ಔಷಧಿ ಇಲ್ಲದೆ ಯೂರಿಕ್ ಆಸಿಡ್ ನಿಯಂತ್ರಿಸುವ ಸುಲಭ ಪರಿಹಾರ ಇದು

Uric Acid Control Tips :.ಯೂರಿಕ್ ಆಸಿಡ್ ಕೀಲುಗಳಲ್ಲಿ ಸಂಗ್ರಹವಾದಾಗ ಅಸಹನೀಯ ನೋವು ಉಂಟುಮಾಡುತ್ತದೆ.ಹೀಗಾದಾಗ ಚಲನ ವಲನ ಕೂಡಾ ಕಷ್ಟವಾಗುತ್ತದೆ.

Written by - Ranjitha R K | Last Updated : Apr 4, 2024, 01:17 PM IST
  • ಯೂರಿಕ್ ಆಸಿಡ್ ಮಟ್ಟ ಹೆಚ್ಚಾದಾಗ ಅದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.
  • ಯೂರಿಕ್ ಆಸಿಡ್ ಕೀಲುಗಳಲ್ಲಿ ಸಂಗ್ರಹವಾದಾಗ ಅಸಹನೀಯ ನೋವು ಉಂಟುಮಾಡುತ್ತದೆ.
  • ಹೀಗಾದಾಗ ಚಲನ ವಲನ ಕೂಡಾ ಕಷ್ಟವಾಗುತ್ತದೆ.
ಔಷಧಿ ಇಲ್ಲದೆ ಯೂರಿಕ್ ಆಸಿಡ್ ನಿಯಂತ್ರಿಸುವ ಸುಲಭ ಪರಿಹಾರ ಇದು  title=

Uric Acid Control Tips : ನಮ್ಮ ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾದಾಗ ಅದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.ಯೂರಿಕ್ ಆಸಿಡ್ ಹೆಚ್ಚಾದಾಗ ಕೀಲುಗಳಲ್ಲಿ ಸಮಸ್ಯೆ ಉಂಟಾಗುತ್ತದೆ.ಯೂರಿಕ್ ಆಸಿಡ್ ಕೀಲುಗಳಲ್ಲಿ ಸಂಗ್ರಹವಾದಾಗ ಅಸಹನೀಯ ನೋವು ಉಂಟುಮಾಡುತ್ತದೆ.ಹೀಗಾದಾಗ ಚಲನ ವಲನ ಕೂಡಾ ಕಷ್ಟವಾಗುತ್ತದೆ. ದೀರ್ಘಕಾಲದಿಂದ ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿದ್ದರೆ ಕೀಲುಗಳಲ್ಲಿ ವಿಪರೀತ ನೋವು ಉಂಟು ಮಾಡುತ್ತದೆ. 

ಕೆಲವು ಆಯುರ್ವೇದ ಪರಿಹಾರಗಳ ಮೂಲಕ ಯೂರಿಕ್ ಆಸಿಡ್ ಸಮಸ್ಯೆಯನ್ನು ನಿವಾರಿಸಬಹುದು.ಈ ಗಿಡಮೂಲಿಕೆಗಳನ್ನು ಬಳಸಿದರೆ,ಯೂರಿಕ್ ಆಸಿಡ್ ಅನ್ನು  ಔಷಧಿಯಿಲ್ಲದೆ ನಿಯಂತ್ರಣಕ್ಕೆ ತರಬಹುದು.ಈ ಮೂಲಕ ಕೀಲು ನೋವಿನಿಂದಲೂ ಪರಿಹಾರ ಸಿಗುವುದು.  

ಇದನ್ನೂ ಓದಿ : ಸಕ್ಕರೆ ಕಾಯಿಲೆ ಇರುವವರು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿಂದರೆ ಏನಾಗುತ್ತೆ ಗೊತ್ತಾ?

