Upendra: ‘ಸಿನಿಮಾದಲ್ಲಿ ಸಿಗರೇಟ್ ಸೇವನೆ, ಜೂಜಿನ ಜಾಹೀರಾತು ತಪ್ಪು, ಸರ್ಕಾರದ ಅನುಮತಿ ಸರಿಯೇ..?’

ನಟ ಉಪೇಂದ್ರ ಅವರು ಸಿನಿಮಾದಲ್ಲಿ ಸಿಗರೇಟ್ ಸೇದುವುದು, ಕುಡಿಯುವುದು, ಜೂಜಿಗೆ ಜಾಹೀರಾತು ನೀಡುವುದರ ಕುರಿತಾಗಿ ವ್ಯಂಗ್ಯವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.

Written by - Puttaraj K Alur | Last Updated : Apr 22, 2022, 12:17 PM IST
  • ಪಾನ್ ಮಸಾಲ, ಬಿಯರ್, ಆನ್‍ಲೈನ್ ಜೂಜಿನ ಜಾಹೀರಾತುಗಳಲ್ಲಿ ಸ್ಟಾರ್ ನಟರು
  • ಸಿನಿಮಾದಲ್ಲಿ ಸಿಗರೇಟ್ ಸೇವನೆ, ಕುಡಿಯುವುದು, ಜೂಜಿಗೆ ಜಾಹೀರಾತು ನೀಡುವುದರ ಕುರಿತು ಉಪೇಂದ್ರ ಪೋಸ್ಟ್
  • ತೆರಿಗೆ ಹಣಕ್ಕಾಗಿ ಅನುಮತಿ ಕೊಟ್ಟಿರುವ ಸರ್ಕಾರವನ್ನು ಪ್ರಶ್ನಿಸಿದ ರಿಯಲ್ ಸ್ಟಾರ್
Upendra: ‘ಸಿನಿಮಾದಲ್ಲಿ ಸಿಗರೇಟ್ ಸೇವನೆ, ಜೂಜಿನ ಜಾಹೀರಾತು ತಪ್ಪು, ಸರ್ಕಾರದ ಅನುಮತಿ ಸರಿಯೇ..?’ title=
ನಟ ಉಪೇಂದ್ರ ಪೋಸ್ಟ್ ವೈರಲ್

ಬೆಂಗಳೂರು: ಬಾಲಿವುಡ್ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ನಿಮಗೆ ಗೊತ್ತೆ ಇದೆ. ಅದರಲ್ಲೂ ಅಕ್ಷಯ್ ಕುಮಾರ್ ಅವರು ಪಾನ್ ಮಸಾಲ ಜಾಹೀರಾತಿನ ಕಾರಣ ಸಖತ್ ಟ್ರೋಲ್ ಆಗಿದ್ದರು. ‘ಪದ್ಮಶ್ರೀ’ ಪುರಸ್ಕೃತ ಈ ನಟರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಈ ನಟರು ತಮ್ಮ ಅಭಿಮಾನಿಗಳಿಗೆ ಪಾನ್ ಮಸಾಲ ಜಾಹೀರಾತಿನ ಮೂಲಕ ಯಾವ ಸಂದೇಶ ನೀಡುತ್ತಿದ್ದಾರೆ..? ಅನ್ನೋದು ಅನೇಕರ ಪ್ರಶ್ನೆಯಾಗಿದೆ.

ಬಾಲಿವುಡ್ ಸ್ಟಾರ್ ಗಳಷ್ಟೇ ಅಲ್ಲ, ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸ್ಟಾರ್ ನಟರು ಪಾನ್ ಮಸಾಲ, ಬಿಯರ್, ಆನ್‍ಲೈನ್ ಜೂಜಿನ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೇ ವಿಚಾರವಾಗಿ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದು, ಸಖತ್ ಸದ್ದು ಮಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News