ಈ ರೋಗಗಳು ಬುಡದಿಂದಲೇ ಗುಣವಾಗಬೇಕಾದರೆ ಹಣ್ಣಲ್ಲ, ಮಾವಿನಕಾಯಿ ತಿನ್ನಬೇಕು !

Raw mangoes health benefits:ಮಾವಿನಕಾಯಿ ಬಾಯಿ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕರ ಗುಣಗಳಿಂದ ಕೂಡಿದಲೂ ಕೂಡಿದೆ.ಮಾವಿನ ಕಾಯಿಯನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಬಹುದು.ಇದು ಚಯಾಪಚಯವನ್ನು ಕೂಡಾ ಹೆಚ್ಚಿಸುತ್ತದೆ. 

Written by - Ranjitha R K | Last Updated : Apr 15, 2024, 11:48 AM IST
  • ಬೇಸಿಗೆ ಬಂತೆಂದರೆ ಸಾಕು ಮಾರುಕಟ್ಟೆ ತುಂಬಾ ಮಾವಿನ ಕಾಯಿ, ಮಾವಿನ ಹಣ್ಣುಗಳದ್ದೇ ಕಾರುಬಾರು.
  • ಈ ಋತುವಿನಲ್ಲಿ ಮಾವಿನಕಾಯಿ ಕೂಡಾ ಲಭ್ಯವಿದೆ.
  • ಮಾವಿನಕಾಯಿ ಚಯಾಪಚಯವನ್ನು ಕೂಡಾ ಹೆಚ್ಚಿಸುತ್ತದೆ.
ಈ ರೋಗಗಳು ಬುಡದಿಂದಲೇ ಗುಣವಾಗಬೇಕಾದರೆ ಹಣ್ಣಲ್ಲ, ಮಾವಿನಕಾಯಿ ತಿನ್ನಬೇಕು ! title=

Raw mangoes health benefits : ಬೇಸಿಗೆ ಬಂತೆಂದರೆ ಸಾಕು ಮಾರುಕಟ್ಟೆ ತುಂಬಾ ಮಾವಿನ ಕಾಯಿ, ಮಾವಿನ ಹಣ್ಣುಗಳದ್ದೇ ಕಾರುಬಾರು. ಮಾಗಿದ ರಸಭರಿತ-ಸಿಹಿ ಮಾವಿನಹಣ್ಣಿನ ರುಚಿ ಬೇಸಿಗೆ ದಿನಗಳನ್ನು ವಿಶೇಷವಾಗಿಸುತ್ತದೆ.ಈ ಋತುವಿನಲ್ಲಿ ಮಾವಿನಕಾಯಿ ಕೂಡಾ ಲಭ್ಯವಿದೆ.ಮಾವಿನಕಾಯಿಯನ್ನು ಉಪ್ಪು ಮತ್ತು ಮೆಣಸು ಬೆರೆಸಿ ತಿನ್ನಲು ಮಕ್ಕಳು ಇಷ್ಟಪಡುತ್ತಾರೆ.ಇದು ಬಾಯಿ ರುಚಿಯನ್ನು ಹೆಚ್ಚಿಸುತ್ತದೆ.ಮಾವಿನಕಾಯಿ ಬಾಯಿ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕರ ಗುಣಗಳಿಂದ ಕೂಡಿದಲೂ ಕೂಡಿದೆ.ಮಾವಿನ ಕಾಯಿಯನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಬಹುದು.ಇದು ಚಯಾಪಚಯವನ್ನು ಕೂಡಾ ಹೆಚ್ಚಿಸುತ್ತದೆ. 

ಡಿ ಹೈಡ್ರೇಶನ್ ನಿಂದ  ಪರಿಹಾರ : 
ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದು ಸಾಮಾನ್ಯ. ಹೀಗಾದಾಗ  ನಿರ್ಜಲೀಕರಣದ ಸಮಸ್ಯೆಯನ್ನು ಹೆಚ್ಚಿಸಬಹುದು.ಮಾವಿನ ಕಾಯಿಯಲ್ಲಿ ನೀರಿನ ಅಂಶ  ಹೆಚ್ಚಿರುತ್ತದೆ. ಹೀಗಾಗಿ ಮಾವಿನ ಕಾಯಿಯನ್ನು ತಿನ್ನುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ. 

ಇದನ್ನೂ ಓದಿ : ಮೂಳೆಗಳಲ್ಲಿ ಸಂಗ್ರಹವಾಗಿರುವ ಯೂರಿಕ್ ಆಸಿಡ್ ಹರಳುಗಳನ್ನು ಒಡೆದು ಹಾಕುತ್ತದೆ ಈ ಕಪ್ಪು ಬೀಜ ! ಬೆಳಗ್ಗೆ ಎದ್ದ ತಕ್ಷಣ ಹೀಗೆ ಸೇವಿಸಿ.

ರೋಗನಿರೋಧಕ ಶಕ್ತಿ ಹೆಚ್ಚುತ್ತದೆ : 
ಉತ್ಕರ್ಷಣ ನಿರೋಧಕಗಳಲ್ಲದೆ, ಮಾವಿನಕಾಯಿಯಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಇ ಕೂಡಾ ಇದೆ. ಈ ಎಲ್ಲಾ ಅಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ರೋಗನಿರೋಧಕ ಶಕ್ತಿಯು ಹೆಚ್ಚಾದಾಗ ವ್ಯಕ್ತಿಯು ರೋಗಗಳಿಂದ ರಕ್ಷಣೆ ಪಡೆಯುತ್ತಾನೆ.

ಜೀರ್ಣ ಕ್ರಿಯೆ ಹೆಚ್ಚಾಗುತ್ತದೆ : 
ಬೇಸಿಗೆಯಲ್ಲಿ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಕೂಡಾ ಹೆಚ್ಚಾಗುತ್ತವೆ. ಬೇಸಿಗೆಯಲ್ಲಿ ಮಲಬದ್ಧತೆ,ಅಜೀರ್ಣದಂತಹ ಸಮಸ್ಯೆಗಳು ಕೂಡಾ ಹೆಚ್ಚಾಗುತ್ತವೆ.ಡಯೆಟರಿ ಫೈಬರ್ ಮಾವಿನಕಾಯಿಯಲ್ಲಿ ಕಂಡುಬರುತ್ತದೆ.ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುವ ಮೂಲಕ, ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಇತರ ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ : ನಿತ್ಯ ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನುವುದರಿಂದ ಆರೋಗ್ಯಕ್ಕಿದೆ ಈ 5 ಅದ್ಭುತ ಪ್ರಯೋಜನ

ಬಿಸಿಲು ಮತ್ತು ಬಿಸಿ ಗಾಳಿಯಿಂದ ರಕ್ಷಣೆ :
ಬೇಸಿಗೆಯಲ್ಲಿ, ಸೂರ್ಯನ ಶಾಖ ಹೆಚ್ಚಾಗುತ್ತದೆ. ಹೀಗಾದಾಗ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಸಮಸ್ಯೆಗಳನ್ನು ತಪ್ಪಿಸಲು,ಮಾವಿನಕಾಯಿ ಜ್ಯೂಸ್ ಕುಡಿಯಬಹುದು.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ : 
ಮಾವಿನಕಾಯಿ ತಿನ್ನುವುದರಿಂದ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಮಧುಮೇಹ ವಿರೋಧಿ ಗುಣಗಳು ಮಾವಿನಕಾಯಿಯಲ್ಲಿ ಕಂಡುಬರುತ್ತವೆ.ಮಾವಿನ ಕಾಯಿಯನ್ನು  ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ

(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.).

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News