Jailer: ಆರಂಭದಲ್ಲಿ ಜೈಲರ್ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದರಂತೆ ಸೂಪರ್ ಸ್ಟಾರ್.. ಕಾರಣ ಏನು ಗೊತ್ತಾ?

Rajanikath: ನಟ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಾಕ್ಸಾಫೀಸ್‌ನ ದಾಖಲೆಗಳನ್ನು ಧೂಳಿಪಟ ಮಾಡಿದೆ. ಸದ್ಯ ಈ ಸಿನಿಮಾದ ಬಗ್ಗೆ ಮತ್ತೊಂದು ಬಿಸಿ ಬಿಸಿ ಸುದ್ದಿ ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ.   

Written by - Savita M B | Last Updated : Sep 22, 2023, 04:59 PM IST
  • ನಟ ರಜನಿಕಾಂತ್ ಅವರ ಬಹುನಿರೀಕ್ಷಿತ ಜೈಲರ್‌ ಸಿನಿಮಾ ಬಿಡುಗಡೆಯಾಗಿ ಸಖತ್‌ ಸೌಂಡ್‌ ಮಾಡಿತ್ತು.
  • ವಿಭಿನ್ನ ಪಾತ್ರವರ್ಗದಿಂದ ಅಭಿಮಾನಿಗಳ ಗಮನ ಸೆಳೆದ ಸಿನಿಮಾ
  • ರಜನಿಕಾಂತ್‌ ಈ ಜೈಲರ್‌ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದರು ಎನ್ನುವ ಸುದ್ದಿ ಹರಿದಾಡುತ್ತಿದೆ
Jailer: ಆರಂಭದಲ್ಲಿ ಜೈಲರ್ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದರಂತೆ ಸೂಪರ್ ಸ್ಟಾರ್.. ಕಾರಣ ಏನು ಗೊತ್ತಾ? title=

Jailer: ನಟ ರಜನಿಕಾಂತ್ ಅವರ ಬಹುನಿರೀಕ್ಷಿತ ಜೈಲರ್‌ ಸಿನಿಮಾ ಬಿಡುಗಡೆಯಾಗಿ ಸಖತ್‌ ಸೌಂಡ್‌ ಮಾಡಿತ್ತು. ವಿಭಿನ್ನ ಪಾತ್ರವರ್ಗದಿಂದ ಅಭಿಮಾನಿಗಳ ಗಮನ ಸೆಳೆದ ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್, ತಮನ್ನಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 

ನಟ ರಜನಿಕಾಂತ್ ಜೈಲರ್‌ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಈ ಚಿತ್ರ ವಿಮರ್ಶಕರಿಂದ ಅತ್ಯುತ್ತಮ ವಿಮರ್ಶೆಗಳನ್ನು ಪಡೆಯುತ್ತಾ ಭರ್ಜರಿ ಕಲೆಕ್ಷನ್‌ನ್ನು ಸಹ ಮಾಡಿತ್ತು. ಹೀಗೆ ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡ ಜೈಲರ್‌ ಸಿನಿಮಾ ಒಟ್ಟು 700 ಕೋಟಿ ರೂಗಿಂತ ಹೆಚ್ಚು ಕಲೆಕ್ಷನ್‌ ಮಾಡಿ ಗೆದ್ದು ಬೀಗಿದೆ. 

ನೆಲ್ಸನ್ ದಿಲೀಪ್‌ಕುಮಾರ್ ಚಿತ್ರಕಥೆ ಬರೆದು ಅಭಿಮಾನಿಗಳನ್ನು ಸೆಳೆದ ಈ ಸಿನಿಮಾದಲ್ಲಿ ಕನ್ನಡದ ಹ್ಯಾಟ್ರಿಕ್‌ ಹಿರೋ ಶಿವರಾಜ್‌ ಕುಮಾರ್‌ ನಟಿಸಿದ್ದರು. ಇವರ ಪಾತ್ರಕ್ಕೆ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಸದ್ಯ ರಜನಿಕಾಂತ್‌ ಈ ಜೈಲರ್‌ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದರು ಎನ್ನುವ ಚರ್ಚೆಯೊಂದು ಶುರುವಾಗಿದೆ. ಹಾಗಾದ್ರೆ ಇದಕ್ಕೆ ಕಾರಣವೇಣಿರಬಹುದು ಅಂತೀರಾ ಮುಂದೆ ಓದಿ...

