Darshan: ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ಒಂಬತ್ತು ಸಿನಿಮಾ ಘೋಷಣೆ!

Darshan Birthday Special: ಸ್ಯಾಂಡಲ್‌ವುಡ್‌ನ ಬಾಕ್ಸ್‌ ಆಫೀಸ್‌ ಸುಲ್ತಾನ ದರ್ಶನ್ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳಿಗೆ ಉಡುಗರೆಯಾಗಿ ಒಂದಲ್ಲ, ಎರಡಲ್ಲ ಬರೋಬ್ಬರಿ ಒಂಭತ್ತು ಚಿತ್ರಗಳನ್ನ ಘೋಷಿಸಲಾಗಿದೆ. ಇದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.   

Written by - Zee Kannada News Desk | Last Updated : Feb 16, 2024, 11:57 AM IST
  • ಡಿ ಬಾಸ್‌ ಬರ್ತ್‌ಡೇ ಅಂದ್ರೆ ಫ್ಯಾನ್ಸ್‌ಗಳಿಗೆ ಮಾತ್ರವಲ್ಲದೇ ಸಿನಿಮಾರಂಗ ಇತರರೂ ಕೂಡಾ ಗಿಫ್ಟ್‌ ಕೊಡೋ ರೂಢಿಯಾಗಿದೆ.
  • ನಟ ದರ್ಶನ್‌ ಅಭಿನಯದ ಯಜಮಾನ ಹಾಗೂ ಕ್ರಾಂತಿ ಸಿನಿಮಾಗಳನ್ನ ಶೈಲಜಾ ನಾಗ್ ಮತ್ತು ಬಿ.ಸುರೇಶ್ ಜೊತೆ ಮಾಡಿದ್ದು, ಇದೀಗ ಇನ್ನೊಂದು ಚಿತ್ರವನ್ನ ಮಾಡಲು ರೆಡಿಯಾಗಿದ್ದಾರೆ.
  • ಇನ್ನೂ ದರ್ಶನ್ ನಟನೆಯ ಜಗ್ಗು ದಾದಾ ಸಿನಿಮಾವನ್ನ ಮಾಡಿದ್ದ ರಾಘವೇಂದ್ರ ಹೆಗ್ಡೆ ಕೂಡ ಮತ್ತೊಂದು ಚಿತ್ರವನ್ನ ಈ ನಟನ ಜೊತೆ ಮಾಡುವುದಾಗಿ ಘೋಷಿಸಿದ್ದಾರೆ.
Darshan: ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ಒಂಬತ್ತು ಸಿನಿಮಾ ಘೋಷಣೆ! title=

Nine Films Announced For Darshan Birthday: ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಅಂದರೇ ಅಭಿಮಾನಿಗಳ ಪಾಲಿಗೆ ದೊಡ್ಡ ಹಬ್ಬವಾಗಿದ್ದು, ಒಂದು ತಿಂಗಳ ಮುಂಚೆಯೇ ಇದಕ್ಕಾಗಿ ತಯಾರಿಯಾಗುತ್ತಿರುತ್ತಾರೆ. ಡಿ ಬಾಸ್‌ ಬರ್ತ್‌ಡೇ ಅಂದ್ರೆ ಫ್ಯಾನ್ಸ್‌ಗಳಿಗೆ ಮಾತ್ರವಲ್ಲದೇ  ಸಿನಿಮಾರಂಗ ಇತರರೂ ಕೂಡಾ ಗಿಫ್ಟ್‌ ಕೊಡೋ ರೂಢಿಯಾಗಿದೆ. ಅದರಂತೆ ಬಾಕ್ಸ್‌ ಆಫೀಸ್‌ ಸುಲ್ತಾನನ ಜನ್ಮದಿನದ ಪ್ರಯುಕ್ತ ಒಂಭತ್ತು ಚಿತ್ರಗಳನ್ನ ಘೋಷಿಸಲಾಗಿದೆ. ಈ ಸಾಲಿನಲ್ಲಿ ದರ್ಶನ್ ಆಪ್ತ ನಿರ್ಮಾಪಕರಾದ ಶೈಲಜಾ ನಾಗ್ ಮತ್ತು ಬಿ.ಸುರೇಶ್ ಕೂಡ ಇದ್ದಾರೆ. 

