Drone Prathap: ಪ್ರತಾಪ್‌ ಬೆಂಬಲಕ್ಕೆ ನಿಂತ ಕರುನಾಡು..! ಬಿಗ್‌ಬಾಸ್‌ನಲ್ಲಿ ʼಡ್ರೋನ್‌ʼ ಗೆಲ್ಲೋದು ಪಕ್ಕಾ

Bigg Boss drone Prathap: ಬಿಗ್‌ಬಾಸ್‌ ಕಿಚ್ಚ ಸುದೀಪ್‌ ವಾರದ ಕತೆ ಕಿಚ್ಚನ ಜೊತೆ ಶೋನಲ್ಲಿ ಮನೆ ಮಂದಿಗೆ ನೀತಿ ಪಾಠ ಹೇಳಿಕೊಟ್ಟರು. ಅಲ್ಲದೆ, ಡ್ರೋನ್‌ ಪ್ರತಾಪ್‌ ನಗುವಿಗೆ ಕಾರಣರಾದರು. ಪ್ರತಾಪ್‌ ಸ್ಟೈಲ್‌ ಸಹ ಬದಲಾಯಿಸಿದರು. ಇದನ್ನ ಗಮನಿಸಿದ ಪ್ರೇಕ್ಷಕರು ಕಿಚ್ಚನಿಗೆ ಧನ್ಯವಾದ ಹೇಳಿದ್ದಾರೆ. 

Written by - Krishna N K | Last Updated : Oct 15, 2023, 01:44 PM IST
  • ವಾರದ ಕತೆ ಕಿಚ್ಚನ ಜೊತೆ ಶೋನಲ್ಲಿ ಮನೆ ಮಂದಿಗೆ ನೀತಿ ಪಾಠ
  • ಡ್ರೋನ್‌ ಪ್ರತಾಪ್‌ ನಗುವಿಗೆ ಕಾರಣರಾದ ಬಿಗ್‌ಬಾಸ್‌ ಕಿಚ್ಚ ಸುದೀಪ್‌
  • ಜೈ ಪ್ರತಾಪ್‌ ಅಂತ ಕಾಮೆಂಟ್‌ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ
Drone Prathap: ಪ್ರತಾಪ್‌ ಬೆಂಬಲಕ್ಕೆ ನಿಂತ ಕರುನಾಡು..! ಬಿಗ್‌ಬಾಸ್‌ನಲ್ಲಿ ʼಡ್ರೋನ್‌ʼ ಗೆಲ್ಲೋದು ಪಕ್ಕಾ title=

BBK 10 : ನಿನ್ನೆ ನಡೆದ ಬಿಗ್‌ಬಾಸ್‌ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದ ನಂತರ ಡ್ರೋನ್‌ ಪ್ರತಾಪ್‌ ಪರ ನೆಟ್ಟಿಗರು ಬೆಂಬಲ ಸೂಚಿಸುತ್ತಿದ್ದಾರೆ. ಎಲ್ಲಾ ಸ್ಪರ್ಧಿಗಳು ಪ್ರತಾಪ್‌ ಅವರನ್ನು ಹರಕೆಯ ಕುರಿ ತರ ನೋಡಿದ ರೀತಿಗೆ ಪ್ರೇಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಕಿಚ್ಚ ಸುದೀಪ್‌ ಡ್ರೋನ್‌ ಪ್ರತಾಪ್‌ ಪರ ಮಾತನಾಡಿದ್ದು, ಕರುನಾಡಿನ ಜನರಿಗೆ ಇಷ್ಟವಾದಂತಿದೆ.

