ಸಾಕಿ ಸಲಹಬೇಕಿದ್ದ ನನ್ನ ಸ್ವಂತ ಅಪ್ಪನೇ..! ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ವಿಚಾರ ಬೆನ್ನಲ್ಲೆ ನಟಿ ಖುಷ್ಬೂ ಶಾಕಿಂಗ್‌ ಹೇಳಿಕೆ

Kushbu Sundar : ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ. ಮಾಲಿವುಡ್‌ ನಟಿಯರ ಲೈಂಗಿಕ ಕಿರುಕುಳ ಮತ್ತು ಶೋಷಣೆ ಸುದ್ದಿ ಭಾರತೀಯ ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿಸುತ್ತಿದೆ.  ಈಗಾಗಲೇ ಹಲವಾರು ಸ್ಟಾರ್ ನಟರ ಮೇಲೆ ಈ ಆರೋಪ ಕೇಳಿ ಬಂದಿದೆ. ಪೊಲೀಸ್‌ ಪ್ರಕರಣಗಳೂ ದಾಖಲಾಗುತ್ತಿವೆ.. ಇದೀಗ ನಟಿ ಖುಷ್ಬೂ ಹೇಳಿಕೆಯೊಂದು ಸಂಚಲನ ಸೃಷ್ಟಿಸುತ್ತಿದೆ..

Written by - Krishna N K | Last Updated : Aug 28, 2024, 05:14 PM IST
    • ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ.
    • ಈಗಾಗಲೇ ಹಲವಾರು ಸ್ಟಾರ್ ನಟರ ಮೇಲೆ ಈ ಆರೋಪ ಕೇಳಿ ಬಂದಿದೆ
    • ಖ್ಯಾತ ಹಿರಿಯ ನಟಿ ಹಾಗೂ ರಾಜಕಾರಣಿಯೊಬ್ಬರು ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸಾಕಿ ಸಲಹಬೇಕಿದ್ದ ನನ್ನ ಸ್ವಂತ ಅಪ್ಪನೇ..! ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ವಿಚಾರ ಬೆನ್ನಲ್ಲೆ ನಟಿ ಖುಷ್ಬೂ ಶಾಕಿಂಗ್‌ ಹೇಳಿಕೆ title=

Justice Hema Committee : ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ. ಈಗಾಗಲೇ ಹಲವಾರು ಸ್ಟಾರ್ ನಟರ ಮೇಲೆ ಈ ಆರೋಪ ಕೇಳಿ ಬಂದಿದೆ. ಪೊಲೀಸ್‌ ಪ್ರಕರಣಗಳೂ ದಾಖಲಾಗುತ್ತಿವೆ. ಮೋಹನ್ ಲಾಲ್‌ ಅವರಂತಹ ಸ್ಟಾರ್ ಹೀರೋಗಳು ಕೂಡ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಮತ್ತೊಂದೆಡೆ, ಹೇಮಾ ಸಮಿತಿ ವರದಿಗೆ ವಿವಿಧ ಕ್ಷೇತ್ರಗಳ ಗಣ್ಯರು ಪ್ರತಿಕ್ರಿಯಿಸುತ್ತಿದ್ದಾರೆ. 

ಇತ್ತೀಚೆಗೆ ಖ್ಯಾತ ಹಿರಿಯ ನಟಿ ಹಾಗೂ ರಾಜಕಾರಣಿಯೊಬ್ಬರು ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್‌ನಲ್ಲಿ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯನ್ನು ಶ್ಲಾಘಿಸಿ.. ʼಶೋಷಣೆ, ಲೈಂಗಿಕ ಕಿರುಕುಳ, ಲಾಭಕ್ಕಾಗಿ ಹೆಣ್ಣುಮಕ್ಕಳ ಅಪಹರಣ ಎಲ್ಲೆಲ್ಲೂ ಇದೆ. ಮಹಿಳೆ ಇದನ್ನು ಏಕಾಂಗಿಯಾಗಿ ಎದುರಿಸಬೇಕಾಗುತ್ತದೆ. ಸಂತ್ರಸ್ತರಿಗೆ ನಮ್ಮ ಬೆಂಬಲ ತುಂಬಾ ಬೇಕು. ಅವರ ನೋವನ್ನು ಕೇಳಬೇಕು. ಅವರಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ಸಮಸ್ಯೆ ಎದುರಾದಾಗ ಏಕೆ ಮಾತನಾಡಲಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಅದನ್ನು ಹೊರಗೆ ಬಂದು ಹೇಳುವ ಧೈರ್ಯ ಎಲ್ಲರಿಗೂ ಇರುವುದಿಲ್ಲ.

