ಆಕೆಗೋಸ್ಕರ ಪತ್ನಿಯನ್ನೇ ದೂರ ಮಾಡಿದ್ರಾ ವರ್ತೂರು ಸಂತೋಷ್?

Varthur Santhosh, Bigg Boss Season 10: ಕೆಲವರು ವರ್ತೂರು ಸಂತೋಷ್ ಪರ ಮಾತನಾಡಿದ್ದರೆ, ಇನ್ನೂ ಕೆಲವರು ಸೋಮನಾಥ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಇದೇ ವೇಳೆ ವರ್ತೂರು ಸಂತೋಷ್ ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು

Written by - Bhavishya Shetty | Last Updated : Nov 30, 2023, 05:11 PM IST
    • ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್
    • ಸಂತೋಷ್ ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
    • ಈ ಎಲ್ಲಾ ಆರೋಪಗಳಿಗೆ ವರ್ತೂರ್ ಸಂತೋಷ್ ಸ್ವತಃ ಸ್ಪಷ್ಟನೆ ನೀಡಿದ್ದಾರೆ
ಆಕೆಗೋಸ್ಕರ ಪತ್ನಿಯನ್ನೇ ದೂರ ಮಾಡಿದ್ರಾ ವರ್ತೂರು ಸಂತೋಷ್?  title=
varthur santhosh

Varthur Santhosh, Bigg Boss Season 10: ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಅವರು ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಆತ ಮಾದಕ ವ್ಯಸನಿ ಎಂದೆಲ್ಲಾ ಈ ಹಿಂದೆ ವರ್ತೂರು ಸಂತೋಷ್ ಅವರ ಮಾವ ಸೋಮನಾಥ್ ಆರೋಪಿಸಿದ್ದರು. ಈ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ: ಅಪಾಯದಲ್ಲಿದೆ ವಿರಾಟ್ ಕೊಹ್ಲಿಯ ಟೆಸ್ಟ್ ಇತಿಹಾಸದ ಶ್ರೇಷ್ಠ ದಾಖಲೆ: ರೆಕಾರ್ಡ್ ಮುರಿಯಲು ಈ ದಿಗ್ಗಜನಿಗೆ ಬೇಕಿರೋದು ಇಷ್ಟೇ ರನ್…

ಕೆಲವರು ವರ್ತೂರು ಸಂತೋಷ್ ಪರ ಮಾತನಾಡಿದ್ದರೆ, ಇನ್ನೂ ಕೆಲವರು ಸೋಮನಾಥ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಇದೇ ವೇಳೆ ವರ್ತೂರು ಸಂತೋಷ್ ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಈ ಎಲ್ಲಾ ಆರೋಪಗಳಿಗೆ ವರ್ತೂರ್ ಸಂತೋಷ್ ಸ್ವತಃ ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮನಬಿಚ್ಚಿ ಎಲ್ಲರ ಮುಂದೆ ಮಾತನಾಡಿದ ಸಂತೋಷ್, “ಮದುವೆ ವಿಚಾರ ಬಂದಾಗ ದೊಡ್ಡಪ್ಪನ ಬಳಿ ಹೇಳಿದ್ದೆ, ನೀವು ಯಾವ ಹುಡ್ಗೀನ ತೋರಿಸಿದ್ರೂ ಅವ್ಳಿಗೆ ತಾಳಿ ಕಟ್ತೇನೆ. ಮಾತು ಕೊಟ್ಟು ಒಪ್ಪಿಕೊಂಡೆ, ಹೀಗೆ ಸಾಗ್ತಾ ಇತ್ತು. ಕಡೆಗೆ ನಮ್ಮಮ್ಮನ ಇಗ್ನೋರ್ ಮಾಡೋಕೆ ಶುರು ಮಾಡಿದ್ಳು, ನಾನು ಸಂಪಾದನೆ ಮಾಡಿರೋ ಜನರನ್ನು ಬಿಟ್ಟು ಇವ್ರ ಹಿಂದೆ ಹೋಗ್ಬೇಕು ಅಂದ್ರೆ ಆಗಲ್ಲ. ನಾನು ಅವ್ರ ಮನೆ ತನಕ ಹೋಗ್ತೀನಿ, ನನ್ನ ಮಾತಿನ ಪ್ರಕಾರ ಬಂದ್ರೆ ಇವತ್ತಿಗೂ ನೀನ್ ರಾಣಿನೇ… ಬಾ ಅಂತ ಕರಿತೀನಿ.. ಆದ್ರೆ ಫಸ್ಟ್ ಆ ಗೇಟಿಂದ ಹೊರಗಡೆ ಹೋಗು ಅಂತಾಳೆ, ಅವತ್ತು ಮಾತ್ ಕೊಟ್ಟು ಬಂದಿದ್ದೀನಿ. ಆ ಮಾತಿಗೆ ಇವತ್ತು ನಿಂತಿದ್ದೀನಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್’ಗೆ ರೋಹಿತ್ ಶರ್ಮಾ ನಾಯಕ: ಮತ್ತೆ ಕ್ಯಾಪ್ಟನ್ಸಿ ನೀಡಲು ಕಾರಣ ಬಿಚ್ಚಿಟ್ಟ ಬಿಸಿಸಿಐ!

ಈ ವಿಡಿಯೋವನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ಈ ವಿಡಿಯೋಗೆ ಅನೇಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಪತ್ನಿ ಮಾತು ಕೇಳಿ ತಾಯಿಯನ್ನೇ ದೂರ ಇಡುವ ಕಾಲದಲ್ಲಿ. ಆಕೆಗೋಸ್ಕರ ಮತ್ತು ಜನರಿಗಾಗಿ ತನ್ನ ಹೆಂಡತಿಯನ್ನೇ ದೂರವಿಟ್ಟ ಸಾಹುಕಾರ ಈತ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News