ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಎರಡನೇ ಮದುವೆ..!?

Renu Desai marriage : ಪವರ್‌ ಸ್ಟಾರ್‌ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ತಮ್ಮ ಎರಡನೇ ಮದುವೆಯ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಎರಡನೆ ಮದುವೆ ರದ್ದು ಮಾಡಿದ್ದರೂ ಮದುವೆಯ ಯೋಚನೆ ಮಾತ್ರ ಹಾಗೆಯೇ ಇದೆ ಎಂದು ತಿಳಿದುಬಂದಿದೆ.

Written by - Krishna N K | Last Updated : Oct 18, 2023, 04:10 PM IST
  • ಪವರ್‌ ಸ್ಟಾರ್‌ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ
  • ರೇಣು ದೇಸಾಯಿ ತಮ್ಮ ಎರಡನೇ ಮದುವೆಯ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ
  • ಎರಡನೆ ಮದುವೆ ರದ್ದು ಮಾಡಿದ್ದರೂ ಮದುವೆಯ ಯೋಚನೆ ಮಾತ್ರ ಹಾಗೆಯೇ ಇದೆ
ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಎರಡನೇ ಮದುವೆ..!? title=

Pawan kalyan Renu Desai: ಟಾಲಿವುಡ್‌ ಸೂಪರ್‌ ಸ್ಟಾರ್‌ ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಜೊತೆಗಿನ ವಿಚ್ಛೇದನದ ನಂತರ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಇದೀಗ ನಟಿಯ ಎರಡನೇ ಮದುವೆ ವಿಚಾರ ಮುನ್ನೆಲೆಗೆ ಬಂದಿದ್ದು, ಈ ಕುರಿತು ಸ್ವತಃ ರೇಣು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಮಗ ಅಕಿರಾ ನಂದನ್ ಮತ್ತು ಮಗಳು ಆಧ್ಯಾ ಜೊತೆ ರೇಣು ಉತ್ತಮ ಜೀವನ ನಡೆಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ನಟಿ ಅದ್ಧೂರಿಯಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಮದುವೆ ರದ್ದಾಗಿತ್ತು. ಇತ್ತೀಚೆಗಷ್ಟೇ ರೇಣು ದೇಸಾಯಿ ಅವರು ಮದುವೆಯನ್ನು ಏಕೆ ರದ್ದುಗೊಳಿಸಬೇಕಾಯಿತು ಎಂದು ವಿಷಯವನ್ನು ಬಹಿರಂಗಪಡಿಸಿದ್ದಾರೆ.  

ಇದನ್ನೂ ಓದಿ: ಟೈಟಲ್ ರಿಲೀಸ್ ನಲ್ಲೇ ದಾಖಲೆ ಬರೆದ ಪ್ರಿಯಾಂಕಾ ʼಕ್ಯಾಪ್ಚರ್‌ʼ ಸಿನಿಮಾ..!

ಸದ್ಯ ರೇಣು ದೇಸಾಯಿ ಹಾಗೂ ಮಾಸ್ ಮಹಾರಾಜ ರವಿತೇಜ ಅಭಿನಯದ 'ಟೈಗರ್ ನಾಗೇಶ್ವರ ರಾವ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಇದೇ ತಿಂಗಳ 20 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಪ್ರಚಾರದ ಭಾಗವಾಗಿ ಸಾಲು ಸಾಲು ಸಂದರ್ಶನಗಳಲ್ಲಿ ರೇಣು ಭಾಗಿಯಾಗುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ಎರಡನೇ ಮದುವೆಯ ಬಗ್ಗೆ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 

ಪವನ್‌ ಕಲ್ಯಾಣ್‌ ಜೊತೆ ಡಿವೋರ್ಸ್‌ ಆದಾಗ ನನ್ನ ಮಕ್ಕಳು ಇನ್ನೂ ಚಿಕ್ಕವರು. ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಮರುಮದುವೆಯಾಗುವಂತೆ ಹೇಳಿದರು. ಆದರೆ, ಆರಂಭದಲ್ಲಿ ಅವರಿಗೆ ಮದುವೆಯಾಗುವ ಮನಸ್ಸಿರಲಿಲ್ಲ. ಸ್ವಲ್ಪ ಸಮಯದ ನಂತರ ಒಬ್ಬ ಒಡನಾಡಿ ಇದ್ದರೆ ಒಳ್ಳೆಯದು. ಅವರ ಮಾತಿನಂತೆ ನಾನು ಎರಡನೇ ಮದುವೆಗೆ ಯಸ್ ಎಂದೆ. ನಿಶ್ಚಿತಾರ್ಥವೂ ಆಗಿತ್ತು. ಆಗ ಮಗುವಿಗೆ 7 ವರ್ಷ. ನಾನು ಮದುವೆಯಾದರೆ, ನಾನು ಮಗುವಿಗೆ ಸಾಕಷ್ಟು ಸಮಯವನ್ನು ಕೊಡ್ತೀನಾ? ಅಥವಾ ಇಲ್ಲ ಅಂತ ಡೌಟ್‌ ಬಂತು. ಹೀಗಾಗಿ ಎರಡನೇ ಮದುವೆಯನ್ನು ರದ್ದುಪಡಿಸಿದೆ. ಅಲ್ಲದೆ, ಇನ್ನೆರಡು ಮೂರು ವರ್ಷದಲ್ಲಿ ಮಕ್ಕಳು ಸೆಟ್ಲ್ ಆಗ್ತಾರೆ. ನಂತರ ಮದುವೆ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ರೇಣು ದೇಸಾಯಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: 'ಗರಡಿ' ಸಿನಿಮಾದ ಮೂರನೇ ಹಾಡು ʼಬಡವನ ಹೃದಯʼ ರಿಲೀಸ್‌..!

ʼಟೈಗರ್ ನಾಗೇಶ್ವರ ರಾವ್ʼ ಮಾಸ್ ಮಹಾರಾಜ್ ರವಿತೇಜ ಅಭಿನಯದ ಪ್ಯಾನ್ ಇಂಡಿಯನ್ ಚಿತ್ರ. ಈ ಸಿನಿಮಾದ ಬಗ್ಗೆ ಈಗಾಗಲೇ ಭಾರೀ ನಿರೀಕ್ಷೆಗಳಿವೆ. ಅಕ್ಟೋಬರ್ 20 ರಂದು ಚಿತ್ರವು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ರೇಣು ದೇಸಾಯಿ ಈ ಚಿತ್ರದಲ್ಲಿ ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News