ಇದನ್ನೂ ಓದಿ:ಈ ಬಾರಿ ಬಿಗ್ ಬಾಸ್ ಪ್ರವೇಶಿಸಲಿದ್ದಾಳೆ ಬೋಲ್ಡ್ ʼಬೇಬಿʼ..! ಟಿವಿ ರಿಮೋರ್ಟ್‌ಗಾಗಿ ಜಗಳ ಗ್ಯಾರಂಟಿ..

'ನಿಮ್ಮ ತಂದೆಯ ದೌರ್ಜನ್ಯದ ಬಗ್ಗೆ ಮಾತನಾಡಲು ನೀವು ಯಾಕೆ ಇಷ್ಟು ದಿನ ತೆಗೆದುಕೊಂಡಿದ್ದೀರಿ? ಎಂದು ಈ ಹಿಂದೆ ಹಲವರು ನನ್ನನ್ನು ಕೇಳಿದ್ದರು. ಇದು ನಿಜ.. ನಾನು ಮೊದಲೇ ಮಾತನಾಡಬೇಕಿತ್ತು. ನನ್ನನ್ನು ರಕ್ಷಿಸಬೇಕಾದ ವ್ಯಕ್ತಿಯೇ ನನಗೆ ಕಿರುಕುಳ ನೀಡಿದ್ದರೂ ಸಹ ಅಂದು ನಾನು ಸುಮ್ಮನಿದ್ದೆ..

ಮಹಿಳೆಯರಿಗೆ ಅವರ ಕುಟುಂಬದಿಂದ ಸರಿಯಾದ ಬೆಂಬಲವಿಲ್ಲ ಎಂದು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಸಣ್ಣ ಹಳ್ಳಿಗಳ ಅನೇಕ ಹುಡುಗಿಯರು ಸಿನಿರಂಗಕ್ಕೆ ಅನೇಕ ಭರವಸೆಗಳೊಂದಿಗೆ ಬರುತ್ತಾರೆ. ಆದರೆ ಕೆಲ ಕಿಡಿಗೇಡಿಗಳು ಅವರ ಆಸೆಯನ್ನು ಹುಸಿಗೊಳಿಸುತ್ತಿದ್ದಾರೆ. ಸಂತ್ರಸ್ತ ಮಹಿಳೆಯರ ಪರ ನಿಲ್ಲಲು ನಾನು ಪುರುಷರಿಗೆ ಹೇಳುವುದೊಂದೇ. 

ಇದನ್ನೂ ಓದಿ:ದರ್ಶನ್ ಅಭಿಮಾನಿಗಳಿಗೆ ಮತ್ತೆ‌ ನಿರಾಸೆ: ಸೆಪ್ಟೆಂಬರ್ 9ರತನಕ ಕಿಲ್ಲಿಂಗ್ ಸ್ಟಾರ್ ಗೆ ಜೈಲೇ ಗತಿ

ಮಹಿಳೆಯರ ವಿರುದ್ಧದ ಈ ಘಟನೆಗಳಿಗೆ ನೀವೂ ಪ್ರತಿಕ್ರಿಯಿಸಬೇಕು. ಅವರಿಗೆ ನಿಮ್ಮ ಪ್ರೀತಿ ಮತ್ತು ಬೆಂಬಲ ನೀಡಿ. ನೆನಪಿಡಿ, ನಾವು ಒಟ್ಟಿಗೆ ಮಾತ್ರ ಅವರ ಗಾಯಗಳನ್ನು ಗುಣಪಡಿಸಬಹುದು.  ಜಸ್ಟಿಸ್ ಹೇಮಾ ಸಮಿತಿಯ ವರದಿ ನಮ್ಮೆಲ್ಲರಲ್ಲೂ ಬದಲಾವಣೆ ತರಬೇಕುʼʼ ಎಂದು ಖುಷ್ಬೂ ಹೇಳಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News