"ನಾವು ಐದು ಮಂದಿ ನಿರ್ಮಾಪಕರಿದ್ದು, ನಿನ್ನನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತೇವೆ" ಎಂದಿದ್ದ ನಿರ್ಮಾಪಕ: ತಿರುಗೇಟು ಕೊಟ್ಟ ಶೃತಿ ಹರಿಹರನ್

Shruthi Hariharan: ನಟಿ ಶೃತಿ ಹರಿಹರನ್  ಕೇರಳ ಮೂಲದವರಾದರೂ, ಮಲಯಾಳಂ ಸಿನಿಮಾದಿಂದಲೇ ನಟನೆ ಶುರು ಮಾಡಿದ್ದರೂ ಜನಪ್ರಿಯತೆ ಗಳಿಸಿದ್ದು ಮಾತ್ರ ಕನ್ನಡ ಚಿತ್ರರಂಗದಲ್ಲಿ. ಸಿನಿಮಾದಲ್ಲಿ ತಮ್ಮ ಪಾತ್ರದ ಮೂಲಕ ಎಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೋ ಅಷ್ಟೇ ವಿವಾದಗಳಿಂದಲೂ ಜನಪ್ರಿಯರಾಗಿ ನಟಿ, ಸಿನಿಮಾರಂಗದಲ್ಲಿ ನೆಲೆಯೂರುವುದಕ್ಕೆ ಪ್ರಯತ್ನ ಪಡುತ್ತಿದ್ದ ಆರಂಭಿಕ ದಿನಗಳಲ್ಲಿ ಅವರಿಗಾದ ಕೆಲವು ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Written by - Zee Kannada News Desk | Last Updated : Nov 8, 2023, 05:12 PM IST
"ನಾವು ಐದು ಮಂದಿ ನಿರ್ಮಾಪಕರಿದ್ದು, ನಿನ್ನನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತೇವೆ" ಎಂದಿದ್ದ ನಿರ್ಮಾಪಕ: ತಿರುಗೇಟು ಕೊಟ್ಟ ಶೃತಿ ಹರಿಹರನ್ title=

South Actress Shruthi Hariharan: ಸೌತ್‌ ನಟಿ ಶೃತಿ ಹರಿಹರನ್ ಕನ್ನಡ ಸಿನಿಮಾಗಳಿಂದ ಹೆಚ್ಚು ಜನಪ್ರಿಯರಾಗಿದ್ದರೂ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದರೆ, ಸಿನಿಮಾರಂಗದಲ್ಲಿ ನೆಲೆಯೂರುವುದಕ್ಕೆ ಪ್ರಯತ್ನ ಪಡುತ್ತಿದ್ದ ಆರಂಭಿಕ ದಿನಗಳಲ್ಲಿ ಅವರಿಗಾದ ಕೆಲವು ಕಹಿ ಅನುಭವಗಳನ್ನು ಹೇಳಿಕೊಂಡಿದ್ದು, 2018ರಲ್ಲಿ ಹೈದರಾಬಾದ್‌ನಲ್ಲಿ ಇಂಡಿಯಾ ಟುಡೇ ನಡೆಸಿದ ಸೌತ್ ಕಾನ್‌ಕ್ಲೇವ್‌ನಲ್ಲಿ ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದರು. ಶೃತಿ ಹರಿಹನ್‌ ಕಾಸ್ಟಿಂಗ್ ಕೌಚ್, ಮೀಟೂ ಸಂದರ್ಭದಗಳಲ್ಲಿ  ಓಪನ್ ಆಗಿ ಮಾತಾಡಿದ್ದು, ಈಕೆ ನೀಡಿದ ಬಹಿರಂಗ ಹೇಳಿಕೆ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಮಾಡಿದ ಆರೋಪ ದಕ್ಷಿಣ ಭಾರತದಲ್ಲಿ ದೊಡ್ಡ ಹಲ್‌ಚಲ್ ಅನ್ನೇ ಎಬ್ಬಿಸಿತ್ತು. ಆದರೆ, ಶೃತಿ ಹರಿಹರನ್ ತಮಿಳು ನಿರ್ಮಾಪಕರ ಮೇಲೂ ಇಂತಹದ್ದೇ ಬಹಿರಂಗ ಆರೋಪ ಮಾಡಿದ್ದರು.

ಇಂಡಿಯಾ ಟು ಡೇ ಸೌತ್ ಕಾನ್‌ಕ್ಲೇವ್‌ನಲ್ಲಿ ಶೃತಿ ಹರಿಹರನ್ ತನಗೆ ಕನ್ನಡ ಚಿತ್ರರಂಗದಲ್ಲೇ ಮೊಲದ ಬಾರಿಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು ಎಂದು ಹೇಳಿಕೊಂಡಿದ್ದರು. "ನನಗೆ ಕಾಸ್ಟಿಂಗ್ ಕೌಚ್ ಅನುಭವ ಆದಾಗ ಆಗ 18 ವರ್ಷ. ಅದು ನನ್ನ ಮೊದಲ ಕನ್ನಡ ಸಿನಿಮಾ ಆಗಿತ್ತು. ಅದು ನನ್ನನ್ನು ಸಿಕ್ಕಾಪಟ್ಟೆ ಭಯ ಹುಟ್ಟಿಸಿತ್ತು. ಆ ವೇಳೆ ನಾನು ಅಳುತ್ತಿದ್ದೆ. ಆಗ ನನ್ನ ಡ್ಯಾನ್ಸ್ ಕೊರಿಯೋಗ್ರಾಫರ್‌ಗೆ ಏನಾಯಿತು ಎಂದು ಹೇಳಿದೆ. ಆಗ ಅವರು ನಿನಗೆ ಇದನ್ನೆಲ್ಲ ಸಂಭಾಳಿಸಲು ಸಾಧ್ಯವಿಲ್ಲ ಎಂದಾದರೆ, ಇಲ್ಲಿಂದ ಹೊರಡು" ಎಂದು ಹೇಳಿದ್ದ ವಿಷಯವನ್ನು ನೆನಪಿಸಿಕೊಂಡಿದ್ದರು.

