ಗೊರಖ್ಪುರದ BRD ಮೆಡಿಕಲ್ ಕಾಲೇಜ್ನಲ್ಲಿ 4 ದಿನದಲ್ಲಿ 58 ಮಕ್ಕಳ ಸಾವು

                     

Last Updated : Nov 6, 2017, 05:21 PM IST
ಗೊರಖ್ಪುರದ BRD ಮೆಡಿಕಲ್ ಕಾಲೇಜ್ನಲ್ಲಿ 4 ದಿನದಲ್ಲಿ 58 ಮಕ್ಕಳ ಸಾವು title=

ನವ ದೆಹಲಿ: ಗೋರಖಪುರದ ಬಿಆರ್ಡಿ ಮೆಡಿಕಲ್ ಕಾಲೇಜ್ ನಲ್ಲಿ ಮುಗ್ಧ ಜನರ ಮಾರಣ ಹೋಮ ಮತ್ತೆ ಪ್ರಾರಂಭವಾಗಿದೆ. ನವೆಂಬರ್ 1 ರಿಂದ ನ. 4 ವರೆಗೆ 58 ಮಕ್ಕಳು ಸಾವನ್ನಪ್ಪಿದ್ದಾರೆ ಎಂಬುದು ಝೀ ನ್ಯೂಸ್ ವರದಿಯ ಅಂಕಿ-ಅಂಶದಿಂದ ತಿಳಿದುಬಂದಿದೆ. ಇವರಲ್ಲಿ ತಿಂಗಲೊಳಗಿನ 32 ಮಕ್ಕಳು ಮತ್ತು 1 ತಿಂಗಳಿಗಿಂತ ದೊಡ್ಡ ಮಕ್ಕಳಲ್ಲಿ 26 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕಳೆದ 48 ಗಂಟೆಗಳಲ್ಲಿ 30 ಮುಗ್ಧ ಮಕ್ಕಳು ಸಾವನ್ನಪ್ಪಿದ್ದಾರೆ. ನ. 2 ಮತ್ತು 3 ರಂದು ಆಸ್ಪತ್ರೆಯಲ್ಲಿ 15 ನವಜಾತ ಶಿಶುಗಳು ಜನ್ಮತಾಳಿದ್ದು, ಅದರಲ್ಲಿ 7 ಮಕ್ಕಳು ಮೃತಪಟ್ಟಿದ್ದಾರೆ. ನ. 2 ರಂದು, 1 ತಿಂಗಳಿಗಿಂತ ಹೆಚ್ಚು ವಯಸ್ಸಿನ 30 ಮಕ್ಕಳು ದಾಖಲಾಗಿದ್ದು, ಅವರಲ್ಲಿ 5 ಮಕ್ಕಳು ಮೃತ ಪಟ್ಟಿದ್ದಾರೆ. ನ. 3 ರಂದು 10 ನವಜಾತ ಶಿಶು ಜನ್ಮತಾಳಿದ್ದು, ಅದರಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.

ನ. 1 ರಂದು 36 1 ತಿಂಗಳಿಗಿಂತ ದೊಡ್ಡ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದು ಅದರಲ್ಲಿ 10 ಮಕ್ಕಳು ಸಾವನ್ನಪ್ಪಿದ್ದಾರೆ. ಜನರು ತಮ್ಮ ಕಣ್ಮುಂದೆಯೇ ತಮ್ಮ ಮುಗ್ಧ ಮಕ್ಕಳು ಸಾವನ್ನಪ್ಪುತ್ತಿರುವುದನ್ನು ನೋಡಿಯೂ ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ವೈದ್ಯರು, ಆಡಳಿತ, ಸರ್ಕಾರದ ಸೌಕರ್ಯ ಎಲ್ಲವೂ ಇದ್ದೂ ಮಕ್ಕಳ ಮಾರಣ ಹೋಮ ಮುಂದುವರೆದಿರುವುದು ವಿಷಾದನೀಯ ಸಂಗತಿ. 

