/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ:ಸುಶಾಂತ್ ಸಿಂಗ್ ರಾಜಪೂತ್ ಅವರ ಆತ್ಮಹತ್ಯೆಯ ಬಳಿಕ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿರುವ ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಹೆಡ್ಲೈನ್ ಸೃಷ್ಟಿಸುತ್ತಲೇ ಇದ್ದಾಳೆ. ಸುಶಾಂತ್ ಸಾವಿನ ಬಳಿಕ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಕಂಗನಾ ರಣಾವತ್ ಚಿತ್ರರಂಗದ ಖ್ಯಾತ ಮುಖಗಳನ್ನು ಗುರಿಯಾಗಿಸಿದ್ದರು.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಕಂಗನಾ ಅವರ ವೃತ್ತಿಜೀವನದಲ್ಲಿಯೂ ಕೂಡ ಇಂತಹ ಒತ್ತಡದ ಪರಿಸ್ಥಿತಿಗಳು ಎದುರಾಗಿದ್ದವು ಎಂದು ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಕಂಗನಾ, 'ಜಾವೇದ್ ಅಖ್ತರ್ ಅವರು ತಮ್ಮನ್ನು ಒಮ್ಮೆ ತಮ್ಮ ಮನೆಗೆ ಕರೆಯಿಸಿ ರಾಕೇಶ್ ರೋಶನ್ ಹಾಗೂ ಅವರ ಕುಟುಂಬ ಸದಸ್ಯರು ದೊಡ್ಡ ವ್ಯಕ್ತಿಗಳಾಗಿದ್ದಾರೆ. ನೀನು ಒಂದು ವೇಳೆ ಅವರ ಕ್ಷಮೆಯಾಚಿಸದೆ ಹೋದಲ್ಲಿ ನೀನು ಎಲ್ಲಿಯೂ ಉಳಿಯುವುದಿಲ್ಲ. ಅವರು ನಿನ್ನನ್ನು ಜೈಲಿಗೆ ಕಳುಹಿಸಬಹುದು ಹಾಗೂ ಇವೆಲ್ಲವೂಗಳ ಬಳಿಕ ನಿನ್ನ ಮಳಿ ಸುಸೈಡ್ ಬಿಟ್ಟರೆ ಬೇರೆ ದಾರಿಯೇ ಇರುವುದಿಲ್ಲ" ಎಂದಿದ್ದರು. ಅಷ್ಟೇ ಅಲ್ಲ "ಹೃತಿಕ್ ಮುಂದೆ ಕ್ಷಮೆಯಾಚಿಸದೆ ಹೋದರೆ, ನಾನು ಸುಸೈಡ್ ಮಾಡಿಕೊಳ್ಳಲಿದ್ದೇನೆ ಎಂದು ಅವರಿಗೆ ಯಾಕೆ ಅನಿಸುತ್ತಿತ್ತು?" ಎಂದೂ ಕೂಡ ಪ್ರಶ್ನಿಸಿದ್ದಾರೆ.

ಆದರೆ, ಇದೆ ವೇಳೆ ಈ ಎಲ್ಲ ಜನರು ಸುಶಾಂತ್ ಗೆ ಕರೆ ಮಾಡಿ ಅವರ ಮೈಂಡ್ ನಲ್ಲಿ ಈ ರೀತಿಯ ವಿಚಾರಗಳನ್ನು ಅವರಿಗೂ ಕೂಡ ಹೇಳಿದ್ದಾರೆ ಅಥವಾ ಇಲವೋ ಎಂಬುದು ತಮಗೆ ತಿಳಿದಿಲ್ಲ ಎಂದಿದ್ದಾರೆ. ಕಂಗನಾ ಹೇಳುವ ಹಾಗೆ, "ಸುಶಾಂತ್ ಜೊತೆಗೂ ಕೂಡ ಕರೆ ಮಾಡಿ ಅವರ ಮೈಂಡ್ ನಲ್ಲಿಯೂ ಕೂಡ ಈ ರೀತಿಯ (ಅಂದರೆ ಸುಸೈಡ್) ವಿಚಾರಗಳನ್ನು ಹೇಳುತ್ತಿದ್ದರೋ ಅಥವಾ ಇಲ್ಲವು ನನಗೆ ತಿಳಿದಿಲ್ಲ. ಆದರೆ, ನಾನೂ ಕೂಡ ಸುಶಾಂತ್ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಹೀಗಾಗಿ ನನಗೂ ಕೂಡ ಇವೆಲ್ಲದರ ಅನುಭವವಿದೆ. ಸುಶಾಂತ್ ಹಲವು ಬಾರಿ ತನ್ನ ಇಂಟರ್ ವ್ಯೂ ವೇಳೆ ಉದ್ಯಮದಲ್ಲಿ ನೆಪೋಟಿಸಂ ಹಾಗೂ ಟ್ಯಾಲೆಂಟ್ ಜೊತೆಯಾಗಿ ಸಾಗಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದನ್ನು ನಾನು ಕಂಡಿದ್ದೇನೆ" ಎಂದು ಕಂಗನಾ ಹೇಳಿದ್ದಾರೆ.

ಆದಿತ್ಯ ಚೋಪ್ರಾ ಜೊತೆಗೂ ಕೂಡ ಸುಶಾಂತ್ ಭಿನ್ನಾಭಿಪ್ರಾಯ ಹೊಂದಿರುವುದು ತಮಗೂ ತಿಳಿದಿದೆ ಎಂದಿರುವ ಕಂಗನಾ, ಸುಲ್ತಾನ್ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದ ನನ್ನೊಂದಿಗೆ ಎಂದಿಗೂ ಕೂಡ ಕೆಲಸ ಮಾಡುವುದಿಲ್ಲ ಎಂದು ಧಮ್ಕಿ ಹಾಕಿದ್ದರು ಎಂದಿದ್ದಾಳೆ. ಚಿತ್ರೋದ್ಯೋಮ ನಿರಂತರವಾಗಿ ನನ್ನ ವಿರುದ್ಧ ನಿಂತಿರುವಂತೆ ಕಾಣುತ್ತದೆ" ಎಂದು ಕಂಗನಾ ಆರೋಪಿಸಿದ್ದಾರೆ.

Section: 
English Title: 
Kangana Ranaut I was told eventually I will commit suicide
News Source: 
Home Title: 

'ನಿನ್ನ ಬಳಿ ಆತ್ಮಹತ್ಯೆ ಬಿಟ್ಟು ಬೇರೆ ವಿಕಲ್ಪ ಉಳಿಯುವುದಿಲ್ಲ ಎಂದಿದ್ದರು Javed Akhtar'

'ನಿನ್ನ ಬಳಿ ಆತ್ಮಹತ್ಯೆ ಬಿಟ್ಟು ಬೇರೆ ವಿಕಲ್ಪ ಉಳಿಯುವುದಿಲ್ಲ ಎಂದಿದ್ದರು Javed Akhtar'
Yes
Is Blog?: 
No
Tags: 
Facebook Instant Article: 
Yes
Mobile Title: 
'ನಿನ್ನ ಬಳಿ ಆತ್ಮಹತ್ಯೆ ಬಿಟ್ಟು ಬೇರೆ ವಿಕಲ್ಪ ಉಳಿಯುವುದಿಲ್ಲ ಎಂದಿದ್ದರು Javed Akhtar'
Publish Later: 
No
Publish At: 
Friday, June 19, 2020 - 13:12
Created By: 
Nitin Tabib
Updated By: 
Nitin Tabib
Published By: 
Nitin Tabib