ಹೌದು.. ನಟ ದರ್ಶನ್‌ ಅಭಿನಯದ ಯಜಮಾನ ಹಾಗೂ ಕ್ರಾಂತಿ ಸಿನಿಮಾಗಳನ್ನ  ಶೈಲಜಾ ನಾಗ್ ಮತ್ತು ಬಿ.ಸುರೇಶ್  ಜೊತೆ ಮಾಡಿದ್ದು, ಇದೀಗ ಇನ್ನೊಂದು ಚಿತ್ರವನ್ನ ಮಾಡಲು ರೆಡಿಯಾಗಿದ್ದಾರೆ. ದರ್ಶನ್‌ ಸಿಂಧೂರ ಲಕ್ಷ್ಮಣನ ಕಥೆ ಎಂಬ ವಿಶೇಷ ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಈ ಚಿತ್ರಕ್ಕೆ ಡೈರೆಕ್ಟರ್‌ ತರುಣ್ ಸುಧೀರ್ ಆಕ್ಷನ್‌ ಕಟ್‌ ಹೇಳಲಿದ್ದಾರೆಂಬುದು ಇನ್ನೊಂದು ವಿಶೇಷ ವಿಚಾರವಾಗಿದೆ. ಮತ್ತೆ ಚಾಲೆಂಜಿಂಗ್ ಸ್ಟಾರ್‌ಗೆ ಸಿನಿಮಾವೊಂದಕ್ಕೆ ಸೂರಪ್ಪ ಬಾಬು ನಿರ್ಮಾಣ ಮಾಡ್ತಾರೆ ಎಂಬ ವಿಷಯ ಈ ಹಿಂದೆಯೇ ಚಾಲ್ತಿಯಲ್ಲಿದ್ದು, ಇದೀಗ ಮತ್ತೊಮ್ಮೆ ದರ್ಶನ್ ಹುಟ್ಟುಹಬ್ಬದ ನೆಪದಲ್ಲಿ ಘೋಷಣೆಯಾಗಿದೆ.

ಇದನ್ನೂ ಓದಿ: Darshan: ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ಟ್ರ್ಯಾಕ್ಟರ್‌ ಉಡುಗರೆಯಾಗಿ ನೀಡಿದ ಫ್ಯಾನ್‌!

ಭೂಮಿ ಪುತ್ರ ದರ್ಶನ್ ಜೊತೆ ಅಂಬರೀಶ ಚಿತ್ರ ಮಾಡಿದ್ದ ಮಹೇಶ್ ಸುಖಧರೆ ಕೂಡ ಸಿನಿಮಾವೊಂದು ಘೋಷಿಸಿದ್ದಾರೆ. ಹಾಗೆ ಕಳೆದ ವರ್ಷ ದರ್ಶನ್ ಬರ್ತ್‌ಡೇ ಹಿನ್ನೆಲೆ ಈ ನಟನ ಮತ್ತೊಬ್ಬ ಅತ್ಯಾಪ್ತ ಸ್ನೇಹಿತ ಸಚ್ಚಿದಾನಂದ ಇಂಡುವಾಳ ಚಿತ್ರವನ್ನ ಘೋಷಿಸಿದ್ದು, ಈ ವರ್ಷ ತಮ್ಮ ಮಾತಿಗೆ ಬದ್ದರಾಗಿದ್ದಾರೆ. ವಿಶೇಷವೆಂದರೆ ಈ ಸಿನಿಮಾವನ್ನೂ ಕೂಡ ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರೆ. ಇನ್ನೂ ನಿರ್ಮಾಪಕರಾದ ರಮೇಶ್ ಪಿಳ್ಳೈ, ಮೋಹನ್ ನಟರಾಜನ್, ಕೆ.ಮಂಜುನಾಥ್, ರಘುನಾಥ್ ಸೋಗಿ, ದರ್ಶನ್ ಚಿತ್ರಕ್ಕೆ ಹಣ ಹೂಡಲು  ಆಸಕ್ತಿಯನ್ನ ತೋರಿಸಿದ್ದಾರೆ. 

ಇನ್ನೂ ದರ್ಶನ್ ನಟನೆಯ ಜಗ್ಗು ದಾದಾ ಸಿನಿಮಾವನ್ನ ಮಾಡಿದ್ದ ರಾಘವೇಂದ್ರ ಹೆಗ್ಡೆ ಕೂಡ ಮತ್ತೊಂದು ಚಿತ್ರವನ್ನ ಈ ನಟನ ಜೊತೆ ಮಾಡುವುದಾಗಿ ಘೋಷಿಸಿದ್ದಾರೆ. ಕಾರಣವೇನಂದರೆ ಜಗ್ಗು ದಾದಾ ಸಿನಿಮಾ ಹಿಟ್ ಆಗ್ತಿದ್ದರೂ ಖುದ್ದು ದರ್ಶನ್‌ಗೆ ಆ ಚಿತ್ರದ ಗೆಲುವಿನ ಕ್ರೆಡಿಟ್ ತೆಗೆದುಕೊಳ್ಳಲು ಆವತ್ತು ಇಷ್ಟವಿರಲಿಲ್ಲ. ರಿಲೀಸ್‌ ಸಂದರ್ಭದಲ್ಲಿ ನಿರ್ದೇಶಕರ ಜೊತೆಗಿನ ಚಿಕ್ಕ ಮನಸ್ತಾಪ ಇದಕ್ಕೆ ಕಾರಣವಾಗಿತ್ತು. ಆದರಿಂದ ದರ್ಶನ್ ಮತ್ತೊಮ್ಮೆ ರಾಘವೇಂದ್ರ ಹೆಗ್ಡೆ ಜೊತೆ ಸಿನಿಮಾ ಮಾಡ್ತಾರಾ ಇಲ್ಲವಾ ಎಂಬ ಕುತೂಹಲ ಇದ್ದೇ ಇದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

Trending News