ನಟ ದರ್ಶನ್‌ಗೆ 13 ವರ್ಷದಿಂದ ಕಾಡ್ತಿತ್ತಾ ಸಾಡೇಸಾತಿ! ದಚ್ಚು ವಿಷ್ಯದಲ್ಲಿ ನಿಜವಾಗುತ್ತಾ ಜ್ಯೋತಿಷಿಗಳ ಭವಿಷ್ಯ ?

Darshan Horoscope Prediction: ನಟ ದರ್ಶನ್ ಗೆ ಗಂಡಾಂತರದ ಮುನ್ಸೂಚನೆ ಇತ್ತ ಎಂಬ ಅನುಮಾನ ಶುರುವಾಗಿದೆ.

Written by - Chetana Devarmani | Last Updated : Jun 29, 2024, 11:41 AM IST
  • ನಟ ದರ್ಶನ್ ಗೆ ಗಂಡಾಂತರ!
  • 2024 ಅವರಿಗೆ ಡೇಂಜರಸ್ ಇಯರ್?
  • 13 ವರ್ಷಗಳಿಂದ ದಚ್ಚುಗೆ ಸಾಡೇಸಾತಿ !
ನಟ ದರ್ಶನ್‌ಗೆ 13 ವರ್ಷದಿಂದ ಕಾಡ್ತಿತ್ತಾ ಸಾಡೇಸಾತಿ! ದಚ್ಚು ವಿಷ್ಯದಲ್ಲಿ ನಿಜವಾಗುತ್ತಾ ಜ್ಯೋತಿಷಿಗಳ ಭವಿಷ್ಯ ? title=

Darshan Horoscope Prediction: ನಟ ದರ್ಶನ್ ಗೆ ಗಂಡಾಂತರದ ಮುನ್ಸೂಚನೆ ಇತ್ತ ಎಂಬ ಅನುಮಾನ ಶುರುವಾಗಿದೆ. 2024 ಅವರಿಗೆ ಡೇಂಜರಸ್ ಇಯರ್ ಅನ್ನೋದು ನಟ ದರ್ಶನ್‌ಗೂ ಮೊದಲೇ ಗೊತ್ತಿತ್ತಂತೆ. 13 ವರ್ಷಗಳಿಂದ ದಚ್ಚುಗೆ ಸಾಡೇಸಾತಿ ಕಾಟ ನಡೆಯುತ್ತಿದೆ ಎಂದು ಹೇಳಲಾಗಿದೆ. 

ಸಾಡೇಸತಿ ಶುರುವಾದಗಲೂ ಸೆರೆವಾಸ ಅನುಭವಿಸಿದ್ದ ದರ್ಶನ್‌, ಇದೀಗ ಸಾಡೇಸತಿ ಮುಗಿಯುವ ಸಮಯದಲ್ಲೂ ಜೈಲು ಪಾಲಾಗಿದ್ದಾರೆ. ಸಾಡೇಸಾತಿ ನಿವಾರಣೆಗಾಗಿ ದರ್ಶನ್ ಎರಡು ತಿಂಗಳ ಹಿಂದೆ ಪೂಜೆ ಮಾಡಿಸಿದ್ದರಂತೆ ಎನ್ನಲಾಗಿದೆ. 

ಇದನ್ನೂ ಓದಿ: ಈಗಾಗಲೇ 22 ಮನೆ.. ಮತ್ತೊಂದು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಅಮೀರ್ ಖಾನ್, ಬೆಲೆ ಎಷ್ಟು ಗೊತ್ತಾ?

