Darshan Kranti : ದರ್ಶನ್‌ ʼಕ್ರಾಂತಿʼಗೆ ಶುಭಕೋರಿದ ನಟ ರಾಕ್ಷಸ ಡಾಲಿ..!

ರಾಜ್ಯದಲ್ಲಿ ʼಕ್ರಾಂತಿʼ ಸಿನಿಮಾ ಥಿಯೇಟರ್‌ಗಳಲ್ಲಿ ಅಬ್ಬರಿಸುತ್ತಿದೆ. ದಚ್ಚು ಅಭಿಮಾನಿಗಳಿಗೆ ಈ ದಿನದ ಹಬ್ಬವಾಗಿದೆ. ಸ್ಯಾಂಡಲ್‌ವುಡ್‌ ತಾರೆಯರು ಸಹ ಯಜಮಾನನ ಸಿನಿಮಾಗೆ ಶುಭಕೋರುತ್ತಿದ್ದಾರೆ. ಈ ಸಾಲಿನಲ್ಲಿ ನಟ ಡಾಲಿ ಧನಂಜಯ್‌ ಟ್ಟೀಟ್‌ ಮಾಡುವ ಮೂಲಕ ʼಕ್ರಾಂತಿʼ ಕ್ರಾಂತಿಯಾಗಲಿ ಅಂತ ಡಿ ಬಾಸ್‌ ಚಿತ್ರಕ್ಕೆ ಶುಭಕೋರಿದ್ದಾರೆ.

Written by - Krishna N K | Last Updated : Jan 26, 2023, 12:38 PM IST
  • ರಾಜ್ಯದಲ್ಲಿ ʼಕ್ರಾಂತಿʼ ಸಿನಿಮಾ ಥಿಯೇಟರ್‌ಗಳಲ್ಲಿ ಅಬ್ಬರಿಸುತ್ತಿದೆ.
  • ಸ್ಯಾಂಡಲ್‌ವುಡ್‌ ತಾರೆಯರು ಸಹ ಯಜಮಾನನ ಸಿನಿಮಾಗೆ ಶುಭಕೋರುತ್ತಿದ್ದಾರೆ.
  • ʼಕ್ರಾಂತಿʼ ಕ್ರಾಂತಿಯಾಗಲಿ ಅಂತ ಡಿಬಾಸ್‌ ಚಿತ್ರಕ್ಕೆ ಡಾಲಿ ಧನಂಜಯ್‌ ಶುಭಕೋರಿದ್ದಾರೆ.
Darshan Kranti : ದರ್ಶನ್‌ ʼಕ್ರಾಂತಿʼಗೆ ಶುಭಕೋರಿದ ನಟ ರಾಕ್ಷಸ ಡಾಲಿ..! title=

DBoss Kranti : ರಾಜ್ಯದಲ್ಲಿ ʼಕ್ರಾಂತಿʼ ಸಿನಿಮಾ ಥಿಯೇಟರ್‌ಗಳಲ್ಲಿ ಅಬ್ಬರಿಸುತ್ತಿದೆ. ದಚ್ಚು ಅಭಿಮಾನಿಗಳಿಗೆ ಈ ದಿನದ ಹಬ್ಬವಾಗಿದೆ. ಸ್ಯಾಂಡಲ್‌ವುಡ್‌ ತಾರೆಯರು ಸಹ ಯಜಮಾನನ ಸಿನಿಮಾಗೆ ಶುಭಕೋರುತ್ತಿದ್ದಾರೆ. ಈ ಸಾಲಿನಲ್ಲಿ ನಟ ಡಾಲಿ ಧನಂಜಯ್‌ ಟ್ಟೀಟ್‌ ಮಾಡುವ ಮೂಲಕ ʼಕ್ರಾಂತಿʼ ಕ್ರಾಂತಿಯಾಗಲಿ ಅಂತ ಡಿ ಬಾಸ್‌ ಚಿತ್ರಕ್ಕೆ ಶುಭಕೋರಿದ್ದಾರೆ.