ಬಿಆರ್ಡಿ ಮೆಡಿಕಲ್ ಕಾಲೇಜಿನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ವೈದ್ಯಕೀಯ ಕಾಲೇಜು ಆಡಳಿತದ ಪ್ರವೇಶವು ಎನ್ಸೆಫಾಲಿಟಿಸ್ ನಿಂದ ಸಾವುಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ಈ ಸಾವುಗಳು ಸಾಧಾರಣವೆಂದು ಹೇಳಲಾಗದು ಎಂದು ಕಾಲೇಜಿನ ಜವಾಬ್ದಾರಿಯುತ ಅಧಿಕಾರಿಗಳು ನಂಬುತ್ತಾರೆ. ಬಿ.ಆರ್.ಡಿ ಮೆಡಿಕಲ್ ಕಾಲೇಜಿನಲ್ಲಿ ಸಮುದಾಯ ವೈದ್ಯಕೀಯ ಇಲಾಖೆಯ ಮುಖ್ಯಸ್ಥ ಡಾ. ಡಿ.ಕೆ. ಶ್ರೀವಾಸ್ತವ ಅವರು 169 ರೋಗಿಗಳನ್ನು ದಾಖಲಿಸಿಕೊಂಡಿದ್ದು, ಇದರಲ್ಲಿ 58 ಮಂದಿ ಮೃತಪಟ್ಟಿದ್ದಾರೆ.

ಅಂಕಿಅಂಶಗಳ ಪ್ರಕಾರ, ಜಪಾನೀ ಜ್ವರದಿಂದ (ಇನ್ಸೆಫ್ಲೈಟಿಸ್) 10 ಮಕ್ಕಳು ಮೃತಪಟ್ಟರು. ಕಡಿಮೆ ತೂಕ, ಸೋಂಕು, ಆರಂಭಿಕ ಜನನದ ಕಾರಣದಿಂದಾಗಿ ಇತರ ಮಕ್ಕಳ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಇದಲ್ಲದೆ, ಆಸ್ಪತ್ರೆಯು ಈ ಪ್ರದೇಶದಲ್ಲಿ ಮನೆಮಾಡಿರುವ ಕೊಳಕು ಮರಣದ ಪ್ರಮುಖ ಕಾರಣವೆಂದು ವಿವರಿಸಿದೆ. ಆಸ್ಪತ್ರೆಯ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ರೋಗಿಗಳು ಆಸ್ಪತ್ರೆಗೆ ದಾಖಲಾಗುವುದು ಸಂದಿಗ್ಧ ಸ್ಥಿತಿಯಲ್ಲಿ ತಂದಿವೆ ಎಂದು ಆಸ್ಪತ್ರೆಯೂ ವಾದಿಸಿದೆ. ಆಸ್ಪತ್ರೆ ಆಡಳಿತವು ನಮ್ಮ ವೈದ್ಯಕೀಯ ಸೇವೆ 5 ದಶಲಕ್ಷಕ್ಕೂ ಹೆಚ್ಚು ಜನರಿಗೆ ಸೇವೆ ಸಲ್ಲಿಸುತ್ತದೆ ಎಂದು ತಿಳಿಸಿದೆ. ಪೂರ್ವ ಉತ್ತರ ಪ್ರದೇಶದ ಜೊತೆಗೆ, ರೋಗಿಗಳು ಬಿಹಾರ, ನೇಪಾಳದಿಂದ ಬರುತ್ತಿದ್ದಾರೆ ಎಂದೂ ಸಹ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಆಗಸ್ಟ್ 10-11 ರ ರಾತ್ರಿಯ ವೇಳೆ ಆಮ್ಲಜನಕದ ಕೊರತೆಯಿಂದ 36 ಮಕ್ಕಳು ಮೃತಪಟ್ಟಾಗ ಗೋರಖ್ಪುರದ ಬಿಆರ್ಡಿ ಮೆಡಿಕಲ್ ಕಾಲೇಜ್ ಬೆಳಕಿಗೆ ಬಂದಿತು. ಈ ಪ್ರಕರಣದಿಂದ ದಣಿದ ಬಿಆರ್ಡಿ ಮೆಡಿಕಲ್ ಕಾಲೇಜಿನ ಅಂದಿನ ಪ್ರಿನ್ಸಿಪಾಲ್ ಡಾ. ರಾಜೀವ್ ಮಿಶ್ರಾ, ಅವರ ಪತ್ನಿ ಡಾ.ಪೂರ್ಣಿಮ ಶುಕ್ಲಾ ಮತ್ತು ಡಾ. ಕಪಿಲ್ ಖಾನ್ ಜೊತೆಗೆ 9 ಮಂದಿ ಜೈಲಿಗೆ ಹೋಗಬೇಕಾಯಿತು. 

Trending News