ಇದನ್ನೂ ಓದಿ-ಜವಾನ್‌ನಲ್ಲಿ ದೀಪಿಕಾ ಹೈಲೈಟ್‌.. ಅಟ್ಲಿ ಜೊತೆ ನಯನತಾರಾ ಅಸಮಾಧಾನ! ಇನ್ಮುಂದೆ ಹಿಂದಿ ಸಿನಿಮಾ ಮಾಡಲ್ವಾ ಲೇಡಿ ಸೂಪರ್‌ಸ್ಟಾರ್‌?

ಈ ಹಿಂದೆಯೇ ನೆಲ್ಸನ್ ತೆಲುಗಿನ ಸ್ಟಾರ್ ನಟ ಚಿರಂಜೀವಿ ಅವರಿಗಾಗಿಯೇ ಈ ಚಿತ್ರದ ಕಥೆಯನ್ನು ತಯಾರಿಸಿದ್ದರು ಎಂದು ಈಗ ವರದಿಯಾಗಿದ್ದು, ನಿರ್ದೇಶಕ ಈ ಚಿತ್ರದ ಕಥೆಯನ್ನು ಚಿರಂಜೀವಿ ಅವರಿಗೆ ಹೇಳಿದಾಗ, ಕಥೆ ಕೇಳಿದ ಚಿರಂಜೀವಿ, ಚಿತ್ರದಲ್ಲಿ ಹಾಡುಗಳಿಲ್ಲ, ರೊಮ್ಯಾನ್ಸ್ ದೃಶ್ಯಗಳಿಲ್ಲ ಎಂದು ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದರಂತೆ. ಇದರ ಬೆನ್ನಲ್ಲೇ ನೆಲ್ಸನ್ ಈ ಕಥೆಯನ್ನು ರಜನಿ ಬಳಿ ಹೇಳಿದ್ದರಂತೆ ಆಗ ರಜನಿ ಸಹ ಚಿತ್ರದಲ್ಲಿ ನಟಿಸಲು ಹಿಂಜರಿದಿದ್ದರೂ ಎಂದು ಹೇಳಾಗುತ್ತಿದೆ. 

ಇನ್ನು ಈ ಜೈಲರ್‌ ಸಿನಿಮಾ ಸದ್ಯ ಸೂಪರ್ ಹಿಟ್ ಆಗಿದದ್ದು, 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗಿದೆ. ಈ ಚಿತ್ರದ ಗೆಲುವಿಗೆ ಕಾರಣರಾದ ಎಲ್ಲರಿಗೂ ಸನ್ ಪಿಕ್ಚರ್ಸ್​​ ಮಾಲೀಕ ಕಲಾನಿಧಿ ಮಾರನ್ ಅವರು ಚಿತ್ರದ ಪ್ರತಿಯೊಬ್ಬ ಕಲಾವಿದರಿಗೂ ಉಡುಗೊರೆ ನೀಡಿ ಚಿತ್ರದ ಯಶಸ್ಸನ್ನು ಸಂಭ್ರಮಿಸಿದ್ದಾರೆ. 

ಇದನ್ನೂ ಓದಿ-Review : ನೆನ್ನೆಯಷ್ಟೇ ತೆರೆಕಂಡ ʼಜಾನೇ ಜಾನ್‌ʼ ಸಿನಿಮಾ ಹೇಗಿದೆ, ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News