ಬಹುನಿರೀಕ್ಷಿತ ಕ್ರಾಂತಿ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಿನಿಮಾ ನೋಡಿದ ಮಂದಿ ಮೂವಿ ಸಖತ್‌ ಆಗಿದೆ ಅಂತ ಹೇಳ್ತಿದಾರೆ. ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭವಾದ ಕ್ರಾಂತಿ ಸಂಭ್ರಮಕ್ಕೆ ಸಿನಿ ತಾರೆಯರು ಆಲ್‌ ದಿ ಬೆಸ್ಟ್‌ ಹೇಳುತ್ತಿದ್ದಾರೆ. ನಟ ಧನಂಜಯ್‌ ಕೂಡ ದರ್ಶನ್‌ ಸಿನಿಮಾಗೆ ತಮ್ಮದೇ ಸ್ಟೈಲ್‌ನಲ್ಲಿ ಶುಭಕೋರಿದ್ದಾರೆ. ʼಕ್ರಾಂತಿಗೆ ಶುಭವಾಗಲಿ, ಕ್ರಾಂತಿಯಾಗಲಿʼ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಹೇ.. ಬಾಯ್ಕಾಟ್‌ ಗ್ಯಾಂಗ್ಸ್‌ ʼಕಿಂಗ್‌ ಖಾನ್‌ ಈಸ್‌ ಬ್ಯಾಕ್‌..!ʼ ʼಪಠಾಣ್‌ʼ ಪರ ʼರೈʼ ಬ್ಯಾಟ್‌ 

ʼಕ್ರಾಂತಿʼ ಸಿನಿಮಾದಲ್ಲಿ  ದರ್ಶನ್‌ ಕ್ಲಾಸ್‌ ಆಂಡ್‌ ಮಾಸ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಸಾಮಾಜಿಕ ಕಾಳಜಿ ಕಥಾಹಂದರ ಹೊಂದಿರುವ ಚಿತ್ರದಲ್ಲಿ, ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರ ಬರುವ ಪ್ರತಿಯೊಬ್ಬರಲ್ಲಿ ಸರ್ಕಾರಿ ಶಾಲೆ ಬಗ್ಗೆ ಕಾಳಜಿ ಮೂಡುತ್ತೆ ಅಂತ ಸಿನಿಮಾ ನೋಡಿದವರು ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಕ್ರಾಂತಿ ಅಭಿವೃದ್ಧಿ ಕ್ರಾಂತಿಗೆ ಮುನ್ನುಡಿಯಾಗುತ್ತೆ ಅಂದ್ರೆ ತಪ್ಪಾಗಲ್ಲ.

ಎರಡು ವರ್ಷಗಳ ಬಳಿಕ ಬೆಳ್ಳಿ ತರೆಮೇಲೆ ಡಿ ಬಾಸ್‌ ದರ್ಶನ ನೀಡಿದ್ದಾರೆ. ರಾಬರ್ಟ್‌ ಆಗಿ ಅಬ್ಬರಿಸಿದ್ದ ದಚ್ಚು ಇದೀಗ ಕ್ರಾಂತಿಯ ಕಹಳೆ ಊದಿದ್ದಾರೆ. ಸಿನಿಮಾದ ಟೈಟಲ್‌ ಅನೌನ್ಸ್‌ ಆದಾಗಿನಿಂದಲೂ ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇತ್ತು. ಆ ನಿರೀಕ್ಷೆಗಳನ್ನು ಗಜ ಸುಳ್ಳಾಗಿಸಲಿಲ್ಲ. ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಡೈರೆಕ್ಷನ್‌ ಕೂಡಾ ಸೂಪರ್‌ ಆಗಿದೆ. ಜೊತೆಗೆ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಕ್ಯೂಟ್‌ ಆಕ್ಟಿಂಗ್‌, ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಅದ್ಭುತ ಸಂದೇಶ ಸಾರುವ ಪಾತ್ರ ಎಲ್ಲರ ಗಮನಸೆಳೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News