Roopesh Rajanna : ರೂಪೇಶ್ ರಾಜಣ್ಣ ಔಟ್‌! ಅತಿಯಾದ ನೇರವಂತಿಕೆಯೇ ಮುಳುವಾಯಿತೇ?

Roopesh Rajanna : ಎಲ್ಲಾ ಹಿರಿಯ ಅಭ್ಯರ್ಥಿಗಳ ನಡುವೆ ಬಿಗ್ ಬಾಸ್ ಕನ್ನಡ ಸೀಸನ್ 9 ರ ಗ್ರ್ಯಾಂಡ್ ಫಿನಾಲೆಗೆ ಬಂದ ಏಕೈಕ ನವೀನ ಅಂದ್ರೆ ಅದು ರೂಪೇಶ್ ರಾಜಣ್ಣ. ಹೋರಾಟದ ಮನೋಭಾವದಿಂದಲೇ ಎಲ್ಲರ ಗಮನಸೆಳೆದಿದ್ದಾರೆ. ಆದರೆ ಇದೀಗ ಮೂರನೇ ರನ್ನರ್‌ ಅಪ್‌ ಆಗಿ ಮನೆಯಿಂದ ಹೊರಬಂದಿದ್ದಾರೆ. 

Written by - Chetana Devarmani | Last Updated : Dec 31, 2022, 09:49 PM IST
  • ಬಿಗ್ ಬಾಸ್ ಕನ್ನಡ ಸೀಸನ್ 9 ಗ್ರ್ಯಾಂಡ್‌ ಫಿನಾಲೆ
  • ನೇರ, ನಿಷ್ಠುರ ಮಾತೇ ರೂಪೇಶ್ ರಾಜಣ್ಣಗೆ ಮುಳುವಾಯಿತೇ?
  • ಮೂರನೇ ರನ್ನರ್‌ ಅಪ ಆದ ರೂಪೇಶ್ ರಾಜಣ್ಣ
Roopesh Rajanna : ರೂಪೇಶ್ ರಾಜಣ್ಣ ಔಟ್‌! ಅತಿಯಾದ ನೇರವಂತಿಕೆಯೇ ಮುಳುವಾಯಿತೇ?  title=
ರೂಪೇಶ್ ರಾಜಣ್ಣ

Bigg Boss Kannada Season 9 : ಎಲ್ಲಾ ಹಿರಿಯ ಅಭ್ಯರ್ಥಿಗಳ ನಡುವೆ ಬಿಗ್ ಬಾಸ್ ಕನ್ನಡ ಸೀಸನ್ 9 ರ ಗ್ರ್ಯಾಂಡ್ ಫಿನಾಲೆಗೆ ಬಂದ ಏಕೈಕ ನವೀನ ಅಂದ್ರೆ ಅದು ರೂಪೇಶ್ ರಾಜಣ್ಣ. ಹೋರಾಟದ ಮನೋಭಾವದಿಂದಲೇ ಎಲ್ಲರ ಗಮನಸೆಳೆದಿದ್ದಾರೆ ರೂಪೇಶ್‌ ರಾಜಣ್ಣ. ಬಿಗ್ ಬಾಸ್ ಮನೆಯೊಳಗೆ ವಿವಾದಗಳು ಮತ್ತು ಜಗಳಗಳ ಪಾಲಿಗೆ ಹೆಸರುವಾಸಿಯಾಗಿದ್ದಾರೆ. ಗಾಜಿನಮನೆಯೊಳಗಿನ ಅನೇಕ ಘಟನೆಗಳ ಬಗ್ಗೆ ಅವರು ಯಾವಾಗಲೂ ದನಿಯಾಗಿದ್ದಾರೆ ಮತ್ತು ಮನೆಯವರೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಪ್ರಶಾಂತ್ ಸಂಬರಗಿ ಅವರೊಂದಿಗಿನ ಅವರ ಭಿನ್ನಾಭಿಪ್ರಾಯವನ್ನು ಎಂದಿಗೂ ಮರೆಯಲು ಅಸಾಧ್ಯ. ಟಾಸ್ಕ್‌ ವಿಚಾರದಲ್ಲೂ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಆಕ್ರೋಶ ಭರಿತ ರೂಪೇಶ್‌ ರಾಜಣ್ಣ ಅವರಿಗಿಂತ ಮುಗ್ಧ ಮನಸ್ಸಿನ ಅವರ ವ್ಯಕ್ತಿತ್ವ ಎಲ್ಲರಿಗೂ ಬಲು ಇಷ್ಟವಾಗಿದೆ. ಆದರೆ ಇದೀಗ ಮೂರನೇ ರನ್ನರ್‌ ಅಪ್‌ ಆಗಿ ಮನೆಯಿಂದ ಹೊರಬಂದಿದ್ದಾರೆ. 

ಇದನ್ನೂ ಓದಿ : Bigg Boss Kannada 9 ಗ್ರ್ಯಾಂಡ್ ಫಿನಾಲೆ: ವಿನ್ನರ್‌ ಘೋಷಣೆಗೆ ಕೌಂಟ್‌ಡೌನ್‌, ಯಾರ ಕೈ ಸೇರಲಿದೆ ಟ್ರೋಫಿ?

