ಶಾರೂಕ್ ಖಾನ್-ಅಜಯ್ ದೇವಗನ್‌ಗೆ 5 ರೂ. ಮನಿ ಆರ್ಡರ್ ಕಳುಹಿಸಿದ ವಿದ್ಯಾರ್ಥಿನಿ..!

ಮಧ್ಯಪ್ರದೇಶದ ಖರಗೋನ್ ಜಿಲ್ಲೆಯ ಬಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಧಡ್ಕನ್ ಜೈನ್ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಸ್ಟಾರ್​ ನಟರಿಗೆ ತರಾಟೆಗೆ ತೆಗೆದುಕೊಂಡಿದ್ದಾಳೆ.

Written by - Puttaraj K Alur | Last Updated : May 31, 2022, 02:55 PM IST
  • ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಶಾರೂಕ್ ಖಾನ್ ಮತ್ತು ಅಜಯ್ ದೇವಗನ್
  • ಬಾಲಿವುಡ್ ಸೂಪರ್ ಸ್ಟಾರ್‍ಗಳಿಗೆ ತರಾಟೆ ತೆಗೆದುಕೊಂಡ ಮಧ್ಯಪ್ರದೇಶದ ವಿದ್ಯಾರ್ಥಿನಿ
  • ಇಬ್ಬರು ನಟರಿಗೆ ತಲಾ 5 ರೂ. ಮನಿ ಆರ್ಡರ್ ಮಾಡಿ ಪಾನ್ ಮಸಾಲ ಪ್ಯಾಕೆಟ್ ನೀಡುವಂತೆ ಮನವಿ
ಶಾರೂಕ್ ಖಾನ್-ಅಜಯ್ ದೇವಗನ್‌ಗೆ 5 ರೂ. ಮನಿ ಆರ್ಡರ್ ಕಳುಹಿಸಿದ ವಿದ್ಯಾರ್ಥಿನಿ..!   title=
ನಟರಿಗೆ 5 ರೂ. ಮನಿ ಆರ್ಡರ್ ಮಾಡಿದ ವಿದ್ಯಾರ್ಥಿನಿ!

ಭೋಪಾಲ್​​: ಪಾನ್​ ಮಸಾಲ ತಂಬಾಕು ಜಾಹಿರಾತಿನಲ್ಲಿ ಕಾಣಿಸಿಕೊಂಡು ಸಖತ್ ಸುದ್ದಿಯಾಗಿದ್ದ ಬೆನ್ನಲ್ಲೇ ಖ್ಯಾತ ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಈ​ ಜಾಹಿರಾತಿನಿಂದ ಹಿಂದೆ ಸರಿದಿದ್ದರು. ಆದರೆ ಶಾರೂಕ್ ಖಾನ್ ಮತ್ತು ಅಜಯ್ ದೇವಗನ್ ತಮಗೆ ಹಣವೇ ಮುಖ್ಯವೆಂದಿದ್ದರು.

ಶಾರೂಕ್ ಖಾನ್ ಮತ್ತು ಅಜಯ್ ದೇವಗನ್ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕೋಟ್ಯಂತರ ಫಾಲೋವರ್ಸ್ ಹೊಂದಿರುವ ನಟರೇ ಹೀಗೆ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಹೇಗೆ..? ಇದು ಯುವ ಸಮುದಾಯಕ್ಕೆ ತಪ್ಪು ದಾರಿ ತೋರಿಸಿದಂತಾಗುತ್ತದಲ್ಲವೆ..? ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಆದರೆ, ಇದಕ್ಕೆ ತಲೆಕೆಡಿಸಿಕೊಳ್ಳದೇ ತಮಗೆ ಹಣವೇ ಮುಖ್ಯವೆಂದು ಶಾರೂಕ್ ಮತ್ತು ದೇವಗನ್ ಜಾಹೀರಾತಿನಲ್ಲಿ ನಟಿಸುವುದನ್ನು ಮುಂದುವರೆಸಿದ್ದಾರೆ. ಇದೀಗ ವಿದ್ಯಾರ್ಥಿನಿಯೊಬ್ಬಳು ಈ ಇಬ್ಬರು ನಟರಿಗೆ ಛೀಮಾರಿ ಹಾಕಿದ್ದಾಳೆ.

