ಮದ್ಯ ಪ್ರಿಯರಿಗೆ ಸರ್ಕಾರದಿಂದ ಬಿಗ್ ಶಾಕ್..!! ರಾಜ್ಯದ ಈ ಭಾಗದಲ್ಲಿ ಮದ್ಯ ಮಾರಾಟ ನಿಷೇಧ

ಇದು ಮದ್ಯ ವ್ಯಸನಿಗಳಿಗೆ ಶಾಕ್‌ ನೀಡುವ ಸುದ್ದಿ... ರಾಜ್ಯದ ಈ ಭಾಗಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ... ಸರ್ಕಾರ ಈ ನಿರ್ಧಾರ ಕೈಗೊಳ್ಳಲು ಕಾರಣವೇನು? ಹೆಚ್ಚಿನ ಮಾಹಿತಿ ಈ ಕೆಳಗಿದೆ ನೋಡಿ..

Written by - Krishna N K | Last Updated : Oct 9, 2024, 06:53 PM IST
    • ಈ ಗ್ರಾಮದಲ್ಲಿ ಯಾರೂ ಮದ್ಯ ಸೇವಿಸುವುದಿಲ್ಲ.
    • ಈ ತಾಂಡಾಗಳಲ್ಲಿ ಮದ್ಯ ಸೇವನೆ ನಿಷೇಧಿಸಲಾಗಿದೆ..
    • 30 ವರ್ಷಗಳಿಂದ ಈ ತಾಂಡಾದಲ್ಲಿ ಮದ್ಯ ಸೇವನೆ ಇಲ್ಲ..
ಮದ್ಯ ಪ್ರಿಯರಿಗೆ ಸರ್ಕಾರದಿಂದ ಬಿಗ್ ಶಾಕ್..!! ರಾಜ್ಯದ ಈ ಭಾಗದಲ್ಲಿ ಮದ್ಯ ಮಾರಾಟ ನಿಷೇಧ title=

Viral News : ಈಗ ನಾವು ಮಾತನಾಡಲು ಹೊರಟಿರುವ ಗ್ರಾಮ ಆದರ್ಶ ಗ್ರಾಮ. ಏಕೆಂದರೆ ಈ ಗ್ರಾಮದಲ್ಲಿ ಯಾರೂ ಮದ್ಯ ಸೇವಿಸುವುದಿಲ್ಲ. ಹೌದು.. ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ದಾಸ್ ಗಡ್ಡಾ ಗಿರಿಜನ ತಾಂಡಾಗಳಲ್ಲಿ ಮದ್ಯ ಸೇವನೆ ನಿಷೇಧಿಸಲಾಗಿದೆ. ಈ ಗಿರಿಜನ ತಾಂಡಾದಲ್ಲಿ ಕಳೆದ 30 ವರ್ಷಗಳಿಂದ ಮದ್ಯಪಾನ ನಿಷೇಧಿಸಲಾಗಿದೆ. 

ಈ ಊರಿನಲ್ಲಿ ಪ್ರಸಿದ್ಧ ಜಗದಂಬಾ ಭವಾನಿ ದೇವಸ್ಥಾನ ಇದೆ.. ಇದನ್ನು 30 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇಲ್ಲಿ ಆದಿವಾಸಿಗಳು ಜಾತಿ ದೇವತೆ ಜಗದಂಬೆಯನ್ನು ಪೂಜಿಸಿ ಅತ್ಯಂತ ಸಂಭ್ರಮದಿಂದ ನವರಾತ್ರಿಯನ್ನು ಆಚರಿಸುತ್ತಾರೆ.. ಮನೆ ದೇವರಿಗೆ ಗೌರವ ನೀಡುವ ಸಲುವಾಗಿ ಈ ತಾಂಡಾದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಇದನ್ನೂ ಓದಿ:  BIGG BOSS ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಯಾರು ಗೊತ್ತೇ? ಹೆಸರು ಕೇಳಿದ್ರೆ ಶಾಕ್‌ ಆಗ್ತೀರಾ!!   

ಕಳೆದ ಮುನ್ನೂರು ವರ್ಷಗಳಿಂದ ಈ ತಾಂಡಾದಲ್ಲಿ ದಾಸ್‌ ನಾಯಕ್ ಕುಟುಂಬ ವಾಸವಾಗಿತ್ತು. ಅಂದಿನಿಂದ, ಆ ಕುಟುಂಬವು 1000 ಜನಸಂಖ್ಯೆಯನ್ನು ಹೊಂದಿದೆ. ಹಾಗಾಗಿ ಈ ತಾಂಡಾಕ್ಕೆ ದಾಸ್ ಗಡ್ಡ ತಾಂಡಾ ಎಂದು ನಾಮಕರಣ ಮಾಡಲಾಗಿದೆ. ಕಳೆದ 30 ವರ್ಷಗಳಿಂದ ಈ ತಾಂಡಾದಲ್ಲಿ ಮದ್ಯ ಸೇವನೆ ಮಾಡುತ್ತಿಲ್ಲ...

ಮನೆ ದೇವರು ಜಗದಂಬಾ ಭವಾನಿ ದೇವಸ್ಥಾನ ಕಟ್ಟಿದಾಗ ಮದ್ಯಪಾನ ನಿಷೇಧ ಮಾಡಬೇಕು ಎಂದು ಹಿರಿಯರು ಹೇಳಿದ್ದರಿಂದ ತಾಂಡಾ ನಿವಾಸಿಗಳು ಒಗ್ಗಟ್ಟಾಗಿ ಈ ನಿರ್ಧಾರ ಕೈಗೊಂಡಿದ್ದೇವೆ.. ಈ ದಾಸು ಗಡ್ಡ ತಾಂಡಾದ ದಾಸು ನಾಯಕ್ ಅವರು ಜಗದಂಬಾ ಸೇವಾಲಾಲ್ ಮಹಾರಾಜರನ್ನು ಕುಟುಂಬ ಸಮೇತ ಪೂಜೆ ಮಾಡುವುದರಿಂದ ನಮ್ಮ ಪರಂಪರೆಯಲ್ಲಿ ಯಾರಿಗೂ ಮದ್ಯಪಾನ ಮಾಡಲು ಅವಕಾಶವಿಲ್ಲ ಎಂದು News18 ತೆಲುಗು ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ...

ಇದನ್ನೂ ಓದಿ:ಹಾಲಿನಂತ ಬಣ್ಣ, ಒಂದು ಕಪ್ಪು ಚುಕ್ಕೆ ಇಲ್ಲದ ಮೈಸಿರಿ..! ಬ್ರಹ್ಮನ ಸೃಷ್ಟಿ ಅದ್ಭುತ.. ಯಾರ್‌ ಗೊತ್ತೆ ಈ ಗಂಧರ್ವ ಕನ್ಯೆ..?

ಅದೇ ರೀತಿ ಈ ತಾಂಡಾದಲ್ಲಿ ದಸರಾ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.. ಈ ದಸರಾ ಹಬ್ಬದ 9 ದಿನ ಉಪವಾಸವಿದ್ದು ದೇವಿಯ ಆರಾಧನೆ ಮಾಡಲಾಗುತ್ತದೆ. ಈ ಗ್ರಾಮದಲ್ಲಿ ಮಹಿಳೆಯರು ಕೂಡ ಪ್ರತಿದಿನ ದೇವಿಗೆ ನೈವೇದ್ಯ ಅರ್ಪಿಸಿ ನಂತರ ಊಟ ಮಾಡುತ್ತಾರೆ ಎನ್ನುತ್ತಾರೆ ಗ್ರಾಮಸ್ಥರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News