ಬಂಗಾರಮ್ಮ ನಮನೆಯವರಿಗೆ ತುಂಬಾ ಬೇಸರವಾಗುತ್ತದೆ. ಸ್ನೇಹಾ ಮಾಡಿದ ಕೆಲಸದಿಂದ ಕಂಠಿಗೆ ಬೇಜಾರು ಆಗುತ್ತದೆ. ಇದು ನರಿಬುದ್ದಿಯ ರಾಧಾಗೆ ಪ್ಲಸ್ ಪಾಯಿಂಟ್ ಆಗಿದ್ದು, ಮುಂದೆ ಇದರಿಂದ ಸ್ನೇಹಾ ಕಂಠಿ ಸಂಬಂಧದ ಮಧ್ಯೆ ಬಿರುಕು ಬೀಡುತ್ತಾ, ಅಥವಾ ಏನಾಗಬಹುದು ಎಂಬುದನ್ನು ಕಾದು ನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News