ಹಿತ್ತಲಲ್ಲಿ ಸಿಗುವ ಈ ಎಲೆಯನ್ನೊಮ್ಮೆ ಬಳಸಿ ನೋಡಿ, ಹೊಟ್ಟೆ ಸೊಂಟದ ಭಾಗದ ಹಠಮಾರಿ ಬೊಜ್ಜು ಕರಗುವುದರಲ್ಲಿ ಸಂದೇಹವೇ ಬೇಡ

ನಮ್ಮ ಹಿತ್ತಲಲ್ಲಿಯೇ ಸುಲಭವಾಗಿ ಸಿಗುವ ಈ ಎಲೆಯನ್ನು ಬಳಸುವ ಮೂಲಕ ತೂಕ ಹೆಚ್ಚಳದ ಸಮಸ್ಯೆಯನ್ನು ನಿಯಂತ್ರಿಸಬಹುದು. 

Written by - Ranjitha R K | Last Updated : Apr 18, 2024, 12:24 PM IST
  • ತೂಕ ಹೆಚ್ಚಾಗುವುದು ಬಹುತೇಕರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ
  • ಈ ಎಲೆಯನ್ನು ಬಳಸುವ ಮೂಲಕ ತೂಕ ಹೆಚ್ಚಳದ ಸಮಸ್ಯೆಯನ್ನು ನಿಯಂತ್ರಿಸಬಹುದು.
  • ತೂಕವನ್ನು ಕಡಿಮೆ ಮಾಡಲು ಕರಿಬೇವಿನ ಎಲೆಗಳು
ಹಿತ್ತಲಲ್ಲಿ ಸಿಗುವ ಈ ಎಲೆಯನ್ನೊಮ್ಮೆ ಬಳಸಿ ನೋಡಿ, ಹೊಟ್ಟೆ ಸೊಂಟದ ಭಾಗದ ಹಠಮಾರಿ ಬೊಜ್ಜು ಕರಗುವುದರಲ್ಲಿ ಸಂದೇಹವೇ ಬೇಡ   title=

Curry Leaf Juice For Weight Loss :ತೂಕ ಹೆಚ್ಚಾಗುವುದು ಬಹುತೇಕರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ.ತೂಕ ಹೆಚ್ಚಾದರೆ ಅಧಿಕ ಕೊಲೆಸ್ಟ್ರಾಲ್,ಬಿಪಿ, ಮಧುಮೇಹ,ಹೃದಯಾಘಾತದಂತಹ ಸಮಸ್ಯೆಗಳ ಅಪಾಯ ಕೂಡಾ ಜೊತೆಯಲ್ಲಿಯೇ ಬರುತ್ತದೆ. ಹೀಗಾದಾಗ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.ಇಲ್ಲದಿದ್ದರೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತದೆ.ನಮ್ಮ ಹಿತ್ತಲಲ್ಲಿಯೇ ಸುಲಭವಾಗಿ ಸಿಗುವ ಈ ಎಲೆಯನ್ನು ಬಳಸುವ ಮೂಲಕ ತೂಕ ಹೆಚ್ಚಳದ ಸಮಸ್ಯೆಯನ್ನು ನಿಯಂತ್ರಿಸಬಹುದು. 

ತೂಕವನ್ನು ಕಡಿಮೆ ಮಾಡಲು ಕರಿಬೇವಿನ ಎಲೆಗಳು : 
ಕರಿಬೇವಿನ ಎಲೆಗಳನ್ನು ಅಡುಗೆಯ ಒಗ್ಗರಣೆಗೆ ಬಳಸುತ್ತೇವೆ.ಈ ಎಲೆಯನ್ನು ಉಪಯೋಗಿಸಿ ಚಟ್ನಿ ಪುಡಿಯನ್ನು ಕೂಡಾ ತಯಾರಿಸಲಾಗುತ್ತದೆ.ಒಗ್ಗರಣೆಗೆ ಬಳಸುವ ಕರಿಬೇವು ಅಡುಗೆಯ ಘಮ ಮತ್ತು ರುಚಿ ಹೆಚ್ಚಿಸುತ್ತದೆ.ಮಾತ್ರವಲ್ಲ  ದೇಹದ ಅನೇಕ ಆರೋಗ್ಯ ಸಮಸ್ಯೆಗಳನ್ನು ಕೂಡಾ ಇದು ಗುಣಪಡಿಸುತ್ತದೆ.  ಅವುಗಳಲ್ಲಿ ಬಹಳ ಮುಖ್ಯವಾದದ್ದು ಬೊಜ್ಜು. 