ಇದನ್ನೂ ಓದಿ: ವಿಶ್ವ ಸುಂದರಿ ಐಶ್ವರ್ಯಾರನ್ನ ಮೆಚ್ಚಿಸಲು ನಕಲಿ ಉಂಗುರ ತಂದ ಅಭಿಷೇಕ್‌ ಬಚ್ಚನ್‌!

ಹೌದು, ಮಧ್ಯಪ್ರದೇಶದ ಖರಗೋನ್ ಜಿಲ್ಲೆಯ ಬಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಧಡ್ಕನ್ ಜೈನ್ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಸ್ಟಾರ್​ ನಟರಿಗೆ ತರಾಟೆ ತೆಗೆದುಕೊಂಡಿದ್ದಾಳೆ. ತಂಬಾಕು ಜಾಹೀರಾತಿನಲ್ಲಿ ಕಾಣಿಸಿಕೊಂಡು ಯುವ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಈ ಯುವತಿ ಆರೋಪಿಸಿದ್ದಾಳೆ. ಇಬ್ಬರ ಮೇಲೂ ಕೋಪಿಸಿಕೊಂಡಿರುವ ಯುವತಿ ನಟರಿಬ್ಬರ ಮನೆಯ ವಿಳಾಸಕ್ಕೆ ತಲಾ 5 ರೂ. ಮನಿ ಆರ್ಡರ್​ ಮಾಡಿದ್ದು, ತನೆಗೆ ಪಾನ್ ಮಸಾಲ ಪ್ಯಾಕೆಟ್ ಕಳುಹಿಸುವಂತೆ ಮನವಿ ಮಾಡಿದ್ದಾಳೆ. ಇದರಿಂದ ಇಬ್ಬರು ಬಾಲಿವುಡ್ ಸೂಪರ್ ಸ್ಟಾರ್‍ಗಳು ಮುಜುಗರಕ್ಕೊಳಗಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಯುವತಿ, ‘ಶಾರೂಕ್​ ಖಾನ್​ ಮತ್ತು ಅಜಯ್​ ದೇವಗನ್‍ರನ್ನು​ ನಾನು ಸಹೋದರನಂತೆ ಭಾವಿಸುತ್ತೇನೆ. ಹೀಗಾಗಿ ಇಬ್ಬರು ನನ್ನ ಮನವಿಯನ್ನು ಆಲಿಸಬೇಕು. ದಯವಿಟ್ಟು ಪಾನ್​ ಮಸಾಲ ಜಾಹೀರಾತನ್ನು ಹಿಂಪಡೆದು ಯುವಜನತೆಯನ್ನು ರಕ್ಷಿಸಬೇಕಾಗಿದೆ' ಎಂದು ಆಕೆ ನಟರಿಬ್ಬರಲ್ಲಿ ಮನವಿ ಮಾಡಿಕೊಂಡಿದ್ದಾಳೆ.   

ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ ಕೇಸ್: ಸಮೀರ್ ವಾಂಖೆಡೆ ವರ್ಗಾವಣೆ ಯಾಕೆ ಗೊತ್ತಾ?

‘ನಾನು ನಿಮ್ಮಿಬ್ಬರ ಅಭಿಮಾನಿಯಾಗಿದ್ದೇನೆ. ನೀವಿಬ್ಬರೂ ನಟಿಸಿರುವ ಜಾಹೀರಾತು ನೋಡಿ ನಾನೂ ಸಹ ಪಾನ್ ಮಸಾಲ ತಿನ್ನಲು ಆರಂಭಿಸುತ್ತೇನೆ’ ಅಂತಾ ನಟರ ವಿರುದ್ಧ ಅಸಮಾಧಾನ ಹೊರಹಾಕಿದ್ದಾಳೆ. ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್ ನಟರು ಈಗಾಗಲೇ ಛೀಮಾರಿ ಹಾಕಿಸಿಕೊಂಡಿದ್ದಾರೆ. ಮುಂದೇನು ಮಾಡುತ್ತಾರೋ ಕಾದು ನೋಡಬೇಕಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News