Prabhas dinner cost: ಪ್ರಭಾಸ್ 1 ದಿನದ ಊಟಕ್ಕೆ ಎಷ್ಟು ಲಕ್ಷ ಖರ್ಚು ಮಾಡ್ತಾರೆ ಗೊತ್ತಾ..!

Prabhas dinner cost price: ಸಿನಿಮಾದಲ್ಲಿನ ಆಕ್ಷನ್‌ ಸೀನ್‌ಗಳಲ್ಲಿ ಮಿಂಚುವ ಡಾರ್ಲಿಂಗ್‌ ಪ್ರಭಾಸ್‌ ಫಿಟ್ನೆಸ್‌ ಕಾಯ್ದುಕೊಳ್ಳುವಲ್ಲಿ ಮುಂದಿದ್ದಾರೆ. ಪ್ರಭಾಸ್‌ ಒಂದು ದಿನದ ಊಟಕ್ಕೆನೇ ಲಕ್ಷ ಲಕ್ಷ ಹಣ ಖರ್ಚು ಮಾಡ್ತಾರಂತೆ.

Written by - Chetana Devarmani | Last Updated : Dec 30, 2023, 12:51 PM IST
  • ಪ್ರಭಾಸ್‌ ಊಟಕ್ಕೆ ಎಷ್ಟು ಖರ್ಚು ಮಾಡ್ತಾರೆ?
  • ಡಾರ್ಲಿಂಗ್‌ ಪ್ರಭಾಸ್‌ ಫಿಟ್ನೆಸ್‌ ಸೀಕ್ರೇಟ್‌
  • ಪ್ರಭಾಸ್‌ ಕುರಿತು ಇಂಟರೆಸ್ಟಿಂಗ್‌ ವಿಚಾರ
Prabhas dinner cost: ಪ್ರಭಾಸ್ 1 ದಿನದ ಊಟಕ್ಕೆ ಎಷ್ಟು ಲಕ್ಷ ಖರ್ಚು ಮಾಡ್ತಾರೆ ಗೊತ್ತಾ..!  title=

Prabhas dinner cost price: ಸಲಾರ್‌ ಸಿನಿಮಾ ಸೂಪರ್‌ ಹಿಟ್‌ ಆಗಿದೆ. ಕೋಟಿ ಕೋಟಿ ಕಲೆಕ್ಷನ್‌ ಮಾಡಿ 500 ಕೋಟಿ ಕ್ಲಬ್‌ ಸೇರಿದೆ. ಈ ನಡುವೆ ಪ್ರಭಾಸ್‌ ಬಗ್ಗೆ ಇಂಟರೆಸ್ಟಿಂಗ್‌ ವಿಚಾರವೊಂದು ವೈರಲ್‌ ಆಗಿದೆ. ಪ್ರಭಾಸ್‌ ಒಂದು ದಿನದ ಊಟಕ್ಕೆನೇ ಲಕ್ಷ ಲಕ್ಷ ಹಣ ಖರ್ಚು ಮಾಡ್ತಾರಂತೆ.

ನಟ ಪ್ರಭಾಸ್‌ ಫಿಟ್‌ನೆಸ್‌ ನೋಡಿದರೆ ಎಂಥವರಿಗೂ ಆಶ್ಚರ್ಯವೆನಿಸುತ್ತದೆ. ಇಷ್ಟೊಂದು ಆಕ್ಟಿವ್‌ ಆಗಿರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುತ್ತೆ. ಸಿನಿಮಾದಲ್ಲಿನ ಆಕ್ಷನ್‌ ಸೀನ್‌ಗಳಲ್ಲಿ ಮಿಂಚುವ ಡಾರ್ಲಿಂಗ್‌ ಪ್ರಭಾಸ್‌ ಫಿಟ್ನೆಸ್‌ ಕಾಯ್ದುಕೊಳ್ಳುವಲ್ಲಿ ಮುಂದಿದ್ದಾರೆ. ಇವರ ಈ ಫಿಟ್‌ ದೇಹಕ್ಕೆ ವರ್ಕೌಟ್‌ ಜತೆ ಊಟವೂ ಕಾರಣವಾಗಿದೆ.