ಮೊದ ಮೊದಲಿಗೆ ಜಗದಿಂದಲೇ ಹೈಲೈಟ್‌ ಆಗುತ್ತಿದ್ದ ರೂಪೇಶ್‌ ರಾಜಣ್ಣ ಅವರಿಗೆ ಅತಿಯಾದ ನೇರವಂತಿಕೆಯೇ ಮುಳುವಾಯಿತಾ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರತಿಸಲ ಪ್ರತಿಯೊಂದರಲ್ಲೂ ತಪ್ಪು ಹುಡುಕುತ್ತಿದ್ದ ಅವರ ಮನೋಭಾವ ಎಲ್ಲೋ ಒಂದು ಕಡೆ ಅವರಿಗೆ ಮೈನಸ್‌ ಪಾಯಿಂಟ್‌ ಆದಂತಿದೆ. ಸೀಸನ್‌ ಮೊದಲ ವಾರಗಳಲ್ಲಿ ಕೇವಲ ಜಗಳಗಳಿಂದಲೇ ರಾಜಣ್ಣ ಗುರುತಿಸಿಕೊಂಡರು. ಇದು ಎಲ್ಲೋ ಒಂದು ಕಡೆ ಅವರಿಂದ ವಿನ್ನರ್‌ ಪಟ್ಟ ಕಸಿದುಕೊಳ್ಳಲು ಕಾರಣ ವಾದಂತಿದೆ. 

ಹಾಡು ಬರೆಯುವ, ಸೊಗಸಾಗಿ ಸಾಂಗ್‌ ಹೇಳುವ ತಮ್ಮ ಎಂಟರ್‌ಟೈನ್‌ಮೆಂಟ್‌ ವ್ಯಕ್ತಿತ್ವವನ್ನು ರೂಪೇಶ್‌ ರಾಜಣ್ಣ ಮೊದಲೇ ತೋರಿಸಿದ್ದರೆ, ಅವರ ಆಟ ಇನ್ನಷ್ಟು ಮೆರಗು ಪಡೆಯುತ್ತಿತ್ತು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಅನೇಕರು ರೂಪೇಶ್‌ ರಾಜಣ್ಣ ಅವರ ಜಗಳ ಮಾಡುವ ಸ್ವಭಾವ ಬಿಟ್ಟು, ಮುಗ್ಧ ಮಗುವಿನ ಮನಸ್ಸನ್ನು ಅನೇಕರು ಇಷ್ಟಪಟ್ಟಿದ್ದರು. ಇದನ್ನು ಕೆಲ ವಾರಗಳ ಬಳಿಕ ಅರಿತ ರೂಪೇಶ್‌ ರಾಜಣ್ಣ ಆ ನಂತರ ಎವರ್‌ಗ್ರೀನ್ ಸಾಂಗ್‌ಗಳನ್ನ ಸೊಗಸಾಗಿ ಹಾಡುವ ಮೂಲಕ ಜನರ ಹೃದಯ ಕದ್ದರು. ಇವರ ಕಂಠ ಸಿರಿಗೆ ಇತರ ಸ್ಪರ್ಧಿಗಳು ಸಹ ಫಿದಾ ಆದರು. ಕನ್ನಡ ನಟರುಗಳ ಮಿಮಿಕ್ರಿ ಮಾಡುವ ಮೂಲಕ ಮನರಂಜನೆಯಲ್ಲೂ ರೂಪೇಶ್‌ ರಾಜಣ್ಣ ಎಲ್ಲರ ಮನಸೆಳೆದರು. 

ಇದನ್ನೂ ಓದಿ : BBK 9 Winner : ಈ ಬಾರಿ ಬಿಗ್ ಬಾಸ್ ವಿನ್ನರ್‌ಗೆ ಏನೆಲ್ಲಾ ಸಿಗಲಿದೆ? ಬಹುಮಾನದ ಒಟ್ಟು ಮೊತ್ತ ಎಷ್ಟು?

ಆದರೆ ಅವರು ತಮ್ಮ ಆಟದ ವರಸೆ ಬದಲಿಸುವ ಹೊತ್ತಿಗೆ ಅನೇಕ ಪ್ರೇಕ್ಷಕರಲ್ಲಿ ಅವರ ಬಗ್ಗೆ ಒಂದು ಅಭಿಪ್ರಾಯ ಮೂಡಿ ಆಗಿತ್ತು.  ನೇರ ನುಡಿ, ನಿಷ್ಠುರ ನಿರ್ಧಾರ, ಕಠಿಣ ನಿಲುವುಗಳು ಕೆಲವರಿಗೆ ಇಷ್ಟವಾದರೆ ಮತ್ತೆ ಕೆಲವರಿಗೆ ಇಷ್ಟವಾಗಲಿಲ್ಲ. ಇದೇ ಎಲ್ಲೋ ಒಂದು ಕಡೆ ಅವರು ಮೂರನೇ ರನ್ನರ್‌ ಅಪ್‌ ಆಗಲು ಕಾರಣವಾಯಿತು ಎಂಬುದು ಹಲವರ ಅಭಿಪ್ರಾಯವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News