ಇದನ್ನು ಓದಿ: ರಾಮ್ ಚರಣ್ ಸಿನಿಮಾ 'ಗೇಮ್ ಚೇಂಜರ್' ಸಾಂಗ್ ಲೀಕ್..! ಇಬ್ಬರ ಬಂಧನ ‌

ಈ ಘಟನೆ ನಡೆದ ಮೇಲೆ ಶೃತಿಗೆ, ಅವರಿಗಾದ ಮತ್ತೊಂದು ಅನುಭವದ ಬಗ್ಗೆ ಮಾತನಾಡುತ್ತಾ, ವೇದಿಕೆ ಮೇಲೆ ತಮಿಳು ನಿರ್ಮಾಪಕರೊಬ್ಬರ ಮೇಲೂ ಆರೋಪ ಮಾಡಿದ್ದರು. ಕೌಸ್ಟಿಂಗ್ ಕೌಚ್ ಅನುಭವ ಆದ ನಾಲ್ಕು ವರ್ಷಗಳ ಬಳಿಕ ತಮಿಳು ನಿರ್ಮಾಪಕನಿಂದ ಇದಕ್ಕಿಂತ ಕೆಟ್ಟ ಅನುಭವ ಆಗಿತ್ತೆಂದು ಹೇಳುತ್ತಾ "ನನಗಾದ ಮೊದಲ ಅನುಭವದ 4 ವರ್ಷಗಳ ಬಳಿಕ ಮತ್ತೊಂದು ಘಟನೆ ನಡೆದಿತ್ತು. ತಮಿಳು ಚಿತ್ರರಂಗದ ಪ್ರಮುಖ ನಿರ್ಮಾಪಕರೊಬ್ಬರು ನನ್ನ ಕನ್ನಡ ಸಿನಿಮಾದ ಹಕ್ಕನ್ನು ಪಡೆದಿದ್ದರು. ತಮಿಳಿನಲ್ಲಿ ರಿಮೇಕ್ ಮಾಡಲು ಮುಂದಾಗಿದ್ದರು. ಆ ಸಿನಿಮಾದಲ್ಲಿ ನಾನೇ ನಟಿಸಬೇಕು ಎಂದು ಬಯಸಿದ್ದರು." ಎಂದು ಆ ಘಟನೆಯನ್ನು ವಿವರಿಸಿದ್ದಾರೆ. 

ಆ ನಿರ್ಮಾಪಕ ಏನು ಹೇಳಿದ್ದನೋ ಅದನ್ನು ಹಾಗೆಯೇ ಹೇಳುತ್ತೇನೆ ಎಂದು ಬಹಿರಂಗ ಪಡಿಸುತ್ತಾ "ನಾವು ಐದು ಮಂದಿ ನಿರ್ಮಾಪಕರಿದ್ದೇವೆ. ನಾವು ನಿನ್ನನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತೇವೆ ಎಂದಿದ್ದರು". ಆಗ ನಾನು "ನನ್ನ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡಿದ್ದೇನೆ" ಎಂದು ಅವರಿಗೆ ತಿರುಗೇಟು ಕೊಟ್ಟೆ ಎಂದು ಕಾನ್‌ಕ್ಲೇವ್‌ನಲ್ಲಿ ಹೇಳಿದ್ದರು. ಈ ವಿಷಯವನ್ನು ಹಲವು ಮಾಧ್ಯಮಗಳು ವರದಿ ಕೂಡ ಮಾಡಿದ್ದವು. ಇಷ್ಟೇ ಅಲ್ಲದೆ ಈ ಘಟನೆ ನಡೆದ ಬಳಿಕ "ಅವರೊಂದಿಗೆ ಸಿನಿಮಾ ಮಾಡುವುದಕ್ಕೆ ಕಷ್ಟ ಎಂದು ಗಾಳಿ ಸುದ್ದಿಯನ್ನು ಹಬ್ಬಿಸಿದ್ದರು. ಇದರಿಂದ ತಮಿಳು ಚಿತ್ರರಂಗದಲ್ಲಿ ಒಳ್ಳೆಯ ಪ್ರಾಜೆಕ್ಟ್‌ಗಳು ಸಿಗಲಿಲ್ಲ" ಎಂದು ಶ್ರುತಿ ಹರಿಹರನ್ ಹೇಳಿಕೊಂಡಿದ್ದರು. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News