Tulsi Benefits: ಶೀತ, ಕೆಮ್ಮು ಮಾತ್ರವಲ್ಲ ಈ ಸಮಸ್ಯೆಗಳಿಗೂ ರಾಮಬಾಣ ತುಳಸಿ

Tulsi Benefits: ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನವನ್ನು ಪಡೆದಿರುವ ತುಳಸಿ ಸಸ್ಯ ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಪ್ರಯೋಜನಕಾರಿ ಆಗಿದೆ. 

Written by - Yashaswini V | Last Updated : Dec 25, 2023, 10:45 AM IST
  • ತುಳಸಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಅಂಶವಿದೆ
  • ಹಾಗಾಗಿ ಇದು ಗಾಯವನ್ನು ಗುಣಪಡಿಸುವಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
  • ತುಳಸಿಯಿಂದ ಇನ್ನೂ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ...
Tulsi Benefits: ಶೀತ, ಕೆಮ್ಮು ಮಾತ್ರವಲ್ಲ ಈ ಸಮಸ್ಯೆಗಳಿಗೂ ರಾಮಬಾಣ ತುಳಸಿ  title=

Tulsi Benefits: ಭಾರತದಲ್ಲಿ ಬಹುತೇಕ ಮನೆಗಳಲ್ಲಿ ಕಂಡು ಬರುವ ಸಸ್ಯ ಎಂದರೆ ತುಳಸಿ. ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನವನ್ನು ಪಡೆದಿರುವ ತುಳಸಿ ಸಸ್ಯ, ಔಷಧೀಯ ಗಣಿಯೂ ಹೌದು. ಹಿಂದೆಲ್ಲಾ, ಸಾಮಾನ್ಯ ಶೀತ, ನೆಗಡಿಯಿಂದ ಪರಿಹಾರಕ್ಕಾಗಿ ತುಳಸಿ ರಸವನ್ನು ಕುಡಿಸಲಾಗುತ್ತಿತ್ತು. ಆದರೆ, ತುಳಸಿ ಕೇವಲ ಶೀತ, ಕೆಮ್ಮಿನಿಂದ ಮಾತ್ರವಲ್ಲ ಇನ್ನೂ ಹಲವು ಆರೋಗ್ಯ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. 

ವಿಶೇಷವೆಂದರೆ, ತುಳಸಿ ಎಲೆಗಳು ಮಾತ್ರವಲ್ಲ, ತುಳಸಿ ಸಸ್ಯದ ಪ್ರತಿಯೊಂದು ಭಾಗವೂ ಕೂಡ ಆರೋಗ್ಯಕ್ಕೆ ಅದ್ಭುತ ಪ್ರಯೋಜನವನ್ನು ನೀಡುತ್ತದೆ. ತುಳಸಿ ಬಳಕೆಯಿಂದ ಹಲವು ಗಂಭೀರ ಆರೋಗ್ಯ ಕಾಯಿಲೆಗಳಿಂದಲೂ ಪರಿಹಾರ ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ..? 

ತುಳಸಿ ಸಸ್ಯದ ಪ್ರಯೋಜನಗಳು: 
ಆರೋಗ್ಯಕ್ಕೆ ತುಳಸಿ ಸಸ್ಯದಿಂದ ಸಿಗುವ ಅದ್ಭುತ ಪ್ರಯೋಜನಗಳು ಯಾವುವು ಎಂದು ನೋಡುವುದಾದರೆ... 
* ಗಾಯದಿಂದ ಪರಿಹಾರ: 

ಮಕ್ಕಳು ಆಟವಾಡುವಾಗ ಬೀಳುವುದು, ಗಾಯ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಈ ಸಮಯದಲ್ಲಿ ತಕ್ಷಣ ತುಳಸಿ ದಳವನ್ನು ಒಸೆದು ಅದರ ರಸವನ್ನು ಗಾಯದ ಮೇಲೆ ಹಿಂಡಿದರೆ ಗಾಯ ಬೇಗ ವಾಸಿಯಾಗುತ್ತದೆ. ವಾಸ್ತವವಾಗಿ, ತುಳಸಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಅಂಶಗಳಿದ್ದು ಇದು ಗಾಯವನ್ನು ಬಹುಬೇಗ ಗುಣಪಡಿಸುತ್ತದೆ. 

ಇದನ್ನೂ ಓದಿ- ಕಪ್ಪು ಬಣ್ಣದ ಈ ಒಣಹಣ್ಣನ್ನು ನಿತ್ಯ ತಿಂದರೆ ಬಿಳಿಕೂದಲು ಶಾಶ್ವತವಾಗಿ ಕಪ್ಪಾಗುತ್ತೆ

* ಚರ್ಮಕ್ಕೆ ಪ್ರಯೋಜನಕಾರಿ: 
ತುಳಸಿ ಸಸ್ಯವು ಚರ್ಮ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ಪಡೆಯಲು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ನಿಯಮಿತವಾಗಿ ತುಳಸಿ ಬಳಸುವುದರಿಂದ ಇದು ಮೊಡವೆಗಳಿಂದ ಮುಕ್ತಿ ನೀಡಿ, ಸ್ವಚ್ಛವಾದ ಚರ್ಮವನ್ನು ಪಡೆಯಲು ಪ್ರಯೋಜನಕಾರಿ ಆಗಿದೆ. 

*  ನೋವಿನಿಂದ ಪರಿಹಾರ: 
ಸಾಮಾನ್ಯವಾಗಿ ಕಾಡುವ ಕಾಲು ನೋವು, ಬೆನ್ನು ನೋವಿನಂತಹ ಸಂದರ್ಭದಲ್ಲಿ ಕೆಲವು ತುಳಸಿ ಎಲೆಗಳನ್ನು ಸಾಸಿವೆ ಎಣ್ಣೆಯೊಂದಿಗೆ ಹುರಿದು  ಅದಕ್ಕೆ ಬೆಳ್ಳುಳ್ಳಿ ರಸವನ್ನು ಸೇರಿಸಿ ನೋವಿರುವ ಜಾಗಕ್ಕೆ ಲೇಪಿಸಿದರೆ ಶೀಘ್ರದಲ್ಲೇ ಪರಿಹಾರ ಪಡೆಯಬಹುದು. 

* ಬಾಯಿಯ ದುರ್ವಾಸನೆಯಿಂದ ಪರಿಹಾರ: 
ಬಾಯಿಯ ದುರ್ವಾಸನೆ ಹೋಗಲಾಡಿಸುವಲ್ಲಿ ತುಳಸಿ ಎಲೆಗಳು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ. ನಿತ್ಯ ಒಂದೆರಡು ತುಳಸಿ ಎಲೆಗಳನ್ನು ಅಗಿಯುವುದರಿಂದ ಕೆಲವೇ ದಿನಗಳಲ್ಲಿ ಬಾಯಿಯ ದುರ್ವಾಸನೆ ದೂರವಾಗುತ್ತದೆ. 

ಇದನ್ನೂ ಓದಿ- ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಹೆಚ್ಚಾಗಿ ಏನು ತಿಂದರೆ ಒಳ್ಳೆಯದು?

* ದೈಹಿಕ ದೌರ್ಬಲ್ಯ: 
ನಿಯಮಿತವಾಗಿ ತುಳಸಿ ಬೀಜಗಳನ್ನು ಬಳಸುವುದರಿಂದ ಪುರುಷರಲ್ಲಿ ದೈಹಿಕ ದೌರ್ಬಲ್ಯವನ್ನು ಕಡಿಮೆ ಮಾಡಬಹುದು. 

ಸೂಚನೆ:  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News