ಬೇವು, ಹಾಗಲಕಾಯಿ, ಜಾಮೂನಿನ ಈ ಉಪಾಯಗಳು ಚಿಟಿಕೆ ಹೊಡೆಯೋದ್ರಲ್ಲಿ ಮಧುಮೇಹ ನಿಯಂತ್ರಿಸುತ್ತವೆ!

Taming Diabetes: ದೈನಂದಿನ ವ್ಯಾಯಾಮ, ಔಷಧ, ಆರೋಗ್ಯಕರ ಆಹಾರ ಮತ್ತು ಸಾಕಷ್ಟು ನಿದ್ರೆಯ ಹೊರತಾಗಿ, ಸಕ್ಕರೆಯನ್ನು ನಿಯಂತ್ರಿಸಲು ನೀವು ಬಳಸಬಹುದಾದ ಕೆಲವು ಮನೆಮದ್ದುಗಳಿವೆ. ಅವು ಯಾವುವು ತಿಳಿದುಕೊಳ್ಳೋಣ ಬನ್ನಿ (Health News In Kannada)  

Written by - Nitin Tabib | Last Updated : Dec 16, 2023, 10:07 PM IST
  • ಚಯಾಪಚಯ ರೋಗಗಳು ವಿಶ್ವಾದ್ಯಂತ ವೇಗವಾಗಿ ಹೆಚ್ಚುತ್ತಿವೆ ಮತ್ತು ಅವು ಜಗತ್ತಿಗೆ ಹೊಸ ಬೆದರಿಕೆಯಾಗಿ ಮಾರ್ಪಟ್ಟಿವೆ.
  • ಆದರೆ, ಪ್ರತಿದಿನ ಔಷಧಿ ತೆಗೆದುಕೊಳ್ಳುವುದಲ್ಲದೆ, ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಮಧುಮೇಹವನ್ನು ಉತ್ತಮವಾಗಿ ನಿರ್ವಹಿಸಬಹುದು.
  • ಇದರ ಹೊರತಾಗಿ, ನೀವು ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಏನು ತಿನ್ನುತ್ತೀರಿ, ಇವೆಲ್ಲವೂ ಮಧುಮೇಹವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಬೇವು, ಹಾಗಲಕಾಯಿ, ಜಾಮೂನಿನ ಈ ಉಪಾಯಗಳು ಚಿಟಿಕೆ ಹೊಡೆಯೋದ್ರಲ್ಲಿ ಮಧುಮೇಹ ನಿಯಂತ್ರಿಸುತ್ತವೆ! title=

ಬೆಂಗಳೂರು: ಈಗ ಕೋವಿಡ್ -19 ಬಹುತೇಕ ಮುಗಿದಿದ್ದರೂ ಕೂಡ ಅನೇಕ ಆರೋಗ್ಯ ತಜ್ಞರು ಮುಂದಿನ ಸಾಂಕ್ರಾಮಿಕವು ದೀರ್ಘಕಾಲದ ಕಾಯಿಲೆಗಳಾಗಿರಬಹುದು ಮತ್ತು ಅವುಗಳಲ್ಲಿ ಮುಖ್ಯವಾದ ಕಾಯಿಲೆ ಮಧುಮೇಹ ಎಂದು ಹೇಳಿದ್ದಾರೆ. ಸಕ್ಕರೆ ಪ್ರಮಾಣ ಹೆಚ್ಚಾಗುವುದು ಎಲ್ಲಾ ಕಾಯಿಲೆಗಳಲ್ಲಿ ಕೆಟ್ಟದಾಗಿದೆ.  ಏಕೆಂದರೆ ಚಯಾಪಚಯ ರೋಗಗಳು ವಿಶ್ವಾದ್ಯಂತ ವೇಗವಾಗಿ ಹೆಚ್ಚುತ್ತಿವೆ ಮತ್ತು ಅವು ಜಗತ್ತಿಗೆ ಹೊಸ ಬೆದರಿಕೆಯಾಗಿ ಮಾರ್ಪಟ್ಟಿವೆ. ಆದರೆ, ಪ್ರತಿದಿನ ಔಷಧಿ ತೆಗೆದುಕೊಳ್ಳುವುದಲ್ಲದೆ, ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಮಧುಮೇಹವನ್ನು ಉತ್ತಮವಾಗಿ ನಿರ್ವಹಿಸಬಹುದು. ಇದರ ಹೊರತಾಗಿ, ನೀವು ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಏನು ತಿನ್ನುತ್ತೀರಿ, ಇವೆಲ್ಲವೂ ಮಧುಮೇಹವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಿಯಮಿತ ವ್ಯಾಯಾಮ ಮತ್ತು ನಿದ್ರೆ, ಪೌಷ್ಟಿಕ ಆಹಾರಗಳು ಮತ್ತು ಕೆಲವು ಮಸಾಲೆಗಳು ಮತ್ತು ಗಿಡಮೂಲಿಕೆಗಳಿಂದ ಮಧುಮೇಹವನ್ನು ನಿಯಂತ್ರಿಸಬಹುದು. (Health News In Kannada)

