“ಗರಡಿ“ ಮನೆಗೆ ಹೋಗಲು ನೀವು ರೆಡಿನಾ. .. ನಾಳೆ ಕರ್ನಾಟಕದಲ್ಲಿ ”ಗರಡಿ“ಯದ್ದೇ ಹವಾ

ಈ  ಚಿತ್ರದ ಟ್ರೇಲರ್ ನೋಡಿದ್ರೆ, ಗರಡಿ 2023ರ ಹಿಟ್ ಸಿನಿಮಾಗಳ ಸಾಲಿಗೆ ಸೇರಿಕೊಳ್ಳುವ ಸೂಚನೆ ಕೊಟ್ಟಿದೆ. ಹಳ್ಳಿಗಳಲ್ಲಿ ಕುಸ್ತಿ ಅಖಾಡ ಹಾಗೂ ಕುಸ್ತಿ ಪಟುಗಳ ತಾಕತ್ ಏನು ಎಂಬುದರ ಕಥೆಯನ್ನು ಈ ಚಿತ್ರ ಒಳಗೊಂಡಿದೆ. 

Written by - YASHODHA POOJARI | Last Updated : Nov 9, 2023, 10:01 AM IST
  • ಈ ಚಿತ್ರದ ಟ್ರೇಲರ್ ನೋಡಿದ್ರೆ, ಗರಡಿ 2023ರ ಹಿಟ್ ಸಿನಿಮಾಗಳ ಸಾಲಿಗೆ ಸೇರಿಕೊಳ್ಳುವ ಸೂಚನೆ ಕೊಟ್ಟಿದೆ.
  • ಹಳ್ಳಿಗಳಲ್ಲಿ ಕುಸ್ತಿ ಅಖಾಡ ಹಾಗೂ ಕುಸ್ತಿ ಪಟುಗಳ ತಾಕತ್ ಏನು ಎಂಬುದರ ಕಥೆಯನ್ನು ಈ ಚಿತ್ರ ಒಳಗೊಂಡಿದೆ.
“ಗರಡಿ“ ಮನೆಗೆ ಹೋಗಲು ನೀವು ರೆಡಿನಾ. .. ನಾಳೆ ಕರ್ನಾಟಕದಲ್ಲಿ ”ಗರಡಿ“ಯದ್ದೇ ಹವಾ  title=

ಯೋಗರಾಜ್ ಭಟ್ರ ಸಿನಿಮಾ ಅಂದ್ರೆ ಅಲ್ಲಿ ಒಂದು ಥ್ರಿಲ್ ಅಂಡ್ ಮ್ಯಾಜಿಕ್ ಇದ್ದೇ ಇರುತ್ತೆ. ಬಹುನಿರೀಕ್ಷೆಯ ಗರಡಿ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಸೆಯಂತೆ ಯಶಸ್ಸು ಸೂರ್ಯ ಈ ಸಿನಿಮಾದ ಮೂಲಕ ಯಶಸ್ವಿ ನಾಯಕನಾಗೋ ಎಲ್ಲ ಲಕ್ಷಣ ಕಂಡುಬರುತ್ತಿದೆ.  ರಿಲೀಸ್ ಆಗಿರೋ ಅಷ್ಟೂ ಹಾಡುಗಳು  ಮತ್ತು ಟ್ರೀಲರ್ ಧೂಳ್ ಎಬ್ಬಿಸಿದೆ. 

ಈ  ಚಿತ್ರದ ಟ್ರೇಲರ್ ನೋಡಿದ್ರೆ, ಗರಡಿ 2023ರ ಹಿಟ್ ಸಿನಿಮಾಗಳ ಸಾಲಿಗೆ ಸೇರಿಕೊಳ್ಳುವ ಸೂಚನೆ ಕೊಟ್ಟಿದೆ. ಹಳ್ಳಿಗಳಲ್ಲಿ ಕುಸ್ತಿ ಅಖಾಡ ಹಾಗೂ ಕುಸ್ತಿ ಪಟುಗಳ ತಾಕತ್ ಏನು ಎಂಬುದರ ಕಥೆಯನ್ನು ಈ ಚಿತ್ರ ಒಳಗೊಂಡಿದೆ. 

ಇದನ್ನೂ ಓದಿ- ನಾವಿಬ್ಬರೂ ಬಹಳ ವರ್ಷದಿಂದ ......ಈ ನಟನ ಜೊತೆಗಿನ ಸಂಬಂಧದ ಬಗ್ಗೆ ಸತ್ಯ ಬಾಯಿ ಬಿಟ್ಟ ಅನನ್ಯ ಪಾಂಡೆ !

ಕುಸ್ತಿ ಉಸ್ತಾದ್ ಆಗಿ ಬಿ.ಸಿ ಪಾಟೀಲ್, ಹಳ್ಳಿ ಕುಸ್ತಿ ಪಟುವಾಗಿ ಯಶಸ್ ಸೂರ್ಯ ನಟಿಸಿದ್ದಾರೆ. ಈ ಚಿತ್ರದ ಬಹುಮುಖ್ಯ ಪಾತ್ರವೊಂದರಲ್ಲಿ ದರ್ಶನ್ ಎಂಟ್ರಿ ಕೊಟ್ಟಿದ್ದು, ಇದು ಚಿತ್ರದ ಹೈಲೆಟ್ ಆಗಲಿದೆ. ಇತ್ತೀಚೆಗೆ ರಾಣೆಬೆನ್ನೂರಿನಲ್ಲಿ ಅದ್ಧೂರಿಯಾಗಿ ಟ್ರೇಲರ್ ಅನಾವರಣಗೊಳಿಸಲಾಗಿತ್ತು. ಟ್ರೇಲರ್ ಬಿಡುಗಡೆಯ ಸುಂದರ ಕ್ಷಣಗಳ ವಿಡಿಯೋವನ್ನು ಸಹ ಚಿತ್ರತಂಡ ರಿವೀಲ್ ಮಾಡಿ ಗಮನ ಸೆಳೆದಿದೆ.

ಗರಡಿ ಪೈಲ್ವಾನ್ ಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಮಾಡಿರುವ ಸಿನಿಮಾ. ಈ ಚಿತ್ರದಲ್ಲಿ ನಟ‌ ಯಶಸ್ ಸೂರ್ಯ ಹಾಗೂ ಸೋನಾಲ್ ಮಾಂಟೆರೊ ಮತ್ತು ಬಿ.ಸಿ ಪಾಟೀಲ್ ಅಲ್ಲದೇ, ರವಿಶಂಕರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ನಯನ, ತ್ರಿವೇಣಿ, ರವಿಚೇತನ್, ತೇಜಸ್ವಿನಿ ಪ್ರಕಾಶ್, ನಯನ ಮುಂತಾದವರು ನಟಿಸಿದ್ದಾರೆ. ನಿಶ್ವಿಕಾ ನಾಯ್ಡು ಕೂಡ ಸ್ಪೆಷಲ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ- ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಗಾಯಕ ವಾಸುಕಿ ವೈಭವ್! ಮದುವೆ ಆಗ್ತಿರೋ ಹುಡುಗಿ ಯಾರು ಗೊತ್ತಾ?

ಸೌಮ್ಯ ಫಿಲಂಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿದ್ದು, ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕಿ. ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸುಮಧುರ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಇದೆ. ಚಿತ್ರ ನವೆಂಬರ್ 10 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News