ಇದನ್ನೂ ಓದಿ : ರಾತ್ರಿ ಮಲಗುವ ಮುನ್ನ ಈ ಪುಟ್ಟ ಹಣ್ಣನ್ನು ಹೀಗೆ ಸೇವಿಸಿ !ಬೆಳಗ್ಗೆ ಯೂರಿಕ್ ಆಸಿಡ್ ಸರಾಗವಾಗಿ ದೇಹದಿಂದ ಹೊರ ಬೀಳುವುದು

ಕರಿಬೇವಿನ ಸೊಪ್ಪಿನಲ್ಲಿ ಪೋಷಕಾಂಶಗಳು: 
ಕರಿಬೇವಿನ ಎಲೆಗಳಲ್ಲಿ ಕಬ್ಬಿಣ,ಕ್ಯಾಲ್ಸಿಯಂ,ರಂಜಕ,ವಿಟಮಿನ್ ಸಿ ಮುಂತಾದ ಹಲವು ಪ್ರಮುಖ ಪೋಷಕಾಂಶಗಳು ಕಂಡು ಬರುತ್ತವೆ.ಇವು ನಮ್ಮ ದೇಹಕ್ಕೆ ನಾನಾ ರೀತಿಯಲ್ಲಿ  ಪ್ರಯೋಜನಕಾರಿಯಾಗಿದೆ. 

ಬೊಜ್ಜು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ:
ದಪ್ಪಗಿರುವವರ ಕೊಬ್ಬು ಅಥವಾ ಬೊಜ್ಜು ಸಂಗ್ರಹವಾಗುವುದೇ ಹೊಟ್ಟೆ ಮತ್ತು ಸೊಂಟದ ಸುತ್ತ.ಹೀಗೆ ಹೊಟ್ಟೆ ಮತ್ತು ಸೊಂಟದ ಸುತ್ತ ಸೇರಿಕೊಂಡಿರುವ ಬೊಜ್ಜು ಕರಗಿಸುವುದು ಅಷ್ಟು ಸುಲಭವಲ್ಲ. ಆದರೆ, ಈ ಹಠಮಾರಿ ಬೊಜ್ಜನ್ನು ಕೂಡಾ  ಕರಿಬೇವಿನ ಎಲೆಗಳ ಸಹಾಯದಿಂದ ಸುಲಭವಾಗಿ ಕಡಿಮೆ ಮಾಡಬಹುದು.  ಕರಿಬೇವಿನ ಎಲೆಗಳಲ್ಲಿ ಆಲ್ಕಲಾಯ್ಡ್‌ಗಳು ಕಂಡುಬರುತ್ತವೆ.ಇದರ ಸಹಾಯದಿಂದ ಲಿಪಿಡ್‌ಗಳು ಮತ್ತು ಕೊಬ್ಬನ್ನು ಕಡಿಮೆ ಮಾಡಬಹುದು.ಕರಿಬೇವಿನ ಎಲೆಯ ಜ್ಯೂಸ್ ಕುಡಿದರೆ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವೂ ಕಡಿಮೆಯಾಗುತ್ತದೆ. ಈ ಮೂಲಕ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿ ಇರುತ್ತದೆ. 

ಇದನ್ನೂ ಓದಿ : ನಿಂಬೆ ರಸವನ್ನು ಇದರ ಜೊತೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಸಾಕು.. ಯುರಿಕ್‌ ಆಸಿಡ್‌ ಕರಗಿ ದೇಹದಿಂದ ಹೊರ ಹೋಗುವುದು!

ಕರಿಬೇವಿನ ರಸವನ್ನು ತಯಾರಿಸುವುದು ಹೇಗೆ? : 
ಕರಿಬೇವಿನ ಜ್ಯೂಸ್ ತಯಾರಿಸಲು,ಕರಿಬೇವಿನ ಎಲೆಗಳನ್ನು ತೊಳೆದು ನೀರಿನಲ್ಲಿ ಕುದಿಸಬೇಕು. ಸ್ವಲ್ಪ ಸಮಯದ ನಂತರ ಈ ನೀರನ್ನು ಫಿಲ್ಟರ್ ಮಾಡಿ ಉಗುರು ಬೆಚ್ಚಗಿರುವಾಗಲೇ ಕುಡಿಯಬಹುದು. ಅಥವಾ ಇದರ ಎಲೆಗಳನ್ನು ಮಿಕಿಸ್ಯಲ್ಲಿ ಹಾಕಿ ರುಬ್ಬು ರಸ ತೆಗೆದು ಆ ರಸಕ್ಕೆ ನಿಂಬೆ ಮತ್ತು ಜೇನುತುಪ್ಪ ಬೆರೆಸಿ ಸೇವಿಸಬಹುದು. ಆದರೆ ನೆನಪಿರಲಿ ಕರಿಬೇವಿನ ಎಲೆಯ ರಸವನ್ನು ಖಾಲಿ ಹೊಟ್ಟೆಯಲ್ಲಿಯೇ ಸೇವಿಸಬೇಕು.

 

(ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

  

Trending News