ಯೂರಿಕ್ ಆಸಿಡ್ ಹೋಗಲಾಡಿಸುವ ಮೂಲಿಕೆ :
ತ್ರಿಫಲ :
ತ್ರಿಫಲವು ನಮ್ಮ ದೇಹದಲ್ಲಿರುವ ವಾತ, ಪಿತ್ತ ಮತ್ತು ಕಫ ದೋಷಗಳನ್ನು ಶಾಂತಗೊಳಿಸುವ ಒಂದು ಪುಡಿಯಾಗಿದೆ.ಈ ಪುಡಿ ದೇಹದಲ್ಲಿ ಸಂಗ್ರಹವಾಗಿರುವ ಯೂರಿಕ್ ಆಮ್ಲವನ್ನು ದೇಹದಿಂದ ತೆಗೆದುಹಾಕುತ್ತದೆ.ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ತ್ರಿಫಲವನ್ನು ಬೆರೆಸಿ ತೆಗೆದುಕೊಳ್ಳಬಹುದು.  

ಕಹಿ ಬೇವು : ಕಹಿ ಬೇವು ಅನೇಕ ಪ್ರಯೋಜನಗಳನ್ನು ಹೊಂದಿದೆ.ಕಹಿ ಬೇವು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ.ಇದು ದೇಹದಲ್ಲಿನ ಉರಿಯೂತವನ್ನು ತೆಗೆದುಹಾಕಿ, ಯೂರಿಕ್ ಆಮ್ಲವನ್ನು ನಿಯಂತ್ರಿಸುತ್ತದೆ.ಬೇವಿನ ಎಲೆಗಳ ಕಷಾಯವನ್ನು ತಯಾರಿಸಿ ಕುಡಿಯಬಹುದು.ಅಥವಾ ಬೇವಿನ ಎಲೆಗಳ ಪೇಸ್ಟ್ ಅನ್ನು ತಯಾರಿಸಿ, ಕೀಲುಗಳಿಗೆ  ಹಚ್ಚಬಹುದು. 

ಇದನ್ನೂ ಓದಿ:  Blood In Urine: ಮೂತ್ರದಿಂದ ರಕ್ತ ಈ ಖಾಯಿಲೆಗಳ ಸಂಕೇತವೂ ಆಗಿರಬಹುದು!

ಕಾಡು ಬಸಳೆ : ಕಾಡು ಬಸಳೆ ಎಲೆಗಳು ಯೂರಿಕ್ ಆಸಿಡ್ ಅನ್ನು ನಿಯಂತ್ರಣಕ್ಕೆ ತರುವಲ್ಲಿ ಪ್ರಯೋಜನಕಾರಿಯಾಗಿದೆ.ಇದು ನಮ್ಮ ಆರೋಗ್ಯಕ್ಕೆ ಇನ್ನೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ.ಈ ಎಲೆಗಳನ್ನು ನೀರಿನಲ್ಲಿ ಕುದಿಸಿ, ಆ ನೀರನ್ನು ಕುಡಿಯಬಹುದು.ಈ ನೀರನ್ನು ಕುಡಿಯುವ ಮೂಲಕ ಯೂರಿಕ್ ಆಸಿಡ್ ಅನ್ನು  ನಿಯಂತ್ರಣದಲ್ಲಿ ಇಡಬಹುದು. 

ಅಮೃತ ಬಳ್ಳಿ :  ಅಮೃತ ಬಳ್ಳಿ ದೇಹಕ್ಕೆ ಅಮೃತದಂಥಹ ಮೂಲಿಕೆಯಾಗಿದೆ. ಜ್ವರದಿಂದ ಯೂರಿಕ್ ಆಸಿಡ್ ಸಮಸ್ಯೆಗಳವರೆಗೆ, ಅಮೃತ ಬಳ್ಳಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಕೀಲು ನೋವಿಗೂ ಪರಿಹಾರ ನೀಡುತ್ತದೆ.  ಇದನ್ನು ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಯೂರಿಕ್ ಆಮ್ಲವನ್ನು ತೆಗೆದುಹಾಕುತ್ತದೆ.

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News