ಅಂತಹ ಪಾರ್ಟಿಗಳಿಗೆ ಹೋಗಿದ್ರೆ ನಾನೂ ಹಿರೋಯಿನ್‌ ಆಗ್ತೀದ್ದೆ..! ಪುಷ್ಪಾ ನಟಿ ಶಾಕಿಂಗ್‌ ಹೇಳಿಕೆ

ಆಗಾಗ ತಮ್ಮ ಹೇಳಿಕೆಯ ಮೂಲಕ ವಿವಾದ ಸೃಷ್ಟಿಸಿಕೊಳ್ಳುವ ನಟಿ ಅನಸೂಯಾ ಇದೀಗ ತೆಲುಗು ಸಿನಿರಂಗದ ಕುರಿತು ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅಂತಹ ಪಾರ್ಟಿಗಳಿಗೆ ಹೋಗಿದ್ರೆ ನಾನೂ ಹಿರೋಯಿನ್‌ ಆಗ್ತೀದ್ದೆ ಎಂದು ಹೇಳುವ ಮೂಲಕ ಚರ್ಚೆಗೆ ಕಾರಣರಾಗಿದ್ದಾರೆ.

Written by - Krishna N K | Last Updated : Nov 4, 2023, 04:27 PM IST
  • ನಟಿ ಅನಸೂಯಾ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
  • ಪುಷ್ಪಾ ಖ್ಯಾತಿಯ ನಟಿ ಅನುಸುಯಾ ಭಾರದ್ವಾಜ್‌.
  • ಪಾರ್ಟಿ ಕುರಿತ ನಟಿಯ ಹೇಳಿಕೆ ವೈರಲ್‌ ಆಗಿವೆ.
ಅಂತಹ ಪಾರ್ಟಿಗಳಿಗೆ ಹೋಗಿದ್ರೆ ನಾನೂ ಹಿರೋಯಿನ್‌ ಆಗ್ತೀದ್ದೆ..! ಪುಷ್ಪಾ ನಟಿ ಶಾಕಿಂಗ್‌ ಹೇಳಿಕೆ title=

Anchor Anasuya : ಪುಷ್ಪಾ ನಟಿ ಅನಸೂಯಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಲ್ಲದೆ ನಿರೂಪಕಿಯಾಗಿಯೂ ಸಹ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದರು. ಆಗಾಗ ತಮ್ಮ ಹೇಳಿಕೆಯ ಮೂಲಕ ವಿವಾದ ಸೃಷ್ಟಿಸಿಕೊಳ್ಳುವ ನಟಿ, ಇದೀಗ ತೆಲುಗು ಸಿನಿರಂಗದ ಕುರಿತು ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹೌದು.. ಮೊದಲಿಗೆ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ಅನಸೂಯಾ ಸಧ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ವೆಬ್‌ ಸರಣಿಗಳಲ್ಲಿ ನಿರತರಾಗಿದ್ದಾರೆ. ರಂಗಸ್ಥಳ ಮತ್ತು ಪುಷ್ಪಾ ಸಿನಿಮಾ ಅನಸೂಯಾ ಕೆರಿಯರ್‌ಗೆ ಸಾಕಷ್ಟು ಲಾಭ ನೀಡಿದ ಚಿತ್ರಗಳು. ಈ ಚಿತ್ರಗಳ ಮೂಲಕ ಸೌತ್‌ ಸಿನಿರಂಗಕ್ಕೆ ಪರಿಚಯವಾದರು.

ಇದನ್ನೂ ಓದಿ:ರಜನಿಕಾಂತ್ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದಾಗ ಪಡೆದ ಮೊದಲ ಸಂಬಳ ಎಷ್ಟು?

ಇತ್ತೀಚೆಗೆ ಅವರು ʼವಿಮಾನʼ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟ ಸಮುದ್ರಖನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವ ಪ್ರಸಾದ್ ಯಾನಾಳ ನಿರ್ದೇಶನದ ಈ ಚಿತ್ರವನ್ನು ಕಿರಣ್ ಕೊರ್ರಪಾಟಿ ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ಅನಸೂಯಾ ಸುಮತಿ ಎಂಬ ವೇಶ್ಯೆ ಪಾತ್ರದಲ್ಲಿ ನಟಿಸಿದ್ದಾರೆ.

ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ಗೆ ಒಳಗಾಗುವ ನಟಿ, ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅತ್ತಾರಿಂಟಿಕಿ ದಾರೇದಿ ಸಿನಿಮಾದಲ್ಲಿ ಹಾಡೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಅದರಲ್ಲಿ ಸಾಕಷ್ಟು ನಾಯಕಿಯರಿದ್ದರು, ನಾನು ಗುಂಪಿನ ಭಾಗವಾಗಲು ಇಷ್ಟಪಡುವುದಿಲ್ಲ ಎಂದರು.

ಇದನ್ನೂ ಓದಿ:ಕುತ್ತಿಗೆ ನೋವಿನಿಂದ ಮುಕ್ತಿ ಪಡೆಯಲು ಆಸನ ಹೇಳಿಕೊಟ್ಟ ಶಿಲ್ಪಾ ಶೆಟ್ಟಿ

ಅಲ್ಲದೆ, ನಾನು ಶೂಟಿಂಗ್‌ನಲ್ಲಿ ನನ್ನ ಕೆಲಸವನ್ನು ನಾನು ನೋಡಿಕೊಳ್ಳುತ್ತೇನೆ. ಸಿನಿಮಾದ ನಂತರ ಪಾರ್ಟಿಗಳಿಂದ ದೂರ ಉಳಿಯುತ್ತೇನೆ. ಇದರಿಂದಾಗಿ ಸಾಕಷ್ಟು ಅವಕಾಶಗಳನ್ನೂ ಕಳೆದುಕೊಂಡಿದ್ದೇನೆ. ಪಾರ್ಟಿಗಳಿಗೆ ಹೋಗಿ ಅವಕಾಶಗಳು ಬಂದರೆ ನನಗೆ ಬೇಡ ಎಂದು ಹೇಳಿದ್ದಾಳೆ. ಸದ್ಯ ಅನಸೂಯಾ ಮಾಡಿರುವ ಈ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.. 

ಸಧ್ಯ ಅನಸೂಯಾ ‘ಕನ್ಯಾಶುಲ್ಕಂ’ ಎಂಬ ವೆಬ್ ಸೀರಿಸ್‌ನಲ್ಲಿ ನಟಿಸಲಿದ್ದಾರೆ. ಈ ವೆಬ್ ಸರಣಿಯು ಗುರಜಾಡ ಅಪ್ಪಾರಾವ್ ಅವರ ಶ್ರೇಷ್ಠ ನಾಟಕ 'ಕನ್ಯಾಶುಲ್ಕಂ' ಅನ್ನು ಆಧರಿಸಿದೆ ಎಂದು ವರದಿಯಾಗಿದೆ. ಇದರಲ್ಲಿ ಮಧುರವಾಣಿ ಎಂಬ ವೇಶ್ಯೆಯ ಪಾತ್ರದಲ್ಲಿ ಅನಸೂಯಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News