ಮತ್ತೆ ಸ್ಯಾಂಡಲ್‌ವುಡ್‌ಗೆ ಕಮ್ ಬ್ಯಾಕ್ ಮಾಡಿದ ಟಾಲಿವುಡ್ ಖ್ಯಾತ ಹಾಸ್ಯನಟ..!

‘ನಮೋ ಭೂತಾತ್ಮ’ದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ತೆಲುಗಿನ ಜನಪ್ರಿಯ ಹಾಸ್ಯನಟ ಅಲಿ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ.

Written by - Puttaraj K Alur | Last Updated : Aug 26, 2021, 10:41 AM IST
  • ಬಿಗ್ ಬಾಸ್ ಖ್ಯಾತಿಯ ರಾಜೀವ್ ಮತ್ತು ಶ್ರೀಜಿತಾ ಘೋಷ್ ಮುಖ್ಯಭೂಮಿಕೆಯ ಚಿತ್ರದಲ್ಲಿ ಅಲಿ ಮುಖ್ಯಪಾತ್ರ
  • ಬರೋಬ್ಬರಿ 7 ವರ್ಷಗಳ ಬಳಿಕ ಅಲಿ ಅವರು ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ
  • ‘ಉಸಿರೇ ಉಸಿರೇ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿರುವ ನಟ ಕಿಚ್ಚ ಸುದೀಪ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ
ಮತ್ತೆ ಸ್ಯಾಂಡಲ್‌ವುಡ್‌ಗೆ ಕಮ್ ಬ್ಯಾಕ್ ಮಾಡಿದ ಟಾಲಿವುಡ್ ಖ್ಯಾತ ಹಾಸ್ಯನಟ..! title=
ಜನಪ್ರಿಯ ಹಾಸ್ಯನಟ ಅಲಿ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ (Photo Courtesy: @Zee5)

ಬೆಂಗಳೂರು: ಕನ್ನಡ ಚಿತ್ರ ‘ನಮೋ ಭೂತಾತ್ಮ’ದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ತೆಲುಗಿನ ಜನಪ್ರಿಯ ಹಾಸ್ಯನಟ ಅಲಿ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ. ರಾಜೀವ್ ಹನು ಮತ್ತು ಶ್ರೀಜಿತಾ ಘೋಷ್ ಮುಖ್ಯಭೂಮಿಕೆಯ ಸಿ.ಎಂ.ವಿಜಯ್ ನಿರ್ದೇಶನದ ‘ಉಸಿರೇ ಉಸಿರೇ’ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬರೋಬ್ಬರಿ 7 ವರ್ಷಗಳ ಬಳಿಕ ಅಲಿ ಅವರು ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

ನಿರ್ದೇಶಕ ವಿಜಯ್ ಹೇಳುವ ಪ್ರಕಾರ, ‘ಟಾಲಿವುಡ್ ಖ್ಯಾತ ಹ್ಯಾಸ ನಟರಾಗಿರುವ ಅಲಿ ಅವರು ನಮ್ಮ ಚಿತ್ರದ ಭಾಗವಾಗಿರುವುದಕ್ಕೆ ಅತ್ಯಂತ ಖುಷಿಯಾಗಿದೆ. ನಮ್ಮ ಚಿತ್ರಕಥೆಯು ಕಾಲೇಜಿನ ಜೀವನದ ಬಗ್ಗೆ ಇದ್ದರೂ ಅಲಿಯವರ ಪಾತ್ರವು ಅದಕ್ಕೆ ಸಂಬಂಧಿಸಿಲ್ಲ. ಅವರ ಪಾತ್ರವು ನಿರೂಪಣೆಯ ಉದ್ದಕ್ಕೂ ರಾಜೀವ್‌ನ ಸ್ನೇಹಿತನಂತೆ ಕಾಣಿಸಿಕೊಳ್ಳಲಿದೆ. ಎಂದಿನಂತೆ ಅಲಿಯವರ ಹಾಸ್ಯ ಚಿತ್ರದಲ್ಲಿರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಾರುಖ್ ಪುತ್ರನ ಜೊತೆ ಕಾಣಿಸಿಕೊಂಡ ಜೂಹ್ಲಿ ಪುತ್ರಿ ಜಾಹ್ನವಿ? ಜೂಹ್ಲಿ ಚಾವ್ಲಾ ಹೇಳಿದ್ದೇನು ಗೊತ್ತೇ?

‘ಚಿತ್ರದ ಕ್ಲೈಮ್ಯಾಕ್ಸ್‌ ನಲ್ಲಿ ಅಲಿಯವರ ಪಾತ್ರದ ಮಹತ್ವವನ್ನು ಬಹಿರಂಗಪಡಿಸಲಾಗುತ್ತದೆ. ಚಿತ್ರದಲ್ಲಿ ಅಲಿ ಅವರು ತೆಲುಗು ಮತ್ತು ಕನ್ನಡದ ಮಿಶ್ರಣವನ್ನು ಮಾತನಾಡಲಿದ್ದಾರೆ, ಸ್ವತಃ ಅವರೇ ಡಬ್ ಮಾಡಲಿದ್ದಾರೆ. ಅಲಿ ಪಾತ್ರದ ಚಿತ್ರೀಕರಣವು ಸೆಪ್ಟೆಂಬರ್ ಅಂತ್ಯದ ವೇಳೆಗೆ ನಡೆಯಲಿದ್ದು, ಶೀಘ್ರವೇ ಅವರು ನಮ್ಮ ತಂಡ ಸೇರಲಿದ್ದಾರೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ರಾಜೀವ್ ನಟಿಸುತ್ತಿರುವ ‘ಉಸಿರೇ ಉಸಿರೇ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದ ನಟ ಕಿಚ್ಚ ಸುದೀಪ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ವೇಳೆ ಚಿತ್ರತಂಡ ಸುದೀಪ್​ ಅವರಿಗೆ ಬೆಳ್ಳಿ ಪೆನ್ ​ಉಡುಗೊರೆಯಾಗಿ ನೀಡಿತ್ತು. ಈ ಪೆನ್​ ಅನ್ನು ನಿರ್ದೇಶಕರಿಗೆ ನೀಡಿದ್ದ ಸುದೀಪ್ ನಿಮ್ಮ ಮುಂದಿನ ಕೆಲಸಗಳೆಲ್ಲಾ ಸುಲಲಿತವಾಗಿ ನಡೆಯಲಿ ಎಂದು ಶುಭ ಹಾರೈಸಿದ್ದರು. ‘ನಮ್ಮ 4 ವರ್ಷಗಳ ಶ್ರಮಕ್ಕೆ ಈಗ ಉತ್ತಮ ಕಾಲ ಕೂಡಿ ಬಂದಿದೆ.‌ ಎಲ್ಲರ ಹಾರೈಕೆಯು ನಮಗಿರಲಿ’ ಅಂತಾ ನಟ ರಾಜೀವ್ ಕೇಳಿಕೊಂಡಿದ್ದರು

ಇದನ್ನೂ ಓದಿ: ಲೀಕ್ ಆಯಿತು Aishwarya Rai Bachchan ಮುಂದಿನ ಚಿತ್ರದ ಲುಕ್..!

‘ಎನ್ ಗೊಂಬೆ’ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್  ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಾಜೀವ್​ಗೆ ನಾಯಕಿಯಾಗಿ ಶ್ರೀಜಿತ ಘೋಷ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜಿಸುತ್ತಿದ್ದು, ಶರವಣನ್ ಛಾಯಾಗ್ರಹಣವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News