ರೇಣುಕಾಸ್ವಾಮಿ ಕೊಲೆ ಪ್ರಕರಣ: ಅಂದು ದರ್ಶನ್‌ ತೊಟ್ಟಿದ್ದ ಬಟ್ಟೆ ಎಲ್ಲಿತ್ತು ಗೊತ್ತಾ?

darshan thoogudeep arrested: ಸದ್ಯ ಅನ್ನಪೂರ್ಣೇಶ್ವರಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧನವಾಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸದ್ಯ ಈ ಕೇಸ್‌ಗೆ ಸಂಬಂಧಪಟ್ಟಂತೆ ಮತ್ತೊಂದು ಮಾಹಿತಿ ಬಹಿರಂಗವಾಗಿದೆ.. 

Written by - Savita M B | Last Updated : Jun 17, 2024, 06:52 PM IST
  • ಸ್ಯಾಂಡಲ್ ವುಡ್ ಹೀರೋ ದರ್ಶನ್ ಮೇಲೆ ಕ್ರಿಮಿನಲ್ ಆರೋಪಗಳಿದ್ದರೂ ಅಭಿಮಾನಿ ಬಳಗ ಕಡಿಮೆಯಾಗುತ್ತಿಲ್ಲ
  • ನಟ ದರ್ಶನ್ ಸದ್ಯ ಅನ್ನಪೂರ್ಣೇಶ್ವರಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ: ಅಂದು ದರ್ಶನ್‌ ತೊಟ್ಟಿದ್ದ ಬಟ್ಟೆ ಎಲ್ಲಿತ್ತು ಗೊತ್ತಾ?  title=

darshan: ಸ್ಯಾಂಡಲ್ ವುಡ್ ಹೀರೋ ದರ್ಶನ್ ಮೇಲೆ ಕ್ರಿಮಿನಲ್ ಆರೋಪಗಳಿದ್ದರೂ ಅಭಿಮಾನಿ ಬಳಗ ಕಡಿಮೆಯಾಗುತ್ತಿಲ್ಲ. ದರ್ಶನ್ ಗೆ ಕೋಪ ಜಾಸ್ತಿ ಅನ್ನೋದು ಎಲ್ಲರಿಗೂ ಗೊತ್ತು.. ಆದರೆ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅವರನ್ನು ಪೊಲೀಸರು 2ನೇ ಆರೋಪಿಯನ್ನಾಗಿ ಬಂಧಿಸಿದ್ದಾರೆ... ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ನಟ ದರ್ಶನ್ ಸದ್ಯ ಅನ್ನಪೂರ್ಣೇಶ್ವರಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿತ್ತು. ಆತನೊಂದಿಗೆ 19 ಮಂದಿಯನ್ನು ಬಂಧಿಸಲಾಗಿದೆ. ದರ್ಶನ್ ಬಂಧನವಾಗಿ ಒಂದು ವಾರ ಕಳೆದಿದೆ. ಇದೀಗ ಜಾಮೀನು ಸಿಗುವುದು ಅನುಮಾನ ಎನ್ನಲಾಗಿದೆ.

ಇದನ್ನೂ ಓದಿ-Chaitra Achar : ಬ್ಲ್ಯಾಕ್ ಡ್ರೆಸ್ ನಲ್ಲಿ ಚೈತ್ರಾ! ಹಾಟ್ನೆಸ್ ಅಂದ್ರೆ ಇದು ಎಂದ ನೆಟ್ಟಿಗರು....

ಒಂದಿಲ್ಲೊಂದು ಪ್ರಕರಣದಲ್ಲಿ ಸುದ್ದಿಯಾಗುತ್ತಿರುವ ನಟ ದರ್ಶನ್, ಚಿತ್ರದರ್ಗ ಮೂಲದ ರೇಣುಕಾಸ್ವಾಮಿಯನ್ನು ಕಿಡ್ನಾಪ್‌ ಮಾಡಿ ಬರ್ಬರವಾಗಿ ಹಲ್ಲೆ ನಡೆಸಿ ಹತ್ಯೆಗೈದ ಆರೋಪ ಕೇಳಿಬಂದಿದೆ. ಹಾಗಾದ್ರೆ ಆ ದಿನ ದರ್ಶನ್‌  ತೊಟ್ಟ ಬಟ್ಟೆ ಎಲ್ಲಿ ಸಿಕ್ಕಿತು ಗೊತ್ತಾ?
 
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಫ್ಲಾಟ್‌ನಲ್ಲಿ ಬಟ್ಟೆ ಬಿಚ್ಚಿಟ್ಟಿದ್ದರು... ನಂತರ ವಿಜಯಲಕ್ಷ್ಮಿ ಆ ಬಟ್ಟೆಯನ್ನು ಮನೆಗೆ ತೆಗೆದುಕೊಂಡು ಹೋಗಿದ್ದು, ವಿಚಾರಣೆ ವೇಳೆ ದರ್ಶನ್ ಮನೆಯಲ್ಲಿ ಬಟ್ಟೆ ಇತ್ತು ಎಂದು ಹೇಳಿದ್ದಾರೆ. ಮಹಜ್ ಮಾಡಲು ಮನೆಗೆ ಹೋಗಿ ಬಟ್ಟೆ ಹುಡುಕಿದರೂ ಸಿಕ್ಕಿಲ್ಲ.. ಕೊನೆಗೆ ಕಾಸ್ಟ್ಯೂಮ್ ಡಿಸೈನರ್ ಬಳಿ ಕೇಳಿ.. ಕೊನೆಗೆ ಅವರ ಮನೆಗೆ ತೆರಳಿ ಬಟ್ಟೆ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.. 

ಇದನ್ನೂ ಓದಿ-ಮ್ಯಾಕ್ಸ್ ರಿಲೀಸ್ ಡೇಟ್‌ ಬಗ್ಗೆ ಸುದೀಪ್‌ ಕೊಟ್ರು ಬಿಗ್‌ ಅಪ್‌ಡೇಟ್‌

ಇನ್ನು ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಪತಿಯ ಬಂಧನದ ವಿಚಾರವಾಗಿ ಮೌನ ತಾಳಿದ್ದಾರೆ.. ಇತ್ತೀಚೆಗೆ ಇನ್‌ಸ್ಟಾಗ್ರಾಂ ತೆಗೆದು ಹಾಕಿದ್ದ ಅವರು ಇಂದು ಮತ್ತೆ ಅಕೌಂಟ್‌ ಆಕ್ಟೀವ್‌ ಮಾಡಿಕೊಂಡಿದ್ದಾರೆ.. 

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಪಾತ್ರ ಪ್ರತ್ಯಕ್ಷವೋ ಅಥವಾ ಪರೋಕ್ಷವೋ ಎಂಬ ಬಗ್ಗೆ ಆಳವಾದ ತನಿಖೆ ನಡೆಯುತ್ತಿದೆ. ಆದರೆ ನಟನೊಬ್ಬ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸ್ಯಾಂಡಲ್ ವುಡ್ ಹಾಗೂ ಸೌತ್ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News