ಮಧುಮೇಹ ನಿಯಂತ್ರಣಕ್ಕೆ ಮನೆಮದ್ದುಗಳು
ಬೇವು

ಬೇವಿನ ಎಲೆಗಳು ಮಧುಮೇಹ ನಿವಾರಣೆಗೆ ಉತ್ತಮ ಚಿಕಿತ್ಸೆಯಾಗಿವೆ. ಏಕೆಂದರೆ ಇವುಗಳಲ್ಲಿ  ಫ್ಲೇವನಾಯ್ಡ್‌ಗಳು, ಟ್ರೈಟರ್‌ಪೆನಾಯ್ಡ್‌ಗಳು, ಆಂಟಿವೈರಲ್ ಪದಾರ್ಥಗಳು ಮತ್ತು ಗ್ಲೈಕೋಸೈಡ್‌ಗಳನ್ನು ಒಳಗೊಂಡಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೇವಿನ ಪುಡಿಯನ್ನು ತಯಾರಿಸಲು, ಕೆಲವು ಒಣ ಬೇವಿನ ಎಲೆಗಳನ್ನು ಸಂಪೂರ್ಣವಾಗಿ ಪುಡಿಯಾಗುವಂತೆ ಬ್ಲೆಂಡರ್ನಲ್ಲಿ ಮಿಶ್ರಣ ಮಾಡಿಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ನೀವು ದಿನಕ್ಕೆ ಎರಡು ಬಾರಿ ಈ ಪುಡಿಯನ್ನು ಸೇವಿಸಬಹುದು.

ಹಾಗಲಕಾಯಿ ರಸ
ಹಾಗಲಕಾಯಿಯಲ್ಲಿ ಕಂಡುಬರುವ ಎರಡು ಪ್ರಮುಖ ಅಂಶಗಳಾದ ಚೆರಾಟಿನ್ ಮತ್ತು ಮೊಮೊರ್ಡಿಸಿನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ರಸವನ್ನು ಸೇವಿಸಿ. ಅದರಿಂದ ಹೆಚ್ಚಿನ ಪ್ರಯೋಜನಗಳನ್ನು, ನೀವು ಪ್ರತಿದಿನ ನಿಮ್ಮ ಆಹಾರದಲ್ಲಿ ಹಾಗಲಕಾಯಿಯಿಂದ ಮಾಡಿದ ಖಾದ್ಯ ಪದಾರ್ಥಗಳನ್ನು ಸೇರಿಸಿಕೊಳ್ಳಬಹುದು.

ಇದನ್ನೂ ಓದಿ-ಬೋಳು ತಲೆ ಸಮಸ್ಯೆಗೆ ಶಾಶ್ವತ ಪರಿಹಾರ ಈ ಮನೆಯಲ್ಲಿ ತಯಾರಾಗುವ ಎಣ್ಣೆ!

ಜಾಮೂನು
ಜಾಮೂನು ಗಳು ಅದರ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಒಂದು ಲೋಟ ನೀರಿಗೆ ಒಂದು ಚಮಚ ಜಾಮೂನ್ ಬೀಜದ ಪುಡಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಕುಡಿಯಿರಿ.

ಇದನ್ನೂ ಓದಿ-30 ದಿನಗಳವರೆಗೆ ನಿಯಮಿತವಾಗಿ ಈ 2 ಪದಾರ್ಥಗಳಿಂದ ತಯಾರಿಸಿದ ಡ್ರಿಂಕ್ ಸೇವಿಸಿ, ಬೊಜ್ಜು ಹೊಟ್ಟೆಗೆ ಟಾಟಾ-ಬೈಬೈ ಹೇಳಿ!

ಹಸಿ ಶುಂಠಿ
ಪ್ರತಿದಿನ ಶುಂಠಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಮತ್ತು ಒಂದು ಹಸಿ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಐದು ನಿಮಿಷಗಳ ಕಾಲ ಕುದಿಸಿದ ನಂತರ, ಶುಂಠಿಯನ್ನು ಪ್ರತ್ಯೇಕಿಸಿ. ಇದನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯಿರಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News