ಹೌದು.. ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಮೊದಲ ವಾರ ಮುಗಿದಿದೆ. ಸಿಕ್ಕಾಪಟ್ಟೆ ಮನರಂಜನೆ ಜೊತೆ ತಮ್ಮ ನೆಚ್ಚಿನ ಸ್ಪರ್ಧಿಗಳ ನಿಜರೂಪವನ್ನು ಪ್ರೇಕ್ಷಕರು ತಿಳಿದುಕೊಳ್ಳುತ್ತಿದ್ದಾರೆ. ಅಲ್ಲದೆ, ಡ್ರೋನ್‌ ಪ್ರತಾಪ್‌ ಅವರನ್ನು ದೊಡ್ಮನೆ ಮಂದಿ ನಡೆಸಿಕೊಂಡ ರೀತಿಗೆ ನೆಟ್ಟಿಗರು ಕಾಮೆಂಟ್‌ಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಕಿಚ್ಚನ ಪಂಚಾಯಿತಿಯಲ್ಲಿ ನಗೆ, ಹೊಗೆ, ಪಿನ್ನು ಮತ್ತು ಎಲಿಮಿನೇಷನ್‌ನ ಟೆನ್ಷನ್ನು!

ಮುಖ್ಯವಾಗಿ ಭಾಗ್ಯಶ್ರೀ, ತುಕಾಲಿ ಸಂತು, ಸ್ನೇಹಿತ್‌ ಮಾತಿನಿಂದ ಡ್ರೋನ್‌ ಪ್ರತಾಪ್‌ ಕಣ್ಣೀರು ಹಾಕುವಂತಾಯಿತು. ಮಾನವೀಯತೆ ಮೆರೆತು ಊಟ ಕೊಟ್ಟ ಪ್ರತಾಪ್‌ ಬೆಂಬಲಕ್ಕೆ ಭಾಗ್ಯಶ್ರೀ ನಿಲ್ಲಲೇ ಇಲ್ಲ, ಎಲ್ಲರನ್ನ ನಗಿಸಲು ತುಕಾಲಿ ಸಂತೋಷ್‌ ಪ್ರತಾಪ್‌ ಅವರನ್ನು ಹೀಯಾಳಿಸಿದ್ದರು. ಸ್ನೇಹಿತ್‌ ಅಂತೂ ಎಗರಾಡಿದ್ದರು. 

ಇದನ್ನೇಲ್ಲವನ್ನೂ ಗಮನಿಸಿದ್ದ ಬಿಗ್‌ಬಾಸ್‌ ಕಿಚ್ಚ ಸುದೀಪ್‌ ವಾರದ ಕತೆ ಕಿಚ್ಚನ ಜೊತೆ ಶೋನಲ್ಲಿ ಮನೆ ಮಂದಿಗೆ ನೀತಿ ಪಾಠ ಹೇಳಿಕೊಟ್ಟರು. ಅಲ್ಲದೆ, ಡ್ರೋನ್‌ ಪ್ರತಾಪ್‌ ನಗುವಿಗೆ ಕಾರಣರಾದರು. ಪ್ರತಾಪ್‌ ಸ್ಟೈಲ್‌ ಸಹ ಬದಲಾಯಿಸಿದರು. ಇದನ್ನ ಗಮನಿಸಿದ ಪ್ರೇಕ್ಷಕರು ಕಿಚ್ಚನಿಗೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಜೈ ಪ್ರತಾಪ್‌ ಅಂತ ಕಾಮೆಂಟ್‌ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ:ಇಂದು ಮನೆಯಿಂದ ಹೊರ ಹೋದವರು ಇವರೇ..!

ಇನ್ನು ಕೆಲ ನೆಟ್ಟಿಗರು ತಪ್ಪು ಮಾಡೋದು ಸಹ ಆದ್ರೆ ಅವರು ಸ್ಪರ್ಧಿಯಾಗಿ ಬಿಗ್‌ಬಾಸ್‌ ಮನೆಗೆ ಬಂದಿದ್ದು, ಅವರ ವ್ಯಯಕ್ತಿಕ ವಿಚಾರ ನಿಂದನೆ ಸರಿಯಲ್ಲ ಅಂತ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇನ್ನೂ ಕೆಲವರು ಪ್ರತಾಪ್‌ ನಾವಿದ್ದಿವಿ ನೀವು ಧೈರ್ಯದಿಂದ ಆಟವಾಡಿ ಅಂತ ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ಮುಂದಿನ ಸಲ ಪ್ರತಾಪ್‌ ಓಟಿಂಗ್‌ ವಿಚಾರ ಬಂದಾಗ ಗೆಲ್ಲೋದು ಪಕ್ಕಾ ಅನಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News