ಎರಡು ತಿಂಗಳ ಹಿಂದೆ ದರ್ಶನ್ ಸುದರ್ಶನ ಹೋಮ ಮಾಡಿಸಿದ್ದರಂತೆ. ನಕಾರಾತ್ಮಕ ಅಂಶಗಳನ್ನ ನಾಶ ಮಾಡಲು ಸುದರ್ಶನ ಹೋಮ ಮಾಡಿಸಲಾಗುತ್ತೆ. ಶತ್ರುಗಳ ಮೇಲೆ ವಿಜಯ ಪ್ತಾಪ್ತಿಗೆ, ದುಷ್ಟ ಕಣ್ಣಿನಿಂದ ರಕ್ಷಣೆಗೆ ಈ ‌ಹೋಮ ಮಾಡಲಾಗುತ್ತೆ. ಅರೆಸ್ಟ್ ಆಗೋದಕ್ಕು ಮುನ್ನಾ ದಿನ ಮನೆಯನ್ನ ಹೊಸದಾಗಿ ಇನ್ನೋವೇಷನ್ ಮಾಡಿದ ಕಾರಣ ಪೂಜೆ ಇಟ್ಕೋಂಡಿದ್ರಂತೆ ಎನ್ನಲಾಗಿದೆ. 

ಡೆವಿಲ್ ಶೂಟಿಂಗ್ ನಲ್ಲೂ ಹೈ ಆಕ್ಷನ್ ಸೀನ್ ಇಡದಂತೆ ಮಿಲನಾ ಪ್ರಕಾಶ್ ಗೆ ದರ್ಶನ್ ಆಪ್ತರು ಹೇಳಿದ್ರಂತೆ. ಎಷ್ಟೆಲ್ಲ ಜಾಗ್ರತೆ ವಹಿಸಿದರೂ ದರ್ಶನ್ ಗೆ ಪೆಟ್ಟು ಆಗಿತ್ತು. ಫೈಟ್ ಸೀನ್ ಮಾಡೋಕೆ ಹೋಗಿ ಎಡಗೈಗೆ ಪ್ರ್ಯಾಕ್ಚರ್ ಮಾಡಿಕೊಂಡಿದ್ದರು. 

ಇದನ್ನೂ ಓದಿ: ಖಾಕಿ ಮುಂದೆ ʼಡೆವಿಲ್‌ ಕ್ರೌರ್ಯʼ ಬಿಚ್ಚಿಟ್ಟ ʼಡಿ ಗ್ಯಾಂಗ್‌ʼ..! ರೇಣುಕಾಸ್ವಾಮಿಗೆ ಬೂಟುಗಾಲಿನಿಂದ ದರ್ಶನ್‌...

ದರ್ಶನ್ ವಿಷ್ಯದಲ್ಲಿ ನಿಜವಾಗುತ್ತಾ ಜ್ಯೋತಿಷಿಗಳ ಭವಿಷ್ಯ?

ದರ್ಶನ್ ಗೆ ಮುಂದಿನ ದಿನಗಳಲ್ಲಿ ಅಭಿಮಾನಿಗಳ ಸಂಖ್ಯೆ ಡಬಲ್‌ ಆಗಲಿದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದಾರೆ ಎಂಬ ಸಂಗತಿ ವೈರಲ್‌ ಆಗುತ್ತಿದೆ. ಜೈಲಿನಿಂದ ಹೊರಬಂದ ಬಳಿಕ ಫಿನಿಕ್ಷ್ ನಂತೆ ಮತ್ತೇ ಕಮ್ ಬ್ಯಾಕ್ ಮಾಡುತ್ತಾರೆ. ರಾಜಕೀಯ ಕ್ಷೇತ್ರದಲ್ಲಿ ದರ್ಶನ್ ದೊಡ್ಡ ಹೆಸರು ಮಾಡಲಿದ್ದಾರೆ ಎಂದೆಲ್ಲ ಭವಿಷ್ಯ ಹೇಳಿದ್ದಾರಂತೆ ಎಂದೆನ್ನಲಾಗಿದೆ. ದರ್ಶನ್ ಜಾತಕದಲ್ಲಿ ಕಾಣುತ್ತಿದೆಯಂತೆ ಮುಂದಿನ ಯಶಸ್ಸಿನ ಲಕ್ಷಣ ಜೈಲಿನಿಂದ ದರ್ಶನ್ ಹೊರಬಂದ ಬಳಿಕ ಮುಟ್ಟಿದ್ದೆಲ್ಲಾ ಚಿನ್ನವಂತೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News