'ತಲೈವಾ'ಗೆ ಗೋಲ್ಡನ್ ಟಿಕೆಟ್ ನೀಡಿದ ಜೈಷಾ..! ODI ವಿಶ್ವಕಪ್ ನೋಡುವಂತೆ ರಜನಿಗೆ ಆಹ್ವಾನ

ODI World cup 2023 : ಮೈದಾನಕ್ಕೆ ಬಂದು ODI ವಿಶ್ವಕಪ್‌ ನೋಡುವಂತೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಗೋಲ್ಡನ್ ಟಿಕೆಟ್‌ಗಳನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ಜಯ್ ಶಾ ರಜನಿಕಾಂತ್‌ ಅವರಿಗೂ ಈ ಟಿಕೆಟ್ ನೀಡಿದರು.  

Written by - Krishna N K | Last Updated : Sep 19, 2023, 04:20 PM IST
  • ODI ವಿಶ್ವಕಪ್‌ ನೋಡುವಂತೆ ಗಣ್ಯರಿಗೆ ಬಿಸಿಸಿಐ ಆಹ್ವಾನ.
  • ಗೋಲ್ಡನ್‌ ಟಿಕೆಟ್‌ ನೀಡಿ ಪಂದ್ಯ ವೀಕ್ಷಣೆಗೆ ಆಹ್ವಾನಿಸಿದ ಬಿಸಿಸಿಐ.
  • ಸೂಪರ್‌ ಸ್ಟಾರ್‌ ನಟ ರಜನಿಕಾಂತ್‌ಗೆ ಗೋಲ್ಡನ್‌ ಟಿಕೆಟ್‌ ನೀಡಿದ ಜಯ್‌ ಶಾ.
'ತಲೈವಾ'ಗೆ ಗೋಲ್ಡನ್ ಟಿಕೆಟ್ ನೀಡಿದ ಜೈಷಾ..! ODI ವಿಶ್ವಕಪ್ ನೋಡುವಂತೆ ರಜನಿಗೆ ಆಹ್ವಾನ title=

ODI World cup 2023 golden ticket : ಮುಂದಿನ ತಿಂಗಳು 5 ರಿಂದ ಭಾರತದಲ್ಲಿ ನಡೆಯಲಿರುವ ODI ವಿಶ್ವಕಪ್‌ನ ಪಂದ್ಯಗಳನ್ನು ವೀಕ್ಷಿಸಲು ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ 'ಗೋಲ್ಡನ್ ಟಿಕೆಟ್' ನೀಡಲಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ರಜಿನಿಕಾಂತ್ ಅವರೇ ಚೆನ್ನೈನಲ್ಲಿರುವ ರಜನಿ ಮನೆಗೆ ತೆರಳಿ ಈ ಗೋಲ್ಡನ್ ಟಿಕೆಟ್ ಹಸ್ತಾಂತರಿಸಿದ್ದಾರೆ.  

ವಿಶ್ವಕಪ್ ಅನ್ನು ಜನಸಾಮಾನ್ಯರಿಗೂ ತಲುಪಿಸಲು ಮತ್ತು ಈ ಮೆಗಾ ಈವೆಂಟ್ ಅನ್ನು ಅದ್ಧೂರಿಯಾಗಿ ನಡೆಸಲು ಬಿಸಿಸಿಐ ಮತ್ತು ಐಸಿಸಿ ವಿನೂತನ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಇದರ ಭಾಗವಾಗಿ ಈಗಾಗಲೇ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಜೈ ಶಾ ಈ ಗೋಲ್ಡನ್ ಟಿಕೆಟ್‌ಗಳನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ಜಯ್ ಶಾ ರಜನಿಕಾಂತ್‌ಗೆ ಈ ಟಿಕೆಟ್ ನೀಡಿದ್ದರು.  

