ಹೆಚ್ಚಿನ ಕಂಪನಿಗಳಿಗೆ ಲಸಿಕೆ ತಯಾರಿಸುವ ನಿಟ್ಟಿನಲ್ಲಿ ಕಾನೂನು ತರಲು ಪ್ರಧಾನಿ ಮೋದಿಗೆ ಗಡ್ಕರಿ ಮನವಿ

ಕೊರತೆಯನ್ನು ನೀಗಿಸಲು ಹೆಚ್ಚಿನ ಔಷಧ ಕಂಪನಿಗಳಿಗೆ ಕೋವಿಡ್ -19 ಲಸಿಕೆಗಳನ್ನು ತಯಾರಿಸಲು ಅವಕಾಶ ನೀಡುವ ಕಾನೂನು ತರಲು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ (ಮೇ 18) ಹೇಳಿದ್ದಾರೆ.

Last Updated : May 18, 2021, 10:29 PM IST
ಹೆಚ್ಚಿನ ಕಂಪನಿಗಳಿಗೆ ಲಸಿಕೆ ತಯಾರಿಸುವ ನಿಟ್ಟಿನಲ್ಲಿ ಕಾನೂನು ತರಲು ಪ್ರಧಾನಿ ಮೋದಿಗೆ ಗಡ್ಕರಿ ಮನವಿ   title=
file photo

ನವದೆಹಲಿ: ಕೊರತೆಯನ್ನು ನೀಗಿಸಲು ಹೆಚ್ಚಿನ ಔಷಧ ಕಂಪನಿಗಳಿಗೆ ಕೋವಿಡ್ -19 ಲಸಿಕೆಗಳನ್ನು ತಯಾರಿಸಲು ಅವಕಾಶ ನೀಡುವ ಕಾನೂನು ತರಲು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ (ಮೇ 18) ಹೇಳಿದ್ದಾರೆ.

ಭಾರತದ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದರು.

"ಹೆಚ್ಚಿನ ಔಷಧ ಕಂಪನಿಗಳಿಗೆ ಔಷಧದ ಪೇಟೆಂಟ್ ಹೊಂದಿರುವವರಿಗೆ ಶೇಕಡಾ 10 ರಷ್ಟು ರಾಯಧನವನ್ನು ಪಾವತಿಸುವ ಮೂಲಕ ಜೀವ ಉಳಿಸುವ ಔಷಧಿಗಳನ್ನು ತಯಾರಿಸಲು ಅವಕಾಶ ನೀಡುವ ಕಾನೂನನ್ನು ತರಲು ಪ್ರಧಾನಿಯನ್ನು ವಿನಂತಿಸುತ್ತೇನೆ" ಎಂದು ಅವರು ಹೇಳಿದರು.

"ಲಸಿಕೆಯ ಬೇಡಿಕೆ ಅದರ ಪೂರೈಕೆಗಿಂತ ಹೆಚ್ಚಿದ್ದರೆ ಅದು ಸಮಸ್ಯೆಯನ್ನು ಸೃಷ್ಟಿಸುತ್ತದೆ. ಆದ್ದರಿಂದ, ಒಂದು ಕಂಪನಿಯ ಬದಲು, ಲಸಿಕೆಯ ಮೂಲ ಪೇಟೆಂಟ್ ಹೊಂದಿರುವವರಿಗೆ ಶೇಕಡಾ 10 ರಷ್ಟು ರಾಯಧನವನ್ನು ಪಾವತಿಸುವ ಮೂಲಕ ಇನ್ನೂ 10 ಕಂಪನಿಗಳಿಗೆ ಲಸಿಕೆ ತಯಾರಿಸಲು ಅವಕಾಶ ನೀಡಬೇಕು ”ಎಂದು ಗಡ್ಕರಿ ಪಿಟಿಐ ಹೇಳಿದ್ದಾರೆ.

ಇದನ್ನೂ ಓದಿ : ಹೊಸ ಕೊರೊನಾ ತಳಿ ಮಧ್ಯೆ ಸಿಂಗಾಪುರ್ ವಿಮಾನ ಸಂಚಾರ ಸ್ಥಗಿತಗೊಳಿಸಲು ಕೇಜ್ರಿವಾಲ್ ಮನವಿ

ಭಾರತದ ಆರೋಗ್ಯ ಕ್ಷೇತ್ರವು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಔಷಧಿಗಳನ್ನು ತಯಾರಿಸಲು ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

"ನಾವು ಆತ್ಮನಿರ್ಭರ ಭಾರತ ಮಾಡಲು ಬಯಸುತ್ತೇವೆ. ಭಾರತದ ಎಲ್ಲಾ ಜಿಲ್ಲೆಗಳು ವೈದ್ಯಕೀಯ ಆಮ್ಲಜನಕದ ಸ್ವಾವಲಂಬಿಗಳಾಗಿರಬೇಕು" ಎಂದು ಅವರು ಹೇಳಿದರು."ಸಾಂಕ್ರಾಮಿಕ ಸಮಯದಲ್ಲಿ ನಾವು ಸಕಾರಾತ್ಮಕ ಮತ್ತು ಆತ್ಮವಿಶ್ವಾಸದಿಂದ ಇರಲು ಪ್ರಯತ್ನಿಸಬೇಕು" ಎಂದು ಅವರು ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಮತ್ತು ತಜ್ಞರು ಇದೇ ರೀತಿಯ ಬೇಡಿಕೆಗಳನ್ನು ಎತ್ತಿದ್ದಾರೆ, ದೇಶದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರವು ಎರಡು ತಯಾರಕರ ಲಸಿಕೆ ಸೂತ್ರವನ್ನು ಇತರ ಸಮರ್ಥ ಔಷಧೀಯ ಕಂಪನಿಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಿದರು.

ಪ್ರಸ್ತುತ, ಭಾರತ್ ಬಯೋಟೆಕ್ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಎಂಬ ಎರಡು ಸಂಸ್ಥೆಗಳು ಮಾತ್ರ ದೇಶದಲ್ಲಿ COVID ಲಸಿಕೆಗಳನ್ನು ತಯಾರಿಸುತ್ತಿವೆ.ತಮ್ಮ ಮೂಲ ಸೂತ್ರಗಳ ಬಳಕೆಗಾಗಿ ಸಂಸ್ಥೆಗಳಿಗೆ ಇತರ ಕಂಪನಿಗಳ ಲಾಭದಿಂದ ರಾಯಧನವನ್ನು ನೀಡಬಹುದು ಎಂದು ಕೇಜ್ರಿವಾಲ್ ಸೂಚಿಸಿದ್ದರು.

ಇದನ್ನೂ ಓದಿ : ಮುಂಬೈ 'Gateway of India'ಗೆ ಅಪ್ಪಳಿಸಿದ ತೌಕ್ತೆ ಚಂಡಮಾರುತ! ಇಲ್ಲಿದೆ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News