ಪ್ರಭಾಸ್‌ಗೆ ಊಟವೆಂದರೇ ಬಲು ಪ್ರೀತಿಯಂತೆ. ಫುಡಿ ಆಗಿದ್ದರೂ ಪ್ರಭಾಸ್‌ ಡಯೆಟ್‌ ವಿಚಾರದಲ್ಲಿ ತುಂಬಾ ಸ್ಟ್ರಿಕ್ಟ್‌. ಅದರ ಫಲವೇ ಈ ಕಟ್ಟುಮಸ್ತಾದ ದೇಹ. ಪ್ರಭಾಸ್‌ ಊಟಕ್ಕೆಂದೇ ಪ್ರತಿದಿನ ಲಕ್ಷಗಟ್ಟಲೇ ಹಣ ಖರ್ಚು ಮಾಡ್ತಾರಂತೆ. 

ಇದನ್ನೂ ಓದಿ : ಕಲ್ಕಿಯಲ್ಲಿ ಭಾರತದ ಭವಿಷ್ಯ ಕಾಣಿಸಲಿದೆ.. ಶೀಘ್ರದಲ್ಲೇ ಟ್ರೈಲರ್ ರಿಲೀಸ್! 

ಪ್ರಭಾಸ್‌ ಒಂದು ದಿನದ ಊಟಕ್ಕೆ ಲಕ್ಷ ಲಕ್ಷ ರೂಪಾಯಿ ಹಣ ಖರ್ಚಾಗುವುದಂತೆ. ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್‌ ಒಂಟಿಯಾಗಿ ಊಟ ಮಾಡುವುದು ತುಂಬಾ ವಿರಳವಂತೆ. ಶೂಟಿಂಗ್  ಸೆಟ್‌ನಲ್ಲಿ ತಮ್ಮ ಜೊತೆಗಿರುವ ನೂರಾರು ಮಂದಿಗೆ ಊಟ ತಂದು ಕೊಡುವುದು ಪ್ರಭಾಸ್‌ ಅವರಿಗೆ ರೂಢಿಯಂತೆ. ಕೆಲವೊಮ್ಮೆ ಪ್ರತಿನಿತ್ಯ ಜೊತೆಯಲ್ಲಿದ್ದವರಿಗೆ ಊಟ ಕೊಡಿಸುತ್ತಾರಂತೆ. ಹೀಗಾಗಿ ಪ್ರಭಾಸ್ ದಿನದ ಊಟಕ್ಕೆ 2 ಲಕ್ಷ ರೂಪಾಯಿ ಖರ್ಚು ಮಾಡ್ತಾರೆ ಎನ್ನಲಾಗಿದೆ.

ಈ ವಿಚಾರವನ್ನು ರಾಜಮೌಳಿ ಜೊತೆಗಿನ ಸಂದರ್ಶನದಲ್ಲಿ‌ ಪ್ರಭಾಸ್ ಹೇಳಿಕೊಂಡಿದ್ದಾರೆ. ಪ್ರಭಾಸ್‌ ಅವರ ಈ ಮಾತಿಗೆ ಪೃಥ್ವಿರಾಜ್‌ ಕೂಡ ಹೌದು ಎಂದಿದ್ದಾರೆ. ಪೃಥ್ವಿರಾಜ್‌ ಅವರಿಗೂ ಈ ಅನುಭವ ಆಗಿದೆಯಂತೆ. ಪೃಥ್ವಿರಾಜ್‌ ಏನು ಇಷ್ಟ ಅಂತ ಕೇಳಿ ರೂಮೆಲ್ಲ ಊಟದಲ್ಲೇ ತುಂಬಿಸಿ ಬಿಟ್ಟಿದ್ರಂತೆ ಪ್ರಭಾಸ್.‌ ಹೀಗಾಗಿಯೇ ಒಂದು ದಿನದ ಊಟಕ್ಕೆ ಪ್ರಭಾಸ್‌ ಎರಡು ಲಕ್ಷ ರೂಪಾಯಿ ಖರ್ಚು ಮಾಡುತ್ತಾರಂತೆ.  

ಇದನ್ನೂ ಓದಿ : "ರಶ್ಮಿಕಾ ವಿಜಯ್ ಮದುವೆ ಆಗ್ತಾರೆ, ಆದರೆ ಬಳಿಕ ಇಬ್ಬರೂ ದೂರವಾಗ್ತಾರೆ" : ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News