ಇದನ್ನೂ ಓದಿ: ಮತ್ತೆ ಹಾಟ್‌ ಅವತಾರದಲ್ಲಿ ಕಿರುತೆರೆ ಗ್ಲಾಮರ್ ಗೊಂಬೆ...ಪೋಟೋಸ್‌ ನೋಡಿ

ಈ ಗೋಲ್ಡನ್ ಟಿಕೆಟ್ ಪಡೆದ ಸೆಲೆಬ್ರಿಟಿಗಳು ವಿಐಪಿ ಲಾಂಜ್‌ನಲ್ಲಿ ಸಂಪೂರ್ಣ ಉಚಿತವಾಗಿ ಕುಳಿತು ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಬಹುದು. ರಜನಿಕಾಂತ್‌ಗೆ ಗೋಲ್ಡನ್ ಟಿಕೆಟ್ ನೀಡಿದ ನಂತರ, ಬಿಸಿಸಿಐ ಮತ್ತು ಜಯ್ ಶಾ ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕ್ರಿಕೆಟ್ ಅಭಿಮಾನಿಯಾಗಿರುವ ತಲೈವಾ ಅವರನ್ನು ಏಕದಿನ ವಿಶ್ವಕಪ್ ವೀಕ್ಷಿಸಲು ಸ್ವಾಗತಿಸಲಾಯಿತು ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.  

ಈ ನಡುವೆ ಸೆಲೆಬ್ರಿಟಿಗಳಿಗೆ ಗೋಲ್ಡನ್ ಟಿಕೆಟ್ ನೀಡುವ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಬಿಸಿಸಿಐ, ಐಸಿಸಿ, ಸೆಲೆಬ್ರಿಟಿಗಳು ಬುಕ್ಕಿಂಗ್ ಆ್ಯಪ್‌ಗಳಲ್ಲಿ ಟಿಕೆಟ್‌ಗಾಗಿ ಹುಡುಕುತ್ತಿರುವಾಗ ತಮ್ಮ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಭಾರತಕ್ಕೆ ಏಕದಿನ ವಿಶ್ವಕಪ್ ನೀಡಿದ ಕಪಿಲ್ ದೇವ್, ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಮತ್ತು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಎಂಎಸ್ ಧೋನಿಗೆ ಗೋಲ್ಡನ್‌ ಟಿಕೆಟ್‌ ನೀಡುವಂತೆ ಕೇಳಲಾಯಿತು. 

ಇದನ್ನೂ ಓದಿ: ಭಾರತೀಯ ಸಿನಿಮಾದ ಬಯೋಪಿಕ್‌ ʼಮೇಡ್‌ ಇನ್‌ ಇಂಡಿಯಾʼ ಘೋಷಿಸಿದ ಎಸ್‌ಎಸ್‌ ರಾಜಮೌಳಿ

ಇದಕ್ಕೆ ಪ್ರತಿಕ್ರಿಯಿಸಿದ ಗವಾಸ್ಕರ್.. 'ಬಿಸಿಸಿಐ (ಚಿನ್ನದ ಟಿಕೆಟ್‌) ತೆಗೆದುಕೊಂಡಿರುವ ಈ ನಿರ್ಧಾರ ಬಹಳ ಶ್ರೇಷ್ಠವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಹೆಸರುವಾಸಿಯಾದವರಿಗೆ ಗೊಲ್ಡನ್‌ ಟಿಕೆಟ್‌ ನೀಡಿ ಗೌರವಿಸುವುದು ಉತ್ತಮ ವಿಚಾರ. ಇಲ್ಲಿಯವರೆಗೆ ಅಮಿತಾಭ್ ಬಚ್ಚನ್ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೆ ಗೋಲ್ಡನ್ ಟಿಕೆಟ್ ನೀಡಲಾಗಿದೆ. ಅಲ್ಲದೆ ಟೀಂ ಇಂಡಿಯಾಗೆ ಏಕದಿನ ವಿಶ್ವಕಪ್ ನೀಡಿದ ಕಪಿಲ್ ದೇವ್ ಮತ್ತು ಧೋನಿಗೂ ಇವುಗಳನ್ನು ನೀಡಬೇಕು. ಇದಲ್ಲದೆ, ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮತ್ತು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರಿಗೂ ಸಹ ಈ ಗೌರವ ಸಂದಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News