Benefits Of Triphala: ಅಸಿಡಿಟಿ ಸಮಸ್ಯೆ ಕಾಡುತ್ತಿದೆಯೇ ನಿತ್ಯ ತ್ರಿಫಲವನ್ನು ಸೇವಿಸಿ

ಆಮ್ಲೀಯತೆ ಎಂದರೆ ಅಸಿಡಿಟಿ ಸಮಸ್ಯೆ ಇತ್ತೀಚಿಗೆ ಎಲ್ಲರಲ್ಲೂ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಈಗ ನೀವು ಚಿಂತೆ ಮಾಡುವ ಅಗತ್ಯವಿಲ್ಲ.

Written by - Yashaswini V | Last Updated : May 26, 2021, 02:53 PM IST
  • ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ತ್ರಿಫಲಾ ಅತ್ಯಂತ ಪರಿಣಾಮಕಾರಿ ಔಷಧವಾಗಿದೆ
  • ತ್ರಿಫಲಾ ಉಸಿರಾಟದ ಕಾಯಿಲೆಗಳಲ್ಲಿ ಪ್ರಯೋಜನಕಾರಿಯಾಗಿದೆ
  • ಮಧುಮೇಹ ಚಿಕಿತ್ಸೆಯಲ್ಲಿ ತ್ರಿಫಲಾ ಬಹಳ ಪರಿಣಾಮಕಾರಿ
Benefits Of Triphala: ಅಸಿಡಿಟಿ ಸಮಸ್ಯೆ ಕಾಡುತ್ತಿದೆಯೇ ನಿತ್ಯ ತ್ರಿಫಲವನ್ನು ಸೇವಿಸಿ title=
Benefits of Triphala

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಜನರು ಆಗಾಗ್ಗೆ ಆಮ್ಲೀಯತೆಯ ಸಮಸ್ಯೆ ಎದುರಿಸುತ್ತಿರುತ್ತಾರೆ. ಆಮ್ಲೀಯತೆ ಎಂದರೆ ಅಸಿಡಿಟಿ ಸಮಸ್ಯೆ ಇತ್ತೀಚಿಗೆ ಎಲ್ಲರಲ್ಲೂ ಸಾಮಾನ್ಯವಾಗಿ ಕಂಡು ಬರುತ್ತದೆ. ಆಮ್ಲೀಯತೆಯ ಸಮಸ್ಯೆಯನ್ನು ನಿವಾರಿಸಲು ಜನರು ಅನೇಕ ಔಷಧಿಗಳನ್ನು ಬಳಸುತ್ತಾರೆ. ಆದರೂ ಕೆಲವರು ಈ ಸಮಸ್ಯೆಯಿಂದ ಪರಿಹಾರ ಪಡೆಯದೇ ಕಷ್ಟಪಡುತ್ತಾರೆ. ಆಮ್ಲೀಯತೆಯ ಸಮಸ್ಯೆಯಿಂದಾಗಿ ಜನರು ತಮಗೆ ಬೇಕಾದ ಆಹಾರವನ್ನು ತಿನ್ನಲು ಸಾಧ್ಯವಾಗುವುದಿಲ್ಲ. ಆದರೆ ಈಗ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಇಂದು ನಾವು ನಿಮಗೆ ವಿಶೇಷ ಮನೆ ಮದ್ದನ್ನು ಹೇಳಲಿದ್ದೇವೆ. ಇದನ್ನು ಬಳಸುವ ಮೂಲಕ ನೀವು ಅಸಿಡಿಟಿ ಸಮಸ್ಯೆಗೆ ಪರಿಹಾರ ಪಡೆಯಬಹುದು.

ಭಾರತೀಯ ಆಹಾರ ಪದ್ಧತಿಯಲ್ಲಿ ತ್ರಿಫಲವನ್ನು ಬಳಸಲಾಗುತ್ತದೆ. ತ್ರಿಫಲವು ಉತ್ಕರ್ಷಣ ನಿರೋಧಕ, ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ತ್ರಿಫಲವು (Triphala) ಆಮ್ಲೀಯತೆಯ ಹೊರತಾಗಿ  ಹೊಟ್ಟೆಯ ಕಿರಿಕಿರಿಯ ಸಮಸ್ಯೆಯನ್ನು ನಿವಾರಿಸುತ್ತದೆ. ಇದಕ್ಕಾಗಿ ಅದನ್ನು ಯಾವಾಗ ಮತ್ತು ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ - Hair Care Tips: ಈ ತರಕಾರಿಯ ಸಿಪ್ಪೆಯಿಂದ ದೂರವಾಗುತ್ತೆ ನಿಮ್ಮ ಬಿಳಿಕೂದಲಿನ ಸಮಸ್ಯೆ

ಆಮ್ಲೀಯತೆಯನ್ನು ಗುಣಪಡಿಸಲು ತ್ರಿಫಲಾವನ್ನು ಹೇಗೆ ಸೇವಿಸುವುದು?
ಆಮ್ಲೀಯತೆ (Acidity) ಮತ್ತು ಹೊಟ್ಟೆಯ ಕಿರಿಕಿರಿಯಿಂದ ಬಳಲುತ್ತಿರುವ ವ್ಯಕ್ತಿಯು ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಅರ್ಧ ಟೀ ಚಮಚ ತ್ರಿಫಲಾ ಪುಡಿಯನ್ನು ನೀರಿನೊಂದಿಗೆ ತೆಗೆದುಕೊಳ್ಳಬೇಕು. ಇದು ಅವರಿಗೆ ಶೀಘ್ರ ವಿಶ್ರಾಂತಿ ನೀಡುತ್ತದೆ.

ತ್ರಿಫಲಾದ ಪ್ರಯೋಜನಗಳು:
- ತ್ರಿಫಲಾ ಉಸಿರಾಟದ ಕಾಯಿಲೆಗಳಲ್ಲಿ ಪ್ರಯೋಜನಕಾರಿಯಾಗಿದೆ ಮತ್ತು ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ.

ಇದನ್ನೂ ಓದಿ - Watermelon : ಕಲ್ಲಂಗಡಿ ತಿಂದ ಮೇಲೆ ನೀರು ಏಕೆ ಕುಡಿಬಾರದು ಯಾಕೆ ಗೊತ್ತಾ? ಇಲ್ಲಿದೆ ನೋಡಿ

- ಮಧುಮೇಹ ಚಿಕಿತ್ಸೆಯಲ್ಲಿ ತ್ರಿಫಲಾ ಬಹಳ ಪರಿಣಾಮಕಾರಿ. ಇದು ಮೇದೋಜ್ಜೀರಕ ಗ್ರಂಥಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಇದು ಇನ್ಸುಲಿನ್ ಉತ್ಪಾದಿಸುತ್ತದೆ.

- ತ್ರಿಫಲದಲ್ಲಿ ಜೀವಕೋಶಗಳ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಬಹಳಷ್ಟು ಉತ್ಕರ್ಷಣ ನಿರೋಧಕಗಳು ಇರುತ್ತವೆ.

- ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ತ್ರಿಫಲಾ ಅತ್ಯಂತ ಪರಿಣಾಮಕಾರಿ ಔಷಧವಾಗಿದೆ. ಇದನ್ನು ತಿನ್ನುವುದರಿಂದ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಸಾಕಷ್ಟು ಪರಿಹಾರವನ್ನು ನೀಡುತ್ತದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News