ಬಂಧನಕ್ಕೊಳಗಾಗಿದ್ದ ಜೈಲರ್ ವಿಲನ್‌ ವಿನಾಯಕನ್‌ಗೆ ಜಾಮೀನು..! ಅಸಲಿಗೆ ಏನಾಗಿತ್ತು ಗೊತ್ತೆ..?

actor Vinayakan : ಬಂಧನಕ್ಕೊಳಗಾಗಿದ್ದ ಮಲಯಾಳಂ ನಟ, ಜೈಲರ್‌ ಸಿನಿಮಾ ಖ್ಯಾತಿಯ ವಿನಾಯಕನ್‌ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಮದ್ಯ ಸೇವನೆ ಮಾಡಿ ಪೊಲೀಸ್‌ ಠಾಣೆಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು.

Written by - Krishna N K | Last Updated : Oct 27, 2023, 03:26 PM IST
  • ಜೈಲಿನಿಂದ ನಟ ವಿನಾಯಕನ್‌ ಜಾಮೀನಿನ ಮೇಲೆ ಬಿಡುಗಡೆ.
  • ಮದ್ಯ ಸೇವನೆ ಮಾಡಿ ಪೊಲೀಸ್‌ ಠಾಣೆಯಲ್ಲಿ ಗಲಾಟೆ ಮಾಡಿದ್ದ ನಟ.
  • ಅಪಾರ್ಟ್ ಮೆಂಟ್ ನಲ್ಲಿ ಮದ್ಯ ಸೇವಿಸಿ ತೊಂದರೆ ನೀಡುತ್ತಿದ್ದಾರೆ ಎಂಬ ದೂರು ಬಂದಿತ್ತು.
ಬಂಧನಕ್ಕೊಳಗಾಗಿದ್ದ ಜೈಲರ್ ವಿಲನ್‌ ವಿನಾಯಕನ್‌ಗೆ ಜಾಮೀನು..! ಅಸಲಿಗೆ ಏನಾಗಿತ್ತು ಗೊತ್ತೆ..? title=

Jailer Vinayakan : ಮದ್ಯ ಸೇವನೆ ಮಾಡಿ ಪೊಲೀಸ್‌ ಠಾಣೆಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಮಲಯಾಳಂ ಖ್ಯಾತ ನಟ ವಿನಾಯಕನ್‌ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಕುರಿತು ಮಾತನಾಡಿರುವ ನಟ, ತಮ್ಮನ್ನು ಏಕೆ ಪೊಲೀಸರು ಬಂಧಿಸಿದ್ದರು ಎನ್ನವ ವಿಚಾರ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಹೌದು.. ಕಳೆದ ಮಂಗಳವಾರ ಎರ್ನಾಕುಲಂ ಪೊಲೀಸರು ಜೈಲರ್‌ ಖ್ಯಾತಿಯ ನಟ ವಿನಾಯಕನ್‌ನನ್ನು  ಬಂಧಿಸಿದ್ದರು. ಇವರು ವಾಸವಿರುವ ಅಪಾರ್ಟ್ ಮೆಂಟ್ ನಲ್ಲಿ ಮದ್ಯ ಸೇವಿಸಿ ತೊಂದರೆ ನೀಡುತ್ತಿದ್ದಾರೆ ಎಂಬ ದೂರು ಬಂದಿತ್ತು. ಅದರಂತೆ ಠಾಣೆಗೆ ಕರೆಸಿಕೊಂಡಿದ್ದ ವಿನಾಯಕನ್ ಮದ್ಯದ ಅಮಲಿನಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದರು ಎಂದು ಹೇಳಲಾಗಿತ್ತು. ಅಲ್ಲದೆ ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಇದನ್ನೂ ಓದಿ: ರಣಬೀರ್‌ನ ವಿಚಿತ್ರ ಫ್ಯಾಶನ್‌ ಸೆನ್ಸ್‌ ತಡೆದುಕೊಳ್ತಾಯಿದ್ದೀನಿ: ದೀಪಿಕಾಳ ವೇದನೆ

ಅಲ್ಲದೆ, ಪೊಲೀಸರು ವಿನಾಯಕನ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದರು. ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನಟನನ್ನು ಬಂಧಿಸಲಾಗಿತ್ತು. ಜೈಲಿನಲ್ಲಿದ್ದ ಜೈಲರ್‌ ವಿಲನ್‌ ಸಧ್ಯ ಜಾಮೀನಿನ ಮೇಲೆ ಹೊರಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ವಿನಾಯಕನ್ ಪೊಲೀಸರು ತಮ್ಮನ್ನು ಏಕೆ ಬಂಧಿಸಿದ್ದರು ಎಂಬ ವಿಚಾರ ಗೊತ್ತಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. 

ತಮಿಳಿನಲ್ಲಿ ತಿಮಿರು ಮತ್ತು ಮರಿಯನ್ ಮುಂತಾದ ಚಿತ್ರಗಳಲ್ಲಿ ನಟಿಸಿರುವ ವಿನಾಯಕನ್ ಇತ್ತೀಚೆಗೆ ಬಿಡುಗಡೆಯಾದ ರಜನಿಕಾಂತ್ ನಟನೆಯ ಜೈಲರ್‌ ಸಿನಿಮಾದ ಮೂಲಕ ಹೆಚ್ಚು ಜನಪ್ರಿಯರಾದರು. ಕಳೆದ ತಿಂಗಳು ತೆರೆಗೆ ಬಂದ ನೆಲ್ಸನ್ ನಿರ್ದೇಶನದ ಜೈಲರ್‌ನಲ್ಲಿ ವಿನಾಯಕನ್ ವರ್ಮನ್ ಎಂಬ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲದೆ ಅವರ ಮನಸಲಾಯೋ ಎಂಬ ಡೈಲಾಗ್‌ ಸಖತ್‌ ಸಖತ್‌ ವೈರಲ್‌ ಆಗಿತ್ತು.

ಇದನ್ನೂ ಓದಿ: ಆ ಚಟಕ್ಕೆ ಶಿವಕಾರ್ತಿಕೇಯನ್ ಅಡಿಕ್ಟ್! ನನ್ನನ್ನೂ ಬಲವಂತ ಮಾಡಿದ್ರು.. ಸತ್ಯ ಬಿಚ್ಚಿಟ್ಟ ಪ್ರಿಯಾಂಕಾ ಮೋಹನ್

ನಟನೆಯ ಹೊರತಾಗಿ ಗಾಯನ, ಸಂಗೀತ, ನೃತ್ಯದಲ್ಲೂ ಆಲ್ ರೌಂಡರ್ ಆಗಿರುವ ವಿನಾಯಕನ್ ಮಲಯಾಳಂನ ಕಮ್ಮಟ್ಟಿಪ್ಪಡಂ ಚಿತ್ರಕ್ಕಾಗಿ ರಾಜ್ಯಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಜೈಲರ್ ಚಿತ್ರದ ಯಶಸ್ಸಿನ ನಂತರ ವಿನಾಯಕನ್‌ಗೆ ಸಾಕಷ್ಟು ಸಿನಿಮಾ ಅವಕಾಶಗಳು ಬರಲಾರಂಭಿಸಿವೆ. ಇದರ ಬೆನ್ನಲ್ಲೆ ನಟನ ಮೇಲೆ ಪ್ರಕರಣ ದಾಖಲಾಗಿದ್ದು, ಅವರ ಅಭಿಮಾನಿಗಳಿಗೆ ನೋವುಂಟು ಮಾಡಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News